ದೇಶ

ವಲಸಿಗರ ಸಂಕಟಗಳನ್ನು ಪರಿಹರಿಸಲು ಮೋದಿ ವಿಫಲ, ದೇಶ ನಿರಾಶೆಗೊಂಡಿದೆ: ಕಾಂಗ್ರೆಸ್ 

Srinivas Rao BV

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿ 20 ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿರುವುದರ ಬಗ್ಗೆ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದೆ. 

ಮೇ.12 ರ ಮೋದಿ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನ ಪ್ರಧಾನ ವಕ್ತಾರ ರಣ್ದೀಪ್ ಸುರ್ಜೆವಾಲ, ಮೋದಿ ಭಾಷಣ ಕೇವಲ ಹೆಡ್ ಲೈನ್ ಗಳಿಗೆ ಸೀಮಿತವಾಯ್ತು. ವಲಸಿಗರ ಸಂಕಟಗಳನ್ನು ಪರಿಹರಿಸಲು ಮೋದಿ ವಿಫಲರಾಗಿದ್ದು ದೇಶ ನಿರಾಶೆಗೊಂಡಿದೆ ಎಂದು ಹೇಳಿದ್ದಾರೆ. 

ಕಾಲ್ನಡಿಗೆಯಲ್ಲೇ ಸಂಚರಿಸಿ, ಹೃದಯವಿದ್ರಾವಕ ಸಂಕಷ್ಟಗಳನ್ನು ಎದುರಿಸುತ್ತಿರುವ ವಲಸಿಗ ಕಾರ್ಮಿಕರಿಗೆ ರಕ್ಷಣೆ ಹಾಗೂ ಸುರಕ್ಷಿತವಾಗಿ ಮನೆ ತಲುಪುವ ವ್ಯವಸ್ಥೆಯಾಗಬೇಕಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಮೇ.12 ರ ಭಾಷಣ ಮಾಧ್ಯಮಗಳಿಗೆ, ದೇಶಕ್ಕೆ ಶೀರ್ಷಿಕೆಯಾಯಿತಷ್ಟೇ ಎಂದು ಕಾಂಗ್ರೆಸ್ ಟೀಕಿಸಿದೆ. 

SCROLL FOR NEXT