ದೇಶ

ಹೈದರಾಬಾದ್‍: ಬಿಜೆಪಿ ಅಭ್ಯರ್ಥಿಯ ಸೋದರಳಿಯನಿಂದ 1 ಕೋಟಿ ರೂ. ನಗದು ವಶ, ಇಬ್ಬರ ಬಂಧನ

Vishwanath S

ಹೈದರಾಬಾದ್: ನಗರ ಪೊಲೀಸರು ಭಾನುವಾರ ಇಬ್ಬರನ್ನು ಬಂಧಿಸಿ, ಅವರಿಂದ 1 ಕೋಟಿ ರೂ.ನಗದು ಮತ್ತು ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ವಿಶ್ವಸನೀಯ ಮಾಹಿತಿಯಂತೆ,  ಉತ್ತರ ವಲಯ ಕಾರ್ಯಪಡೆ ತಂಡ ದುಬ್ಬಕಾ  ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಘುನಂದನ್ ರಾವ್ ಅವರ ಸೋದರಳಿಯ ಸುರಭಿ ಶ್ರೀನಿವಾಸ್ ರಾವ್ ಮತ್ತು ರವಿಕುಮಾರ್ (ಚಾಲಕ) ನನ್ನು ತಡೆದಿದ್ದಾರೆ. 

ಈ ಇಬ್ಬರೂ ನವೆಂಬರ್ 3ರಂದು ನಡೆಯಲಿರುವ ದುಬ್ಬಕಾ ಉಪಚುನಾವಣೆಗಾಗ ಜನರಿಗೆ ಹಂಚಲು ಹಣ ಸಾಗಿಸುತ್ತಿದ್ದರು ಎನ್ನಲಾಗಿದೆ ಎಂದು ಹೈದರಾಬಾದ್ ನಗರ ಪೊಲೀಸ್ ಆಯುಕ್ತ ಅಂಜನಿ ಕುಮಾರ್ ಭಾನುವಾರ ಇಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಬೇಗಂಪೇಟ್‍ನ ವಿಶಾಕ ಇಂಡಸ್ಟ್ರೀಸ್‌ನಿಂದ ದುಬ್ಬಾಕಗೆ ಕಾರಿನಲ್ಲಿ ಸಾಗಿಸುತ್ತಿದ್ದಾಗ ಈ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

SCROLL FOR NEXT