ದೇಶ

ಕೊರೋನಾ ಸೋಂಕು ಅಂತ್ಯವಾದ ನಂತರ ರಾಜ್ಯದ ಪ್ರತಿಯೊಬ್ಬರಿಗೂ ರಾಮನ ದರ್ಶನಕ್ಕೆ ವ್ಯವಸ್ಥೆ: ಯೋಗಿ

Shilpa D

ಚಿತ್ರಕೂಟ: ಕೊರೋನಾ ಸಾಂಕ್ರಾಮಿಕ ರೋಗ ಅಂತ್ಯಗೊಂಡ ನಂತರ ರಾಜ್ಯದ ಪ್ರತಿ ಹಳ್ಳಿಯ ಎಲ್ಲಾವ್ಯಕ್ತಿಗೂ ಭಗವಾನ್ ರಾಮನ "ದರ್ಶನ" ಕ್ಕೆ ವ್ಯವಸ್ಥೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ. 

ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣ ಕಾರ್ಯ ನಡೆಯುತ್ತಿದೆ, ಕೊರೋನಾ ಸಮಸ್ಯೆ ಮುಗಿದ ಮೇಲೆ ರಾಜ್ಯದ ಪ್ರತಿಯೊಬ್ಬ ಪ್ರಜೆಗೂ ಭಗವಾನ್ ರಾಮನ ದರ್ಶನ ಮಾಡಲು ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.

ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಚಿತ್ರಕೂಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಎಲ್ಲರಿಗೂ ರಾಮದರ್ಶನದ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ.

SCROLL FOR NEXT