ದೇಶ

ರಾಜ್ಯಸಭೆ ಕಲಾಪ: ಅನಾರೋಗ್ಯದ ಕಾರಣ ರಜೆ ಕೋರಿದ ಮನಮೋಹನ್ ಸಿಂಗ್, ಚಿದಂಬರಂ

Lingaraj Badiger

ನವದೆಹಲಿ: ರಾಜ್ಯಸಭಾ ಸದಸ್ಯ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರು ವೈದ್ಯಕೀಯ ಆಧಾರದ ಮೇಲೆ ಪ್ರಸಕ್ತ ಮುಂಗಾರು ಅಧಿವೇಶನಕ್ಕೆ ಗೈರಾಗಲು ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ ಎಂದು ರಾಜ್ಯಸಭಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಬುಧವಾರ ಹೇಳಿದ್ದಾರೆ.

ವೈದ್ಯಕೀಯ ಕಾರಣಗಳಿಗಾಗಿ ರಜೆ ಕೋರಿ ಮನಮೋಹನ್ ಸಿಂಗ್ ಮತ್ತು ಇತರ 13 ಸಂಸದರಿಂದ ಪತ್ರಗಳು ಬಂದಿವೆ ಎಂದು ನಾಯ್ಡು ಸದನಕ್ಕೆ ಮಾಹಿತಿ ನೀಡಿದರು.

ಸಿಂಗ್ ಮತ್ತು ಚಿದಂಬರಂ ಅವರಲ್ಲದೆ, ಪಿಎಂಕೆ ಮುಖಂಡ ಅನ್ಬುಮಣಿ ರಾಮದಾಸ್, ಹಿರಿಯ ಕಾಂಗ್ರೆಸ್ ಮುಖಂಡ ಆಸ್ಕರ್ ಫರ್ನಾಂಡಿಸ್, ಎಐಎಡಿಎಂಕೆ ನ ನವನೀತಕೃಷ್ಣನ್ ಮತ್ತು ವೈಎಸ್ಆರ್ ಕಾಂಗ್ರೆಸ್ ಮುಖಂಡ ಮತ್ತು ಬಿಲಿಯನೇರ್ ಮುಖೇಶ್ ಅಂಬಾನಿ ಅವರ ಸಹಾಯಕ ಪರಿಮಲ್ ನಾಥ್ವಾನಿ ಸಹಾ ರಜೆ ಕೇಳಿದ್ದಾರೆ.

SCROLL FOR NEXT