ಸಾಂದರ್ಭಿಕ ಚಿತ್ರ 
ದೇಶ

ನೌಕಪಡೆಯ ಯುದ್ಧ ಸನ್ನದ್ಧತೆಯ ಪ್ರದರ್ಶನ: ಗುರಿ ಹೊಡೆಯುವ ಕ್ಷಿಪಣಿ ವಿಡಿಯೋ ಬಿಡುಗಡೆ

ಯುದ್ಧ ಸನ್ನದ್ಧತೆಯ ಪ್ರದರ್ಶನದಲ್ಲಿ, ಭಾರತೀಯ ನೌಕಾಪಡೆ ಶುಕ್ರವಾರ ಅರಬೀಯನ್ ಸಮುದ್ರದಲ್ಲಿ  ನಿಖರತೆ ಯೊಂದಿಗೆ ಹಡಗು ವಿರೋಧಿ ಕ್ಷಿಪಣಿ ಮುಳುಗುವ ಹಡಗೊಂದನ್ನು ನಾಶಪಡಿಸುವ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ.

ನವದೆಹಲಿ: ಯುದ್ಧ ಸನ್ನದ್ಧತೆಯ ಪ್ರದರ್ಶನದಲ್ಲಿ, ಭಾರತೀಯ ನೌಕಾಪಡೆ ಶುಕ್ರವಾರ ಅರಬೀಯನ್ ಸಮುದ್ರದಲ್ಲಿ  ನಿಖರತೆ ಯೊಂದಿಗೆ ಹಡಗು ವಿರೋಧಿ ಕ್ಷಿಪಣಿ ಮುಳುಗುವ ಹಡಗೊಂದನ್ನು ನಾಶಪಡಿಸುವ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ.

ವಿಮಾನ ವಾಹಕ ಐಎನ್ ಎಸ್ ವಿಕ್ರಮಾದಿತ್ಯ ಮತ್ತು ಅನೇಕ ಯುದ್ಧ ನೌಕೆಗಳು, ಹೆಲಿಕಾಪ್ಟ್ ರ್ ಗಳು ಮತ್ತಿತರ ನೌಕಪಡೆಯೊಂದಿಗೆ ಮೆಗಾ ನೌಕ ಕಾರ್ಯಚಾರಣೆಯ ಭಾಗವಾಗಿ ಕಾರ್ವೆಟ್ ಐಎನ್ ಎಸ್ ಪ್ರಬಲ್  ನಿಂದ ಈ ಕ್ಷಿಪಣಿಯನ್ನು ಹಾರಿಸಲಾಯಿತು.

ಗುರಿ ಇಡಲಾಗಿದ್ದ ಹಳೆಯ ವಿಮಾನವನ್ನು ಗರಿಷ್ಠ ಸಾಂದ್ರತೆಯಲ್ಲಿ ಭಯಾನಕವಾಗಿ, ನಿಖರತೆಯೊಂದಿಗೆ  ಕ್ಷಿಪಣಿ ಹೊಡೆದಿರುವುದಾಗಿ ಭಾರತೀಯ ನೌಕಪಡೆಯ ವಕ್ತಾರರು ಟ್ವೀಟ್ ಮಾಡಿದ್ದಾರೆ.

ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಗುರುವಾರ ಕಡಲು ಆಧಾರಿತ ವಿವಿಧ ಸ್ಥಳಗಳಲ್ಲಿ ಮತ್ತು ಸಮುದ್ರದಲ್ಲಿ ತನ್ನ ಸೈನ್ಯದ ಕಾರ್ಯಾಚರಣೆಯ ಸಿದ್ಧತೆಯನ್ನು ಪರಿಶೀಲಿಸಿದ್ದಾರೆ.

ಭಾರತದ ಏಕೈಕ ವಿಮಾನವಾಹಕ ನೌಕೆಯಾದ ಐಎನ್‌ಎಸ್ ವಿಕ್ರಮಾದಿತ್ಯ ಬಗ್ಗೆ ನೌಕಾಪಡೆಯ ಕ್ಯಾರಿಯರ್ ಬ್ಯಾಟಲ್ ಗ್ರೂಪ್‌ನ ಆಯ್ದ ಗುಂಪಿನವರನ್ನು ಉದ್ದೇಶಿಸಿ ಅವರು ಮಾತನಾಡಿದ್ದು,   ಒಟ್ಟಾರೆ ಯುದ್ಧ ಸಿದ್ಧತೆಯನ್ನು ಪರಿಶೀಲಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತ ಹಾಗೂ ಚೀನಾ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚೀನಾಕ್ಕೆ ಸಂದೇಶ ಕಳುಹಿಸುವ ಪ್ರಯತ್ನದಲ್ಲಿ ಭಾರತೀಯ ನೌಕಾಪಡೆ ಹಿಂದೂ ಮಹಾಸಾಗರ ಪ್ರದೇಶದಲ್ಲಿ ತನ್ನ ನಿಯೋಜನೆಯನ್ನು ಗಮನಾರ್ಹವಾಗಿ ಹೆಚ್ಚಿಸಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದ ಹೊರತಾಗಿಯೂ  ಭಾರತೀಯ ನೌಕಾಪಡೆ ಹೆಚ್ಚಿನ ಕಾರ್ಯಾಚರಣೆ ಮತ್ತು ಯುದ್ಧ-ಸಿದ್ಧತೆಯನ್ನು ಮುಂದುವರಿಸಿದೆ.  ಯುದ್ಧ ನೌಕೆಗಳು, ಜಲಾಂತರ್ಗಾಮಿ ನೌಕೆಗಳು ಮತ್ತು ವಿಮಾನ ಸ್ಕ್ವಾಡ್ರನ್‌ಗಳನ್ನು ಆಯಾ ಕಟ್ಟಿನ ಸ್ಥಳಗಳಲ್ಲಿ ನಿಯೋಜಿಸುವ ಮೂಲಕ ಕಡಲ ವಲಯದಲ್ಲಿನ ಸವಾಲುಗಳನ್ನು ಎದುರಿಸಲು ಸಂಪೂರ್ಣವಾಗಿ ಸಿದ್ಧವಾಗಿರುವುದಾಗಿ ನೌಕಾಪಡೆ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ, ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ 'ಸುಪ್ರೀಂ' ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

WPL 2026 auction: ಈ ಬಾರಿಯ 'ಮೋಸ್ಟ್ ಡಿಮ್ಯಾಂಡ್' ಆಟಗಾರ್ತಿ ಯಾರು?

SCROLL FOR NEXT