ದೇಶ

ಹತ್ರಾಸ್ ಅತ್ಯಾಚಾರ ಕೇಸ್ ಬೇರೆ ಕೋರ್ಟ್ ಗೆ ವರ್ಗಾಯಿಸಿ: ಸಂತ್ರಸ್ತೆ ಕುಟುಂಬಸ್ಥರ ಮನವಿ

Shilpa D

ಲಕ್ನೋ: ಕಳೆದ ತಿಂಗಳು ಸಾಮೂಹಿಕ ಅತ್ಯಾಚಾರಕ್ಕೊಳಕ್ಕಾಗಿ ಸಾವನ್ನಪ್ಪಿದ ಹತ್ರಾಸ್ ಸಂತ್ರಸ್ತೆ ಕುಟುಂಬ ಪ್ರಕರಣವನ್ನು ಉತ್ತರ ಪ್ರದೇಶದಿಂದ ಬೇರೆ ಕೋರ್ಟ್ ಗೆ ವರ್ಗಾಯಿಸುವಂತೆ ಮನವಿ ಮಾಡಿದೆ.

ಅಲಹಾಬಾದ್ ಕೋರ್ಟ್ ನಿಂದ ದೆಹಲಿ ಅಥವಾ ಮುಂಬಯಿ ಕೋರ್ಟ್ ಗೆ ಶಿಫ್ಟ್ ಮಾಡುವಂತೆ ಸಂತ್ರಸ್ತೆಯ ಕುಟುಂಬ ಮನವಿ ಮಾಡಿದೆ ಎಂದು ಸಂತ್ರಸ್ತೆ ಪರ ವಕೀಲೆ ಸೀಮಾ ಕುಶ್ವಾಹ ಹೇಳಿದ್ದಾರೆ.

'ಪ್ರಕರಣ ಕುರಿತ ಸಿಬಿಐ ತನಿಖಾ ವರದಿ ರಹಸ್ಯವಾಗಿ ಇಡಬೇಕು. ಪ್ರಕರಣವನ್ನು ಉತ್ತರ ಪ್ರದೇಶದಿಂದ ಬೇರೆಡೆಗೆ ವರ್ಗ ಮಾಡಬೇಕು ಮತ್ತು ಪ್ರಕರಣ ತಾರ್ಕಿಕ ಅಂತ್ಯ ಕಾಣುವವರೆಗೆ ಭದ್ರತೆ ಒದಗಿಸಬೇಕು ಎನ್ನುವ ಮೂರು ಬೇಡಿಕೆಗಳನ್ನು ಸಂತ್ರಸ್ತೆ ಕುಟುಂಬ ಮಂಡಿಸಿದೆ' ಎಂದು ವಕೀಲೆ ಸೀಮಾ ಖುಶ್ವಾಹ ವಿಚಾರಣೆ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಲೈಂಗಿಕ ದೌರ್ಜನ್ಯ ಹಾಗೂ ಸಂತ್ರಸ್ತೆಯ ಶವ ಸಂಸ್ಕಾರದ ವಿಷಯದಲ್ಲಿ ಭಾರೀ ವಿವಾದ ಸೃಷ್ಟಿಯಾಗಿತ್ತು. ಪ್ರಕರಣದ ಸುತ್ತ ಹಲವಾರು ಜಟಿಲ ಪ್ರಶ್ನೆಗಳು ಹುಟ್ಟಿದ್ದರಿಂದ ಸಮಗ್ರ ವಿವರ ನೀಡುವಂತೆ ರಾಜ್ಯ ಸರಕಾರಕ್ಕೆ ಕೋರ್ಟ್‌ ಸಮನ್ಸ್‌ ಜಾರಿ ಮಾಡಿತ್ತು. ಇದೇ ವೇಳೆ, ತಮ್ಮ ಅಭಿಪ್ರಾಯ ತಿಳಿಸುವಂತೆ ಸಂತ್ರಸ್ತೆಯ ಕುಟುಂಬಕ್ಕೆ ಸೂಚನೆ ನೀಡಿತ್ತು. ಸೋಮವಾರ ಬೆಳಗ್ಗೆ ಪೊಲೀಸ್‌ ಬಿಗಿಭದ್ರತೆಯಲ್ಲಿ ಲಖನೌ ಪೀಠದ ಮುಂದೆ ಹಾಜರಾದ ಮೃತ ಯುವತಿಯ ತಂದೆ, ತಾಯಿ ಮತ್ತು ಮೂವರು ಸೋದರರು ವಿವರ ನೀಡಿದ್ದಾರೆ.

SCROLL FOR NEXT