ದೇಶ

ಕಂಗನಾ ಬಿಜೆಪಿಯ ರಾಜಕೀಯ ಸಿದ್ಧಾಂತವನ್ನು ಮುಂದಕ್ಕೆ ಕೊಂಡೊಯ್ಯುತ್ತಿದ್ದಾರೆ: ಕಾಂಗ್ರೆಸ್

Lingaraj Badiger

ನವದೆಹಲಿ: ಬಾಲಿವುಡ್ ನಟ ಕಂಗನಾ ರನೌತ್ ತಮ್ಮ ಕಾರ್ಯಗಳ ಮೂಲಕ ಬಿಜೆಪಿಯ ರಾಜಕೀಯ ಸಿದ್ಧಾಂತವನ್ನು ಮುಂದಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂದು ಕಾಂಗ್ರೆಸ್ ಸೋಮವಾರ ಆರೋಪಿಸಿದೆ.

ನಟಿ ಕಂಗನಾ ಅವರು ಮಹಾರಾಷ್ಟ್ರವನ್ನು ಬಹಿರಂಗವಾಗಿ ದೂಷಿಸಲು ಮತ್ತು ಅಲ್ಲಿನ ಸಮ್ಮಿಶ್ರ ಸರ್ಕಾರವನ್ನು ಟೀಕಿಸಲು ಸಮ್ಮಿಶ್ರ ಸರ್ಕಾರ ಅವರಿಗೆ ಸೂಕ್ತ ಭದ್ರತೆ ನೀಡಿದೆ ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ರಂದೀಪ್ ಸುರ್ಜೇವಾಲ ಅವರು ಹೇಳಿದ್ದಾರೆ.

ಕಂಗನಾ ರನೌತ್ ಅವರು ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ(ಪಿಒಕೆ)  ಹೋಲಿಸುವುದು ಸರಿಯಲ್ಲ ಮತ್ತು ಖಂಡನೀಯ. ಯಾವುದೇ ವ್ಯಕ್ತಿ ಅವರ ಹೇಳಿಕೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

ಮೋದಿ ಜಿ ಮತ್ತು ಬಿಜೆಪಿಯ ಅಜೆಂಡಾವನ್ನು ಬಾಲವುಡ್ ನಟಿ ನಿರ್ವಹಿಸುತ್ತಿದ್ದರೂ, ನಾವು ಅವರಿಗೆ ಸಾಕಷ್ಟು ರಕ್ಷಣೆ ನೀಡುತ್ತೇವೆ ಎಂದು ಸುರ್ಜೇವಾಲ ಅವರು ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಆದಾಗ್ಯೂ, ದೇಶದ ವಾಣಿಜ್ಯ ನಗರಿ ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಎಂದು  ಹೇಳುವುದು ಸರಿಯಲ್ಲ. ಅದು ತಪ್ಪು. ಬಿಜೆಪಿಯಿಂದ ಚಲನಚಿತ್ರ ನಟಿಯರ ಮೂಲಕ ಎಸೆಯಲ್ಪಟ್ಟ ಇಂತಹ ಆಧಾರರಹಿತ ಮತ್ತು ರಾಜಕೀಯ ಪ್ರೇರಿತ ಆರೋಪಗಳನ್ನು ನಾವು ತಿರಸ್ಕರಿಸುತ್ತೇವೆ ಎಂದಿದ್ದಾರೆ.

SCROLL FOR NEXT