ಸಂಗ್ರಹ ಚಿತ್ರ 
ದೇಶ

ಲಾಕ್‌ಡೌನ್: ಸಮೋಸಾ ಬೇಕೆಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಗೆ ಕರೆ ಮಾಡಿದ ಯುವಕ!

ದೇಶಾದ್ಯಂತ ಕೊರೋನಾವೈರಸ್ ಕಾರಣ ಲಾಕ್ ಡೌನ್ ಆಗಿದ್ದು ಸಮೋಸಾ, ಕಚೋರಿ ಸೇರಿ ಪ್ರಮುಖ ಸ್ನ್ಯಾಕ್ಸ್ ಗಳೇನೂ ಸಿಕ್ಕದಂತಾಗಿದೆ. ಈ ನಡುವೆ ಯುವಕನೊಬ್ಬ ತನಗೆ ಸಮೋಸಾ ತಿನ್ನಬೇಕೆಂದು ಬಹಳ ಆಸೆಯಾಗುತ್ತಿದೆ ಎಂದು  ಜಿಲ್ಲಾ ಮ್ಯಾಜಿಸ್ಟ್ರೇಟ್ ನಿಯಂತ್ರಣ ಕೊಠಡಿಗೆ ಕರೆಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. 

ರಾಂಪುರ್(ಉತ್ತರ ಪ್ರದೇಶ): ದೇಶಾದ್ಯಂತ ಕೊರೋನಾವೈರಸ್ ಕಾರಣ ಲಾಕ್ ಡೌನ್ ಆಗಿದ್ದು ಸಮೋಸಾ, ಕಚೋರಿ ಸೇರಿ ಪ್ರಮುಖ ಸ್ನ್ಯಾಕ್ಸ್ ಗಳೇನೂ ಸಿಕ್ಕದಂತಾಗಿದೆ. ಈ ನಡುವೆ ಯುವಕನೊಬ್ಬ ತನಗೆ ಸಮೋಸಾ ತಿನ್ನಬೇಕೆಂದು ಬಹಳ ಆಸೆಯಾಗುತ್ತಿದೆ ಎಂದು  ಜಿಲ್ಲಾ ಮ್ಯಾಜಿಸ್ಟ್ರೇಟ್ ನಿಯಂತ್ರಣ ಕೊಠಡಿಗೆ ಕರೆಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಕಂಟ್ರೋಲ್ ರೂಮಿನಿಂದ ಕರೆ ಸ್ವೀಕರೊಸೊದೆ ಎಂದು ತಿಳಿದಿದ್ದರೂ ಸಹ ಆತ ನಾಲ್ಕು ಸಮೋಸಾ ಹಾಗೂ ಚಟ್ನಿ ಕಳಿಸಿಕೊಡುವಂತೆ ಕೇಳಿದ್ದಾನೆ. "ನನಗೆ ಸ್ನ್ಯಾಕ್ಸ್ ತಿನ್ನಬೇಕೆಂದು ಬಹಳ ಆಸೆಯಾಗಿದೆ" ಎಂದು ಆತ ಕೇಳಿದ್ದಾನೆ. ಕಡೆಗೆ  ಜಿಲ್ಲಾ ಮ್ಯಾಜಿಸ್ಟ್ರೇಟ್ ಔಜನೇಯ ಕುಮಾರ್ ಯುವಕನಿಗೆ ನಾಲ್ಕು ಸಮೋಸಾ ಕಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 

ಆದರೆ ಕೇವಲ ನಾಲ್ಕು ಸಮೋಸಾ ಕಳಿಸಿಕೊಟ್ಟು ಮ್ಯಾಜಿಸ್ಟ್ರೇಟ್ ಸುಮ್ಮನೇ ಕುಳಿತಿಲ್ಲ ಬದಲಿಗೆ ಲಾಕ್ ಡೌನ್ ಸಮಯದಲ್ಲಿ ತೊಂದರೆ ನೀಡಿದ ಆ ಯುವಕನಿಗೆ ಶಿಕ್ಷೆಯನ್ನೂ ನೀಡಿದ್ದಾರೆ. ಸಮೋಸಾ ಕೇಳಿದ್ದ ಯುವಕನಿಗೆ ಚರಂಡಿಯನ್ನು ಸ್ವಚ್ಚಗೊಳಿಸಬೇಕು ಎಂದು ಆದೇಶ ನೀಡಿದ್ದಾರೆ.

ಈ ಕುರಿತಂತೆ ಅಧಿಕಾರಿಗಳು ಯುವಕರ ಹೆಸರನ್ನು ಹೇಳದಿದ್ದರೂ ತಮ್ಮ ಟ್ವಿಟ್ಟರ್ ಹ್ಯಾಂಡಲ್ ನಲ್ಲಿಲ್ ಯುವಕ ಚರಂಡಿ ಸ್ವಚ್ಚಗೊಳಿಸುವ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

RSS Song Controversy: ಡಿಕೆಶಿ ಆರ್‌ಎಸ್‌ಎಸ್‌ ಗೀತೆ ಹಾಡಿದ್ದು ತಪ್ಪು, ಕ್ಷಮೆ ಕೇಳಿದ್ದರಿಂದ ಎಲ್ಲವೂ ಮುಗಿದಿದೆ; ಮಲ್ಲಿಕಾರ್ಜುನ ಖರ್ಗೆ

ವಾಲ್ಮೀಕಿ ನಿಗಮ ಹಗರಣ: ಜಾರಿ ನಿರ್ದೇಶನಾಲಯದಿಂದ 5 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು !

SCROLL FOR NEXT