ದೇಶ

ಭದ್ರತಾ ಪಡೆಗಳಿಂದ ಅರುಣಾಚಲದಲ್ಲಿ ಎನ್‌ಎಸ್‌ಸಿಎನ್ (ಕೆ-ವೈಎ) ಉಗ್ರ ಹತ್ಯೆ

Raghavendra Adiga

ಇಟಾನಗರ: ಅರುಣಾಚಲ ಪ್ರದೇಶದ ಲಾಂಗ್ಡಿಂಗ್ ಜಿಲ್ಲೆಯ ಎನ್‌ಎಸ್‌ಸಿಎನ್ (ಕೆ-ವೈಎ) ಉಗ್ರನನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ ಎಂದು ರಕ್ಷಣಾ ವಕ್ತಾರರು ಭಾನುವಾರ ತಿಳಿಸಿದ್ದಾರೆ.

ನಿರ್ದಿಷ್ಟ ಮಾಹಿತಿಯನ್ನಾಧರಿಸಿ ಭದ್ರತಾ ಪಡೆಗಳು ಸಾಮಾನ್ಯ ಪ್ರದೇಶವಾದ ವಕ್ಕಾದಲ್ಲಿ ಶನಿವಾರ ಪೊಲೀಸರೊಂದಿಗೆ ಕಾರ್ಯಾಚರಣೆಯನ್ನು ಆರಂಭಿಸಿದ್ದವು. ಈ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಭದ್ರತಾ ಪಡೆಗಳು ಪ್ರತ್ಯುತ್ತರ ನೀಡಿವೆ. ಗುಂಡಿನ ಚಕಮಕಿಯಲ್ಲಿ ಒಬ್ಬ ಉಗ್ರ ಹತನಾಗಿದ್ದಾನೆ ಎಂದು ತೇಜ್ಪುರ ಮೂಲದ ರಕ್ಷಣಾ ಸಾರ್ವಜನಿಕ ಸಂಪರ್ಕಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಹರ್ಷ್ ವರ್ಧನ್ ಪಾಂಡೆ ಹೇಳಿದರು.

ಭದ್ರತಾ ಪಡೆಗಳು ಘಟನಾ ಸ್ಥಳದಿಂದ ಲತೋಡ್ ಬಂಧೂಕು ಮತ್ತು ಮೂರು ಜೀವಂತ ಗುಂಡುಗಳು, ಒಂದು .32 ಪಿಸ್ತೂಲ್ ಮತ್ತು ಒಂದು ಸುತ್ತಿನ ಚೈನಾ ನಿರ್ಮಿತ ಕೈ ಗ್ರೆನೇಡ್ ವಶಪಡಿಸಿಕೊಂಡಿದ್ದು, ಇವನ್ನು ಲಾಂಗ್ಡಿಂಗ್ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
 

SCROLL FOR NEXT