ಅರ್ಚಕ 
ದೇಶ

ಮಹಾಮಾರಿ ಕೊರೋನಾ ತಡೆಗೆ 52 ವರ್ಷದ ವ್ಯಕ್ತಿಯ ನರಬಲಿ: ಅರ್ಚಕನ ಬಂಧನ!

ಮಹಾಮಾರಿ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ನರಬಲಿ ಪ್ರಕರಣ ಸಂಬಂಧ 70 ವರ್ಷದ ಅರ್ಚಕನನ್ನು ಪೊಲೀಸರು ಬಂಧಿಸಿದ್ದಾರೆ. 

ಕಟಕ್: ಮಹಾಮಾರಿ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ನರಬಲಿ ಪ್ರಕರಣ ಸಂಬಂಧ 70 ವರ್ಷದ ಅರ್ಚಕನನ್ನು ಪೊಲೀಸರು ಬಂಧಿಸಿದ್ದಾರೆ. 

ದೇವಿಯನ್ನು ಸಮಾಧಾನಪಡಿಸಲು ಕಟಕ್ ಜಿಲ್ಲೆಯ ಬಂದಹಹುಡದಲ್ಲಿರುವ ದೇವಾಲಯದೊಳಗೆ ಅರ್ಚಕನೊಬ್ಬ 52 ವರ್ಷದ ವ್ಯಕ್ತಿಯನ್ನು 'ತ್ಯಾಗ' ಹೆಸರಲ್ಲಿ 52 ವರ್ಷದ ವ್ಯಕ್ತಿಯೋರ್ವನನ್ನು ಶಿರಚ್ಛೇನ ಮಾಡಿದ್ದಾರೆ. 

ತ್ಯಾಗವು ಸಾಂಕ್ರಾಮಿಕ ರೋಗದ ಪರಿಣಾಮವನ್ನು ಕಡಿಮೆ ಮಾಡುತ್ತದೆ ಎಂದು ನಂಬಿರುವ ಸಂಸಾರಿ ಓಜಾ (70) ಬುಧವಾರ ರಾತ್ರಿ ಮಾ ಬ್ರಾಹ್ಮಣಿದೈ ದೇವಾಲಯದ ಆವರಣದಲ್ಲಿ ವ್ಯಕ್ತಿಯನ್ನು ಶಿರಚ್ಛೇದ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮೃತನನ್ನು ಅದೇ ಗ್ರಾಮದ ಸರೋಜ್ ಪ್ರಧಾನ್ ಎಂದು ಗುರುತಿಸಲಾಗಿದೆ. ಅವರು ದೇವಾಲಯದ ಸಮೀಪವಿರುವ ತಮ್ಮ ಕೃಷಿ ಭೂಮಿಯಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಅದರ ಆವರಣದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆತನ ಮನವೊಲಿಸಿ ದೇವಿಗೆ ಬಲಿ ನೀಡಿದ್ದಾನೆ ಎನ್ನಲಾಗಿದೆ. 

ಘಟನೆ ಬಳಿಕ ಅರ್ಚಕನೇ ಪೊಲೀಸ್ ಠಾಣೆಗೆ ತೆರಳಿ ಘಟನೆ ಸಂಬಂಧ ವಿವರಿಸಿ ಶರಣಾಗಿದ್ದಾರೆ. ನಂತರ ಪೊಲೀಸರು ಅರ್ಚನ ಕೋಣೆಗೆ ತೆರಳಿ ಅಲ್ಲಿದ್ದ ಮೃತನ ದೇಹ ಮತ್ತು ಕೊಡಲಿಯನ್ನು ವಶಪಡಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

SCROLL FOR NEXT