ದೇಶ

ಆದರ್ಶ ದಂಪತಿ: 500 ಪ್ರಾಣಿಗಳಿಗೆ ಭರ್ಜರಿ ವಿವಾಹ ಭೋಜನ! 

Srinivas Rao BV

ಭುವನೇಶ್ವರ: ಭಾರತದಲ್ಲಿ ವಿವಾಹ ಅತಿ ಹೆಚ್ಚು ಖರ್ಚು ಮಾಡುವ ಸಮಾರಂಭ ಎನ್ನುವಂತಾಗಿದೆ. ಆದರೆ ಭುವನೇಶ್ವರದಲ್ಲಿ ಆದರ್ಶ ದಂಪತಿ ತಮ್ಮ ವಿವಾಹವನ್ನು ಸಾಧ್ಯವಾದಷ್ಟೂ ಕಡಿಮೆ ಖರ್ಚಿನಲ್ಲಿ ಮಾಡಿಕೊಂಡಿದ್ದು, ಹೆಚ್ಚಿನ ಹಣವನ್ನು ಬೀದಿಯಲ್ಲಿರುವ ಪ್ರಾಣಿಗಳಿಗೆ ಭರ್ಜರಿ ಆಹಾರ ನೀಡುವುದಕ್ಕೆ ಖರ್ಚು ಮಾಡಿದ್ದಾರೆ. 

ಫಿಲ್ಮ್ ಮೇಕರ್ ಯುರೇಕಾ ಆಪ್ತಾ ಹಾಗೂ ದಂತ ವೈದ್ಯೆಯಾಗಿರುವ ಜೊವಾನಾ ಇಬ್ಬರೂ ಸಹ ಮೂರು ವರ್ಷಗಳ ಹಿಂದೆಯೇ ತಮ್ಮ ವಿವಾಹ ಸಮಾರಂಭವನ್ನು ಉದಾತ್ತ ಕಾರಣಕ್ಕಾಗಿ ನಿಮಿತ್ತವಾಗಿ ಬಳಕೆ ಮಾಡಿಕೊಳ್ಳಬೇಕೆಂದು ನಿರ್ಧರಿಸಿದ್ದರು. 

ಅದರಂತೆಯೇ ಬೀದಿಯಲ್ಲಿರುವ 500 ಪ್ರಾಣಿಗಳಿಗೆ ಭರ್ಜರಿ ಆಹಾರ ದೊರೆಯುವಂತೆ ಮಾಡಿದ್ದಷ್ಟೇ ಅಲ್ಲದೇ, ರಕ್ಷಿಸಲ್ಪಟ್ಟ ನಿರಾಶ್ರಿತ ಪ್ರಾಣಿಗಳಿಗೆ ಆಶ್ರಯ ನೀಡುತ್ತಿರುವ ಎನ್ ಜಿಒ ಗಳಿಗೆ ದೇಣಿಗೆ ನೀಡಿದ್ದಾರೆ. 

ತಮ್ಮ ವಿವಾಹಕ್ಕೆ ಎರಡು ದಿನಗಳಿರುವಾಗಷ್ಟೇ ಪ್ರಾಣಿಗಳಿಗೆ ಆಶ್ರಯ ನೀಡಿರುವ ಎನ್ ಜಿಒ ಗಳಿಗೆ ಭೇಟಿ ನೀಡಿ ಆಹಾರ ಹಾಗೂ ಔಷಧಗಳನ್ನು ನೀಡಿದ್ದಾರೆ ಈ ದಂಪತಿ 

ಯುರೇಕಾ ದಂಪತಿ ತಮ್ಮ ವಿವಾಹವನ್ನು ಸರಳವಾಗಿ ಆಚರಿಸಬೇಕು ಹಾಗೂ ಉದಾತ್ತ ಕೆಲಸಕ್ಕೆ ನಿಮಿತ್ತವಾಗಿರಿಸಿಕೊಳ್ಳಬೇಕೆಂದು ನಿರ್ಧರಿಸಿದ್ದರು. ಇದಕ್ಕಾಗಿ ಹಣವನ್ನೂ ಕೂಡಿತ್ತು ಎನ್ ಜಿಒ ಗಳಿಗೆ ನೀಡುತ್ತಿದ್ದರು. ಆದರೆ ಕೋವಿಡ್-19 ಅವರ ಎಲ್ಲಾ ಯೋಜನೆಗಳನ್ನೂ ಬುಡಮೇಲು ಮಾಡಿತ್ತು. ಈಗ ಸಾಲ ಮಾಡಿ ತಮ್ಮ ಕನಸನ್ನು ಈಡೇರಿಸಿಕೊಂಡಿದ್ದಾರೆ ಈ ದಂಪತಿ. 

SCROLL FOR NEXT