ಸಾಂದರ್ಭಿಕ ಚಿತ್ರ 
ದೇಶ

ಕೋವಿಡ್-19 ಎರಡನೇ ಅಲೆ 100 ದಿನಗಳವರೆಗೆ ಇರಲಿದೆ: ತಜ್ಞರ ಸಲಹೆ 

ಕೊರೋನಾವೈರಸ್  ಎರಡನೇ ಅಲೆ 100 ದಿನಗಳವರೆಗೆ ಇರಲಿದೆ ಮತ್ತು ಜನಸಂಖ್ಯೆಯ ಶೇ. 70 ರಷ್ಟು ಲಸಿಕೆ ಮತ್ತು ರೋಗ ನಿರೋಧಕ ಶಕ್ತಿ ಸಾಧಿಸುವವರೆಗೂ ಇಂತಹ ಅಲೆಗಳು ಬರುತ್ತಲೆ ಇರುತ್ತವೆ ಎಂದು ಆಗ್ನೇಯ ದೆಹಲಿ ಪೊಲೀಸ್ ತಜ್ಞರು ಸಿದ್ಧಪಡಿಸಿರುವ ಸಲಹೆಗಳಲ್ಲಿ ಹೇಳಲಾಗಿದೆ. 

ನವದೆಹಲಿ: ಕೊರೋನಾವೈರಸ್  ಎರಡನೇ ಅಲೆ 100 ದಿನಗಳವರೆಗೆ ಇರಲಿದೆ ಮತ್ತು ಜನಸಂಖ್ಯೆಯ ಶೇ. 70 ರಷ್ಟು ಲಸಿಕೆ ಮತ್ತು ರೋಗ ನಿರೋಧಕ ಶಕ್ತಿ ಸಾಧಿಸುವವರೆಗೂ ಇಂತಹ ಅಲೆಗಳು ಬರುತ್ತಲೆ ಇರುತ್ತವೆ ಎಂದು ಆಗ್ನೇಯ ದೆಹಲಿ ಪೊಲೀಸ್ ತಜ್ಞರು ಸಿದ್ಧಪಡಿಸಿರುವ ಸಲಹೆಗಳಲ್ಲಿ ಹೇಳಲಾಗಿದೆ. 

ಪೊಲೀಸ್ ಸಿಬ್ಬಂದಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ, ಡಾ. ನೀರಜ್ ಕೌಶಿಕ್  ನೀಡಿರುವ ಸಲಹೆಯಲ್ಲಿ  ಹೊಸ ರೂಪಾಂತರಿತ ವೈರಸ್ ಲಸಿಕೆ ಹಾಕಿಸಿದ್ದರೂ ಸಹ ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತದೆ. ಆದಕಾರಣ,  ಲಸಿಕೆ ಪಡೆದ ಜನರಲ್ಲೂ ಪ್ರಕರಣಗಳು, ಮತ್ತೆ ಸೋಂಕು ಬರುತ್ತಿದೆ.  ಈ ರೂಪಾಂತರಿತ ವೈರಸ್  ಒಬ್ಬ ಸದಸ್ಯನಿಗೆ ಅಂಟಿಕೊಂಡರೆ ಇಡೀ ಕುಟುಂಬ ಸೋಂಕಿಗೆ ಒಳಗಾಗುತ್ತದೆ.

ಇದು ಮಕ್ಕಳ ಮೇಲೂ ಪರಿಣಾಮ ಬೀರುತ್ತದೆ  ಎಂದು ಡಾ. ಕೌಶಿಕ್ ವರದಿಯಲ್ಲಿ ತಿಳಿಸಿದ್ದಾರೆ. ನಿಯಮಿತ ಆರ್ ಟಿ- ಪಿಸಿಆರ್ ಪರೀಕ್ಷೆಗಳು ರೂಪಾಂತರಿ ವೈರಸ್ ನ್ನು ಪತ್ತೆ ಮಾಡದಿರಬಹುದು. ಆದಾಗ್ಯೂ, ವಾಸನೆ ಗೊತ್ತಾಗದಿದ್ದರೆ ಪಾಸಿಟಿವ್ ಬಂದಿದೆ ಎಂದು ತಿಳಿಯಬಹುದು ಎಂದು ಅವರು ಹೇಳಿದ್ದಾರೆ.

ಕೋವಿಡ್-19 ಎರಡನೇ ಅಲೆ 100 ದಿನಗಳವರೆಗೆ ಇರಬಹುದು. ಆದ್ದರಿಂದ ಮುಂಜಾಗ್ರತಾ ಕ್ರಮಗಳನ್ನು ನಿರ್ಲಕ್ಷಿಸಬೇಡಿ. ಕಡ್ಡಾಯವಾಗಿ ಮಾಸ್ಕ್ ಧರಿಸಿ ಎಂದು ಅವರು ಸಲಹೆ ನೀಡಿದ್ದಾರೆ. ಇತ್ತೀಚಿನ ಪ್ರವೃತ್ತಿಗಳ ಪ್ರಕಾರ ವೈರಸ್ ಮೇಲ್ಮೈ ಹರಡುವಿಕೆಯಿಂದ ಅಷ್ಟು ತೊಂದರೆಯಿಲ್ಲ ಇಲ್ಲ ಎಂಬುದು ತಿಳಿದುಬಂದಿದೆ. ಸೋಂಕಿತ ವ್ಯಕ್ತಿಯೊಂದಿಗೆ 15 ನಿಮಿಷಗಳಿಗಿಂತ ಹೆಚ್ಚು ಕಾಲ ಸಂಪರ್ಕಕ್ಕೆ  ನಡೆಸಿದಾಗ  ಸೋಂಕಿಗೆ ಒಳಗಾಗುವ ಸಾಧ್ಯತೆ ತುಂಬಾ ಹೆಚ್ಚಾಗುತ್ತದೆ ಎಂದು ಡಾ. ಕೌಶಿಕ್ ತಿಳಿಸಿದ್ದಾರೆ. 

ಬೊಜ್ಜು, ಮಧುಮೇಹ, ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಇತ್ಯಾದಿ ಇರುವವರು ಹೆಚ್ಚುವರಿ ಮುನ್ನೆಚ್ಚರಿಕೆ ವಹಿಸಬೇಕು, ಅತಿಯಾದ ವ್ಯಾಯಾಮ ಮತ್ತು ಜಂಕ್ ಫುಡ್ ಸೇವನೆಯನವ್ನು ತಪ್ಪಿಸಬೇಕು,  ಜ್ಯೂಸ್, ಎಳನೀರು ಕುಡಿಯಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

SCROLL FOR NEXT