ಸಾಂದರ್ಭಿಕ ಚಿತ್ರ 
ದೇಶ

ಹೊಸ ಮಾರ್ಗಸೂಚಿ: ಕೊವಿಡ್-19 ರೋಗಿಗಳ ಹೋಮ್ ಕ್ವಾರಂಟೈನ್ 17 ದಿನಕ್ಕೆ ಅಂತ್ಯ

ಕೊರೋನಾ ವೈರಸ್ ಸೋಂಕಿತ ರೋಗಿಗಳಿಗೆ ಕೇಂದ್ರ ಸರ್ಕಾರ ಸೋಮವಾರ ಪರಿಷ್ಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ರೋಗ ಲಕ್ಷಣಗಳು ಅಥವಾ ಕೊಡಿವ್-19 ಪರೀಕ್ಷೆಯ ದಿನಾಂಕದಿಂದ 17 ದಿನಗಳ ನಂತರ ಹೋಮ್ ಕ್ವಾರಂಟೈನ್ ಕೊನೆಗೊಳಿಸಬಹುದು ಮತ್ತು ಮತ್ತೆ ಕೊವಿಡ್-19 ಪರೀಕ್ಷಿಸದೆ 10 ದಿನಗಳವರೆಗೆ ಜ್ವರವಿಲ್ಲದಿದ್ದರೆ ಹೋಮ್ ಕ್ವಾರಂಟೈನ್ ನಿಂದ ಹೊರ ಬರಬಹುದು ಎಂದು ಹೇಳಿದೆ.

ನವದೆಹಲಿ: ಕೊರೋನಾ ವೈರಸ್ ಸೋಂಕಿತ ರೋಗಿಗಳಿಗೆ ಕೇಂದ್ರ ಸರ್ಕಾರ ಸೋಮವಾರ ಪರಿಷ್ಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ರೋಗ ಲಕ್ಷಣಗಳು ಅಥವಾ ಕೊಡಿವ್-19 ಪರೀಕ್ಷೆಯ ದಿನಾಂಕದಿಂದ 17 ದಿನಗಳ ನಂತರ ಹೋಮ್ ಕ್ವಾರಂಟೈನ್ ಕೊನೆಗೊಳಿಸಬಹುದು ಮತ್ತು ಮತ್ತೆ ಕೊವಿಡ್-19 ಪರೀಕ್ಷಿಸದೆ 10 ದಿನಗಳವರೆಗೆ ಜ್ವರವಿಲ್ಲದಿದ್ದರೆ ಹೋಮ್ ಕ್ವಾರಂಟೈನ್ ನಿಂದ ಹೊರ ಬರಬಹುದು ಎಂದು ಹೇಳಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಇಂದು ಪರಿಷ್ಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು,  ಪೂರ್ವ-ರೋಗಲಕ್ಷಣ ಅಥವಾ ತುಂಬಾ ಸೌಮ್ಯವಾದ ರೋಗ ಲಕ್ಷಣಗಳನ್ನು ಹೊಂದಿರುವವರು, ಕುಟುಂಬದ ಇತರ ಸದಸ್ಯರೊಂದಿಗೆ ಸಂಪರ್ಕವನ್ನು ತಪ್ಪಿಸಲು ತಮ್ಮ ನಿವಾಸದಲ್ಲಿ ಅಗತ್ಯವಾದ ಸ್ವಯಂ-ಪ್ರತ್ಯೇಕತೆಯ ಸೌಲಭ್ಯವನ್ನು ಹೊಂದಿದ್ದರೆ ಮನೆಯ ಪ್ರತ್ಯೇಕತೆಯನ್ನು ಆರಿಸಿಕೊಳ್ಳಬಹುದು ಎಂದು ಸ್ಪಷ್ಪಪಡಿಸಿದೆ.

ವೈದ್ಯಕೀಯ ಅಧಿಕಾರಿಯಿಂದ ರೋಗಿಯನ್ನು ಪ್ರಾಯೋಗಿಕವಾಗಿ ಅತ್ಯಂತ ಸೌಮ್ಯವಾದ ಪ್ರಕರಣ ಅಥವಾ ರೋಗಲಕ್ಷಣದ ಪೂರ್ವದ ಪ್ರಕರಣ ಎಂದು ಘೋಷಿಸಬೇಕು ಮತ್ತು ಕಣ್ಗಾವಲು ತಂಡಗಳು ಮುಂದಿನ ಅನುಸರಣೆಗೆ ನಿಯಮಿತವಾಗಿ ಅವರ ಆರೋಗ್ಯ ಸ್ಥಿತಿಯನ್ನು ಜಿಲ್ಲಾ ಕಣ್ಗಾವಲು ಅಧಿಕಾರಿಗೆ ತಿಳಿಸಬೇಕು.

"ಹೋಮ್ ಕ್ವಾರಂಟೈನ್ ಅಡಿಯಲ್ಲಿರುವ ರೋಗಿಯು ರೋಗಲಕ್ಷಣಗಳು ಪ್ರಾರಂಭವಾದ 17 ದಿನಗಳ ನಂತರ ಮತ್ತು 10 ದಿನಗಳವರೆಗೆ ಜ್ವರವಿಲ್ಲದ ನಂತರ ಮನೆಯ ಪ್ರತ್ಯೇಕತೆಯನ್ನು ಕೊನೆಗೊಳಿಸಬಹುದು ಎಂದು ಪರಿಷ್ಕೃತ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ನೀವು ಪಡೆದ IMF ಬೇಲ್ಔಟ್‌ಗಿಂತ 2 ಪಟ್ಟು ಹೆಚ್ಚು; ಜಾಗಬಿಟ್ಟು ಹೋಗುವುದೇ ಪಾಕ್​ಗಿರುವ ಒಂದೇ ಆಯ್ಕೆ: ವಿಶ್ವಸಂಸ್ಥೆಯಲ್ಲಿ ಭಾರತ ವಾಗ್ದಾಳಿ!

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

Ranji Trophy final: ಔಕಿಬ್ ನಬಿ ಬೌಲಿಂಗ್ ಮ್ಯಾಜಿಕ್‌ಗೆ ಬೆರಗಾದ ಕೆಎಲ್ ರಾಹುಲ್; ಆರಂಭದಲ್ಲೇ ಕರ್ನಾಟಕಕ್ಕೆ ಸಂಕಷ್ಟ!

SCROLL FOR NEXT