ದೇಶ

ಕೊರೋನಾ ವೈರಸ್: ಕೇಂದ್ರದ ಸಾಲ ತೀರ್ಮಾನಕ್ಕೆ ಪಿ ಚಿದಂಬರಂ ಬೆಂಬಲ

Srinivasamurthy VN

ನವದೆಹಲಿ: ಕೇಂದ್ರ ಸರ್ಕಾರದ ಪ್ರತೀ ನಡೆಯನ್ನೂ ಟೀಕಿಸುತ್ತಿದ್ದ ಮಾಜಿ ವಿತ್ತ ಸಚಿವ ಪಿ ಚಿದಂಬರಂ ಮೊದಲ ಬಾರಿಗೆ ಕೇಂದ್ರ ಸರ್ಕಾರದ ತೀರ್ಮಾನವನ್ನು ಸ್ವಾಗತಿಸಿದ್ದಾರೆ.

ಹೌದು.. ಕೇಂದ್ರದ ಆರ್ಥಿಕ ನೀತಿ ಸದಾ ವಿರೋಧ ಮಾಡುತ್ತಿದ್ದ ಮಾಜಿ ಹಣಕಾಸು ಸಚಿವ ಚಿದಂಬರಂ ಇದೀಗ ಸಾಲ ತೀರ್ಮಾನಕ್ಕೆ ಬೆಂಬಲ, ಸಹಮತ ವ್ಯಕ್ತಪಡಿಸಿದ್ದಾರೆ. ಕೊರೋನಾ ವೈರಸ್ ಸಂಕಷ್ಟ ನಿವಾರಣೆಗಾಗಿ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ 4.2 ಲಕ್ಷ ಕೋಟಿ ರುಪಾಯಿ ಸಾಲ ಮಾಡಲು ಹೊರಟಿರುವ ಕ್ರಮವನ್ನು ಕಾಂಗ್ರೆಸ್ ನಾಯಕರೂ ಆಗಿರುವ ಚಿದು ಸ್ವಾಗತಿಸಿದ್ದಾರೆ.

ಆದರೆ ಈ ಹಣವನ್ನು ಬಡವರಿಗೆ ಪರಿಹಾರ ಒದಗಿಸಲು ಮತ್ತು ಆರ್ಥಿಕತೆಗೆ ಮತ್ತೆ ಚೈತನ್ಯ ನೀಡಲು ಮಾತ್ರ ಬಳಸಬೇಕು ಎಂದು ಅವರು ಒತ್ತಾಯ ಮಾಡಿದ್ದಾರೆ.

ನಾವು ಮನವಿ ಮಾಡಿದ ಮೇಲೆ ಸರ್ಕಾರವು ಅಂತಿಮವಾಗಿ ಹೆಚ್ಚುವರಿ 4.2 ಲಕ್ಷ ಕೋಟಿ ರುಪಾಯಿ ಹೆಚ್ಚುವರಿಯಾಗಿ ಸಾಲ ಮಾಡಲು ನಿರ್ಧರಿಸಿದೆ. ಆದರೂ ಕೇಂದ್ರ ಸರ್ಕಾರದ ತೀರ್ಮಾನವನ್ನು ಸ್ವಾಗತಿಸುವುದಾಗಿಚಿದಂಬರಂ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿಗೆ ಸಾಲ ಮಾಡಿದರೆ ಮಾತ್ರ ಪ್ರಯೋಜನವಿಲ್ಲ ಎಂದು ಭಾವಿಸಬೇಕಿಲ್ಲ . ಆ ಹಣವನ್ನು ಬಡವರಿಗೆ ಪರಿಹಾರ ಒದಗಿಸಲು ಹಾಗೂ ಆರ್ಥಿಕತೆಗೆ ಮತ್ತೆ ಚಾಲನೆ ನೀಡಲು ಬಳಸಿದರೆ ಅನುಕೂಲವಾಗಲಿದೆ ಎಂದೂ ಅವರು ಕಿವಿಮಾತು ಹೇಳಿದ್ದಾರೆ.

SCROLL FOR NEXT