ದೇಶ

ಪಟಾಕಿ ಸಿಡಿಸಲು ಹೋಗಿ ಗಂಭೀರ ಗಾಯ: ಬಿಜೆಪಿ ಸಂಸದೆ ರೀತಾ ಬಹುಗುಣ ಮೊಮ್ಮಗಳ ದಾರುಣ ಸಾವು

Manjula VN

ಪ್ರಯಾಗ್'ರಾಜ್: ಪಟಾಕಿ ಸಿಡಿಸಲು ಹೋಗಿ ಗಂಭೀರವಾಗಿ ಗಾಯಗೊಂಡಿದ್ದ ಬಿಜೆಪಿ ಸಂಸದೆ ರೀತಾ ಬಹುಗುಣ ಅವರ 8 ವರ್ಷದ ಮೊಮ್ಮಗಳು ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ. 

ರೀತಾ ಬಹುಗುಣ ಅವರ ಪುತ್ರ ಮಾಯಾಂಕ್ ಜೋಷಿಯವರ ಪುತ್ರಿಯಾಗಿದ್ದ 8 ವರ್ಷದ ಮಗು ದೀಪಾವಳಿ ಹಿನ್ನೆಲೆಯಲ್ಲಿ ಪಟಾಕಿ ಹೊಡೆಯಲು ಆರಂಭಿಸಿದ್ದಳು. ಈ ವೇಳೆ ಮಗು ಗಂಭೀರವಾಗಿ ಗಾಯಗೊಂಡಿದೆ. ಬಾಲಕಿಯು ಶೇ.60ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದಳು. 

ಕೂಡಲೇ ಬಾಲಕಿಯನ್ನು ಏರ್ ಆ್ಯಂಬುಲೆನ್ಸ್ ಮೂಲಕ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೂಡಲ ಚಿಕಿತ್ಸೆ ನೀಡಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವನ್ನಪ್ಪಿದ್ದಾಳೆ. ಬಾಲಕಿಯ ಸಾವು ಹಿನ್ನೆಲೆಯಲ್ಲಿ ಸಂಸದೆ ರೀತಾ ಬಹುಗುಣ ಅವರ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. 

SCROLL FOR NEXT