ದೇಶ

ಕೇರಳ ರಾಜ್ಯಕ್ಕೆ 2 ವಿಮಾನ ಆಗಮನ, ಯುಎಇಯಿಂದ ತವರಿಗೆ ಮರಳಿದ ಭಾರತೀಯರು

Manjula VN

ನವದೆಹಲಿ: ಕೊರೋನಾ ನಿಗ್ರಹಕ್ಕಾಗಿ ಘೋಷಣೆ ಮಾಡಲಾಗಿರುವ ಲಾಕ್ಡೌನ್ ನಿಂದಾಗಿ ವಿಶ್ವದ ವಿವಿಧ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ತವರಿಗೆ ಕರೆತರುವ ದೇಶದ ಇತಿಹಾಸದ ಅತೀದೊಡ್ಡ ಕಾರ್ಯಾಚರಣೆ ವಂದೇ ಭಾರತ್ ಮಿಷನ್ ಗುರುವಾರದಿಂದ ಆರಂಭವಾಗಿದೆ. 

ಅಬುಧಾಬಿ ಹಾಗೂ ದುಂಬೈನಿಂದ 354 ಪ್ರಯಾಣಿಕರನ್ನು ಹೊತ್ತ 2 ವಿಮಾನಗಳು ಕೇರಳ ರಾಜ್ಯಕ್ಕೆ ಕಳೆದ ರಾತ್ರಿ ಬಂದಿಳಿದಿವೆ. 

177 ಪ್ರಯಾಣಿಕರನ್ನು ಹೊತ್ತ ಏರ್ ಇಂಡಿಯಾ ಎಕ್ಸ್'ಪ್ರೆಸ್ ಮೊದಲ ವಿಮಾನ 10.9ಕ್ಕೆ ಕೊಚ್ಚಿಗೆ ಬಂದಿಳಿದಿರೆ, ಇಷ್ಟೇ ಸಂಖ್ಯೆ ಪ್ರಯಾಣಿಕರನ್ನು ಕರೆತಂದ ಮತ್ತೊತಂದು ವಿಮಾನ ರಾತ್ರಿ 10.32ಕ್ಕೆ ಕಲ್ಲಿಕೋಟೆಗೆ ಬಂದಿಳಿಯಿತು. 

ಹೀಗೆ ಬಂದವರಲ್ಲಿ 9 ಹಸುಗೂಸುಗಳು, 49 ಗರ್ಭಿಣಿಯರು ಸೇರಿದ್ದರು. ಭಾರತಕ್ಕೆ ಬಂದಿಳಿದ 354 ಜನರ ಪೈಕಿ ಗರ್ಭಿಣಿಯರು ಸೇರಿ ಅನಿವಾರ್ಯವಿರುವವರಿಗೆ ಅಗತ್ಯ ತಪಾಸಣೆ ನಡೆಸಿ ಮನೆಗೆ ಕಳುಹಿಸಿ, ಉಳಿದವರನ್ನು 14 ದಿನಗಳ ಕಾಲ ಕ್ವಾರಂಟೈನ್'ಗೆ ಕಳುಹಿಸಲಾಯಿತು. 

SCROLL FOR NEXT