ದೇಶ

ನೀತಿ ಸಂಹಿತೆ ಉಲ್ಲಂಘನೆ: ಗುಜರಾತ್ ಸಿಎಂ ರೂಪಾನಿ ವಿರುದ್ಧ ಚು.ಆಯೋಗಕ್ಕೆ ಕಾಂಗ್ರೆಸ್ ದೂರು

Lingaraj Badiger

ಅಹಮದಾಬಾದ್: ಉಪ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಕಾಲರ್ ಟ್ಯೂನ್ ಮೂಲಕ ಕೊರೋನಾ ಜಾಗೃತಿ ಸಂದೇಶ ನೀಡುವ ಮೂಲಕ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್, ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ನವೆಂಬರ್ 3 ರಂದು ರಾಜ್ಯದ ಎಂಟು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ.

ಗುಜರಾತ್‌ನ ಇಸಿಐ ಮತ್ತು ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ ರಾಜ್ಯ ಕಾಂಗ್ರೆಸ್ ಮುಖಂಡ ನಿಶಿತ್ ವ್ಯಾಸ್ ರೂಪಾನಿ ಮತ್ತು ಆಡಳಿತಾರೂ BJP ಬಿಜೆಪಿ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕೋರಿದ್ದಾರೆ.

ರಾಜ್ಯ ಕಾಂಗ್ರೆಸ್ ನಾಯಕ ನಿಶಿತ್ ವ್ಯಾಸ್ ಅವರು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗೆ ದೂರು ನೀಡಿದ್ದು, ರೂಪಾನಿ ಅವರು "ಎಲ್ಲಾ ಮೊಬೈಲ್ ಟೆಲಿಫೋನ್ ಆಪರೇಟರ್‌ಗಳ ಮೂಲಕ ಮೊಬೈಲ್ ಫೋನ್ ರಿಂಗಣಿಸುವ ಮೊದಲು ತಮ್ಮ ಭಾಷಣವನ್ನು ಕಾಲರ್ ಟೂನ್ ಆಗಿ ಪ್ರಕಟಿಸುವ ಮೂಲಕ ಧರ್ಮದ ಹೆಸರಿನಲ್ಲಿ ಮತದಾರರ ಮೇಲೆ ಅನಗತ್ಯ ಪ್ರಭಾವ ಬೀರಿದ್ದಾರೆ" ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಕಾಲರ್ ಟೂನ್ ನಲ್ಲಿ, ಸಾಮಾಜಿಕ ಅಂತರ ಖಾತ್ರಿಪಡಿಸಿಕೊಳ್ಳುವ ಮೂಲಕ ಮತ್ತು ಮಾಸ್ಕ್ ಗಳನ್ನು ಧರಿಸುವ ಮೂಲಕ, ಸ್ಯಾನಿಟೈಜರ್‌ಗಳನ್ನು ಬಳಸುವ ಮೂಲಕ ನವರಾತ್ರಿ ಹಬ್ಬವನ್ನು ಸಂಯಮದಿಂದ ಆಚರಿಸುವಂತೆ ರೂಪಾನಿ ಜನರಿಗೆ ಸಲಹೆ ನೀಡಿದ್ದಾರೆ.

ಇನ್ನು ಕಾಂಗ್ರೆಸ್ ಆರೋಪವನ್ನು ಖಂಡಿಸಿದ ಸಿಎಂ ರೂಪಾನಿ, ಹಬ್ಬದ ಸಂದರ್ಭದಲ್ಲಿ ಜನರು ಸುರಕ್ಷಿತವಾಗಿರಲು ತೆಗೆದುಕೊಳ್ಳಬೇಕಾದ ಕ್ರಮಗಳಲ್ಲಿ ಇಂದು ಒಂದು ಎಂದಿದ್ದಾರೆ.

SCROLL FOR NEXT