ದೇಶ

ಪ್ರಧಾನಿ ಪರಿಹಾರ ನಿಧಿಗೆ 26.25 ಕೋಟಿ ರೂ. ನೀಡಿದ ಎಚ್‌ಎಎಲ್

Srinivas Rao BV

ಬೆಂಗಳೂರು: ಸಾರ್ವಜನಿಕ ವಲಯದ ಎಚ್‌ಎಎಲ್‌ ತನ್ನ ಸಿಎಸ್‌ಆರ್ ನಿಧಿಯಿಂದ ಪ್ರಧಾನ ಮಂತ್ರಿಯವರ "ಪಿಎಂ ಕೇರ್ಸ್‌" ನಿಧಿಗೆ 20 ಕೋಟಿ ರೂ. ನೀಡುವ ವಾಗ್ದಾನ ಮಾಡಿದೆ.

ಇದಲ್ಲದೆ ಎಚ್‌ಎಎಲ್ ಉದ್ಯೋಗಿಗಳು ತಮ್ಮ ಒಂದು ದಿನದ ವೇತನ 6.25 ಕೋಟಿ ರೂ.ಸೇರಿ ಒಟ್ಟು 26.25 ಕೋಟಿ ರೂ. ನೀಡುವುದಾಗಿ ತಿಳಿಸಿದೆ.

ಕೊರೊನಾವೈರಸ್ ಸೋಂಕಿನ ವಿರುದ್ಧದ ಹೋರಾಟದಲ್ಲಿ ಸರ್ಕಾರದ ನಿರಂತರ ಪ್ರಯತ್ನಗಳನ್ನು ಬೆಂಬಲಿಸುವಲ್ಲಿ ಇದು ಎಚ್‌ಎಎಲ್‌ನ ಒಂದು ಸಣ್ಣ ಹೆಜ್ಜೆಯಾಗಿದೆ ಎಂದು ಎಚ್‌ಎಎಲ್ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಆರ್.ಮಾಧವನ್ ತಿಳಿಸಿದ್ದಾರೆ.

SCROLL FOR NEXT