ಸಾಂದರ್ಭಿಕ ಚಿತ್ರ 
ದೇಶ

ನವೆಂಬರ್ 16ರ ನಂತರವೂ ಕರ್ನಾಟಕ-ತಮಿಳುನಾಡು ಮಧ್ಯೆ ಅಂತರಾಜ್ಯ ಬಸ್ ಸಂಚಾರ ಸೇವೆ ವಿಸ್ತರಣೆ

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಮನವಿ ಮೇರೆಗೆ ಮತ್ತು ಸಾರ್ವಜನಿಕರಿಂದ ಬಂದ ಬೇಡಿಕೆ ಹಿನ್ನೆಲೆಯಲ್ಲಿ, ನವೆಂಬರ್ 16ರ ಬಳಿಕವೂ ಬಸ್ ಸಂಚಾರ ಸೇವೆ ಮುಂದುವರಿಸಲು ತಮಿಳು ನಾಡು ಸರ್ಕಾರ ನಿರ್ಧರಿಸಿದೆ.

ಚೆನ್ನೈ/ಮದುರೈ: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಮನವಿ ಮೇರೆಗೆ ಮತ್ತು ಸಾರ್ವಜನಿಕರಿಂದ ಬಂದ ಬೇಡಿಕೆ ಹಿನ್ನೆಲೆಯಲ್ಲಿ, ನವೆಂಬರ್ 16ರ ಬಳಿಕವೂ ಬಸ್ ಸಂಚಾರ ಸೇವೆ ಮುಂದುವರಿಸಲು ತಮಿಳು ನಾಡು ಸರ್ಕಾರ ನಿರ್ಧರಿಸಿದೆ.

ಇದರಿಂದಾಗಿ ತಮಿಳು ನಾಡು ಮತ್ತು ಕರ್ನಾಟಕ ಮಧ್ಯೆ ನವೆಂಬರ್ 16ರ ಬಳಿಕವೂ ಖಾಸಗಿ ಮತ್ತು ರಾಜ್ಯ ರಸ್ತೆ ಸಾರಿಗೆ ಬಸ್ಸುಗಳು ಸಂಚರಿಸಲಿವೆ, ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿರುವ ತಮಿಳು ನಾಡು ಸರ್ಕಾರ, ದೀಪಾವಳಿ ಪ್ರಯುಕ್ತ ನವೆಂಬರ್ 16ರವರೆಗೆ ಇ-ದಾಖಲಾತಿ ಇಲ್ಲದೆ ಅಂತರಾಜ್ಯ ಬಸ್ ಸಂಚಾರ ಸೇವೆಗೆ ಅವಕಾಶ ಮಾಡಿಕೊಡಲಾಗಿತ್ತು, ಅದನ್ನು ಇದೀಗ ನವೆಂಬರ್ 16ರ ನಂತರವೂ ಮುಂದುವರಿಸಲಾಗುವುದು ಎಂದು ಹೇಳಿದೆ,

ವಿಶೇಷ ಬಸ್ಸುಗಳು: ರಾಜ್ಯ ಎಕ್ಸ್ ಪ್ರೆಸ್ ಸಾರಿಗೆ ನಿಗಮ ಮತ್ತು ತಮಿಳು ನಾಡು ರಾಜ್ಯ ರಸ್ತೆ ಸಾರಿಗೆ ನಿಗಮ 100ಕ್ಕೂ ಹೆಚ್ಚು ವಿಶೇಷ ಬಸ್ಸುಗಳನ್ನು ಮದುರೈಯಿಂದ ತಮಿಳು ನಾಡಿಗೆ ದೀಪಾವಳಿ ಪ್ರಯುಕ್ತ ಸಂಚಾರ ನಡೆಸಲಿವೆ. ಮದುರೈಯಿಂದ ಸುಮಾರು 125 ವಿಶೇಷ ಬಸ್ಸುಗಳು ಚೆನ್ನೈ, ಕೊಯಮತ್ತೂರು, ತಿರ್ ಪುರ್ ಮತ್ತು ನಾಗರ್ಕೊಯಿಲ್ ಗಳಿಗೆ ಸಂಚರಿಸುತ್ತಿವೆ. ವಿಶೇಷ ಬಸ್ಸುಗಳ ಸಂಚಾರ ಕಳೆದ ಬುಧವಾರದಿಂದ ಆರಂಭವಾಗಿದ್ದು ನವೆಂಬರ್ 16ರವರೆಗೆ ಮುಂದುವರಿಯಲಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಬಿಕಿನಿ ಧರಿಸಿರುವ ಮಹಿಳೆಯರ ಜೊತೆಗೆ ಸ್ಟೀಫನ್ ಹಾಕಿಂಗ್! Epstein ಫೈಲ್ಸ್ ನಲ್ಲಿ ಪೋಟೋ ಬಿಡುಗಡೆ

ಅಜಿತ್ ಪವಾರ್ ವಿಮಾನ ಪತನ ವಿಧ್ವಂಸಕ ಕೃತ್ಯವೋ ಅಥವಾ ನಿರ್ಲಕ್ಷ್ಯವೋ? ಸಿಐಡಿ ಹೇಳಿದ್ದೇನು?

'The Kerala Story 2: Goes Beyond' ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

SCROLL FOR NEXT