ಸಾಂದರ್ಭಿಕ ಚಿತ್ರ 
ದೇಶ

ಹೊಸ ಮಾರ್ಗಸೂಚಿ: ಕೊವಿಡ್-19 ರೋಗಿಗಳ ಹೋಮ್ ಕ್ವಾರಂಟೈನ್ 17 ದಿನಕ್ಕೆ ಅಂತ್ಯ

ಕೊರೋನಾ ವೈರಸ್ ಸೋಂಕಿತ ರೋಗಿಗಳಿಗೆ ಕೇಂದ್ರ ಸರ್ಕಾರ ಸೋಮವಾರ ಪರಿಷ್ಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ರೋಗ ಲಕ್ಷಣಗಳು ಅಥವಾ ಕೊಡಿವ್-19 ಪರೀಕ್ಷೆಯ ದಿನಾಂಕದಿಂದ 17 ದಿನಗಳ ನಂತರ ಹೋಮ್ ಕ್ವಾರಂಟೈನ್ ಕೊನೆಗೊಳಿಸಬಹುದು ಮತ್ತು ಮತ್ತೆ ಕೊವಿಡ್-19 ಪರೀಕ್ಷಿಸದೆ 10 ದಿನಗಳವರೆಗೆ ಜ್ವರವಿಲ್ಲದಿದ್ದರೆ ಹೋಮ್ ಕ್ವಾರಂಟೈನ್ ನಿಂದ ಹೊರ ಬರಬಹುದು ಎಂದು ಹೇಳಿದೆ.

ನವದೆಹಲಿ: ಕೊರೋನಾ ವೈರಸ್ ಸೋಂಕಿತ ರೋಗಿಗಳಿಗೆ ಕೇಂದ್ರ ಸರ್ಕಾರ ಸೋಮವಾರ ಪರಿಷ್ಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ರೋಗ ಲಕ್ಷಣಗಳು ಅಥವಾ ಕೊಡಿವ್-19 ಪರೀಕ್ಷೆಯ ದಿನಾಂಕದಿಂದ 17 ದಿನಗಳ ನಂತರ ಹೋಮ್ ಕ್ವಾರಂಟೈನ್ ಕೊನೆಗೊಳಿಸಬಹುದು ಮತ್ತು ಮತ್ತೆ ಕೊವಿಡ್-19 ಪರೀಕ್ಷಿಸದೆ 10 ದಿನಗಳವರೆಗೆ ಜ್ವರವಿಲ್ಲದಿದ್ದರೆ ಹೋಮ್ ಕ್ವಾರಂಟೈನ್ ನಿಂದ ಹೊರ ಬರಬಹುದು ಎಂದು ಹೇಳಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಇಂದು ಪರಿಷ್ಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು,  ಪೂರ್ವ-ರೋಗಲಕ್ಷಣ ಅಥವಾ ತುಂಬಾ ಸೌಮ್ಯವಾದ ರೋಗ ಲಕ್ಷಣಗಳನ್ನು ಹೊಂದಿರುವವರು, ಕುಟುಂಬದ ಇತರ ಸದಸ್ಯರೊಂದಿಗೆ ಸಂಪರ್ಕವನ್ನು ತಪ್ಪಿಸಲು ತಮ್ಮ ನಿವಾಸದಲ್ಲಿ ಅಗತ್ಯವಾದ ಸ್ವಯಂ-ಪ್ರತ್ಯೇಕತೆಯ ಸೌಲಭ್ಯವನ್ನು ಹೊಂದಿದ್ದರೆ ಮನೆಯ ಪ್ರತ್ಯೇಕತೆಯನ್ನು ಆರಿಸಿಕೊಳ್ಳಬಹುದು ಎಂದು ಸ್ಪಷ್ಪಪಡಿಸಿದೆ.

ವೈದ್ಯಕೀಯ ಅಧಿಕಾರಿಯಿಂದ ರೋಗಿಯನ್ನು ಪ್ರಾಯೋಗಿಕವಾಗಿ ಅತ್ಯಂತ ಸೌಮ್ಯವಾದ ಪ್ರಕರಣ ಅಥವಾ ರೋಗಲಕ್ಷಣದ ಪೂರ್ವದ ಪ್ರಕರಣ ಎಂದು ಘೋಷಿಸಬೇಕು ಮತ್ತು ಕಣ್ಗಾವಲು ತಂಡಗಳು ಮುಂದಿನ ಅನುಸರಣೆಗೆ ನಿಯಮಿತವಾಗಿ ಅವರ ಆರೋಗ್ಯ ಸ್ಥಿತಿಯನ್ನು ಜಿಲ್ಲಾ ಕಣ್ಗಾವಲು ಅಧಿಕಾರಿಗೆ ತಿಳಿಸಬೇಕು.

"ಹೋಮ್ ಕ್ವಾರಂಟೈನ್ ಅಡಿಯಲ್ಲಿರುವ ರೋಗಿಯು ರೋಗಲಕ್ಷಣಗಳು ಪ್ರಾರಂಭವಾದ 17 ದಿನಗಳ ನಂತರ ಮತ್ತು 10 ದಿನಗಳವರೆಗೆ ಜ್ವರವಿಲ್ಲದ ನಂತರ ಮನೆಯ ಪ್ರತ್ಯೇಕತೆಯನ್ನು ಕೊನೆಗೊಳಿಸಬಹುದು ಎಂದು ಪರಿಷ್ಕೃತ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT