ದುರ್ಗಾಮಾತೆ ವಿಗ್ರಹ 
ದೇಶ

ಕೊರೋನಾ ಪ್ರಭಾವ ಬಿಂಬಿಸಲು ಔಷಧಿಗಳು, ಇಂಜೆಕ್ಷನ್ ಬಾಟಲುಗಳಿಂದ ದುರ್ಗಾಮಾತೆ ವಿಗ್ರಹ ರಚಿಸಿದ ಅಸ್ಸಾಂ ಕಲಾವಿದ

ಮಹಾಮಾರಿ ಕೊರೋನಾ ವೈರಸ್ ನಿಂದ ಇಡೀ ಜಗತ್ತೇ ತತ್ತರಿಸಿ ಹೋಗಿದ್ದು, ಸಾಂಕ್ರಾಮಿಕ ರೋಗ ಪ್ರಭಾವ ಬಿಂಬಿಸಲು 37 ವರ್ಷದ ಅಸ್ಸಾಂ ಕಲಾವಿದರೊಬ್ಬರು ಅವಧಿ ಮೀರಿದ ಟ್ಯಾಬ್ಲೆಟ್‌ಗಳು, ಕ್ಯಾಪ್ಸುಲ್‌ಗಳು ಮತ್ತು ಇಂಜೆಕ್ಷನ್ ಬಾಟಲುಗಳೊಂದಿಗೆ ದುರ್ಗಾಮಾತೆಯ ವಿಗ್ರಹವನ್ನು ರಚಿಸಿದ್ದಾರೆ.

ಧುಬ್ರಿ: ಮಹಾಮಾರಿ ಕೊರೋನಾ ವೈರಸ್ ನಿಂದ ಇಡೀ ಜಗತ್ತೇ ತತ್ತರಿಸಿ ಹೋಗಿದ್ದು, ಸಾಂಕ್ರಾಮಿಕ ರೋಗ ಪ್ರಭಾವ ಬಿಂಬಿಸಲು 37 ವರ್ಷದ ಅಸ್ಸಾಂ ಕಲಾವಿದರೊಬ್ಬರು ಅವಧಿ ಮೀರಿದ ಟ್ಯಾಬ್ಲೆಟ್‌ಗಳು, ಕ್ಯಾಪ್ಸುಲ್‌ಗಳು ಮತ್ತು ಇಂಜೆಕ್ಷನ್ ಬಾಟಲುಗಳೊಂದಿಗೆ ದುರ್ಗಾಮಾತೆಯ ವಿಗ್ರಹವನ್ನು ರಚಿಸಿದ್ದಾರೆ.

ಸರ್ಕಾರಿ ನೌಕರರಾಗಿರುವ ಕಲಾವಿದ ಸಂಜಿಬ್ ಬಸಕ್ ಅವರು ಕಳೆದ ಕೆಲವು ವರ್ಷಗಳಿಂದ, ವಿಗ್ರಹವನ್ನು ವಿನ್ಯಾಸಗೊಳಿಸಲು ವಿವಿಧ ನವೀನ ಮತ್ತು ಪರಿಸರ ಸ್ನೇಹಿ ವಿಚಾರಗಳನ್ನು ಮಂಡಿಸಿದ್ದಾರೆ. ಆದರೆ ಈ ವರ್ಷ, COVID-19 ಬಿಕ್ಕಟ್ಟಿನ ಮಧ್ಯೆ, ಅವರು ಒಂದು ಬದಲಾವಣೆ ಮಾಡಲು ಬಯಸಿದ್ದರು. ಹೀಗಾಗಿ ಅವಧಿ ಮೀರಿದ ಔಷಧಿ ಮತ್ತು ಇಂಜೆಕ್ಷನ್ ನಿಂದ ದೇವಿಯ ವಿಗ್ರಹ ರಚಿಸಿದ್ದಾರೆ.

"ಲಾಕ್ ಡೌನ್ ಸಮಯದಲ್ಲಿ, ಜನರು ಅಗತ್ಯ ಔಷಧಿಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಲು ಔಷಧಿ ಅಂಗಡಿಗಳ ಮುಂದೆ ಕ್ಯೂ ನಿಂತಿರುವುದನ್ನು ನಾನು ಗಮನಿಸಿದ್ದೇನೆ. ಹಾಗ ಸಾಂಕ್ರಾಮಿಕ ರೋಗವನ್ನು ಬಿಂಬಿಸಲು ನಾನು ದುರ್ಗಾಮಾತೆಯ ವಿಗ್ರಹವನ್ನು ಔಷಧಿಯಿಂದ ತಯಾರಿಸಬಹುದೆಂಬ ಆಲೋಚನೆ ಬಂತು "ಎಂದು ಬಸಕ್ ಅವರು ಪಿಟಿಐಗೆ ತಿಳಿಸಿದ್ದಾರೆ.

ಕಳೆದ ಐದು ತಿಂಗಳಿಂದ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಸುಮಾರು 40,000 ಸ್ಟ್ರಿಪ್ ಮಾತ್ರೆಗಳು, ಕ್ಯಾಪ್ಸುಲ್ಗಳು ಮತ್ತು ವಿವಿಧ ಬಣ್ಣಗಳ ಇಂಜೆಕ್ಷನ್ ಬಾಟಲುಗಳನ್ನು ಸಂಗ್ರಹಿಸಿ ದೇವಿಯ ವಿಗ್ರಹ ರಚಿಸಿರುವುದಾಗಿ ಬಸಕ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!

SIR ವೇಳೆ 1.08 ಕೋಟಿಗೂ ಅಧಿಕ ಮತದಾರರು ASDDO ಪಟ್ಟಿಗೆ: ಆಕ್ಷೇಪಣೆ ಸಲ್ಲಿಕೆ ಅವಧಿ ವಿಸ್ತರಿಸಬೇಕು- CECಗೆ ಸಿಎಂ ಶಿವಕುಮಾರ್ ಪತ್ರ!

ಕನಸು ಕೊನೆಗೂ ನನಸು: ಲಿಂಗ ಬದಲಿಸಿಕೊಂಡಿದ್ದ Anaya Bangarಗೆ ಕ್ರಿಕೆಟ್‌ಗೆ ಮರಳಲು ಗ್ರೀನ್ ಸಿಗ್ನಲ್!