ದೇಶ

ಕ್ಯಾಮೆರಾದಲ್ಲಿ ಸೆರೆ: ವಿವಾದಾತ್ಮಕ ಶಾಸಕ ಸುರೇಂದ್ರ ಸಿಂಗ್ ಮೇಲೆ ಹೂ ಮಳೆ ಸುರಿಸಿದ ಬಿಜೆಪಿ ರಾಜ್ಯಾಧ್ಯಕ್ಷ

Lingaraj Badiger

ಬಲ್ಲಿಯಾ: ಉತ್ತರ ಪ್ರದೇಶದ ಬಿಜೆಪಿ ರಾಜ್ಯಾಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಅವರು ತಮ್ಮ ಪಕ್ಷದ ವಿವಾದಾತ್ಮಕ ಶಾಸಕ ಸುರೇಂದ್ರ ಸಿಂಗ್ ಅವರ ಮೇಲೆ ಹೂ ಮಳೆ ಸುರಿಸುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ದುರ್ಜನ್ ಪುರ ಗ್ರಾಮದಲ್ಲಿ ನಡೆದ ಗುಂಡಿನ ದಾಳಿ ಪ್ರಕರಣದ ಪ್ರಮುಖ ಆರೋಪಿಯನ್ನು ಬೆಂಬಲಿಸುವ ಹೇಳಿಕೆ ನೀಡಿದ್ದ ಸುರೇಂದ್ರ ಸಿಂಗ್ ಅವರಿಗೆ ಬಿಜೆಪಿ ನೋಟಿಸ್ ನೀಡಿದ ಬೆನ್ನಲ್ಲೇ ರಾಜ್ಯಾಧ್ಯಕ್ಷರನ್ನು ವಿವಾದಾತ್ಮಕ ಶಾಸಕನಿಗೆ ಹೂ ಮಳೆ ಸುರಿಸಿ ಅಭಿನಂದಿಸಿರುವ ವಿಡಿಯೋ ಈಗ ವೈರಲ್ ಆಗಿದೆ.

ಸಿಕಂದರ್‌ಪುರ ಪ್ರದೇಶದ ಕಥೌಡಾ ಗ್ರಾಮದಲ್ಲಿರುವ ಕೃಷ್ಣ ದೇವಸ್ಥಾನದ 'ಭೂಮಿ ಪೂಜೆ' ಕಾರ್ಯಕ್ರಮದ ವೇಳೆ ಸ್ವತಂತ್ರ ದೇವ್ ಸಿಂಗ್ ಹಾಗೂ ಸುರೇಂದ್ರ ಸಿಂಗ್ ಅಕ್ಕಪಕ್ಕದಲ್ಲಿಯೇ ಕುಳಿತ್ತಿದ್ದಾರೆ. ಈ ವೇಳೆ ಸುರೇಂದ್ರ ಸಿಂಗ್ ಮೇಲೆ ರಾಜ್ಯ ಬಿಜೆಪಿ ಅಧ್ಯಕ್ಷರು ಹೂವಿನ ದಳಗಳನ್ನು ಸುರಿಸುತ್ತಾರೆ.

ಇನ್ನು ಈ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿದ, ಕಾರ್ಯಕ್ರಮದಲ್ಲಿ ಹಾಜರಿದ್ದ ಬಿಜೆಪಿಯ ಸಲೆಂಪೂರ್ ಸಂಸದ ರವೀಂದ್ರ ಕುಶ್ವಾಹಾ ಅವರು, ಸ್ವತಂತ್ರ ದೇವ್ ಸಿಂಗ್ ಅವರು ಮಾತ್ರ ಈ ಬಗ್ಗೆ ಉತ್ತರಿಸುತ್ತಾರೆ ಎಂದರು.

SCROLL FOR NEXT