ದೇಶ

ಮಧ್ಯಪ್ರದೇಶ: ಪ್ರವಾಹ ಪೀಡಿತ ಪ್ರದೇಶದಲ್ಲಿ ಕೇಂದ್ರ ಕೃಷಿ ಸಚಿವ ತೋಮರ್‌ಗೆ ಪ್ರತಿಭಟನೆ ಬಿಸಿ

Vishwanath S

ಭೋಪಾಲ್: ಕೇಂದ್ರ ಕೃಷಿ ಸಚಿವ, ಬಿಜೆಪಿ ಸಂಸದ ನರೇಂದ್ರ ಸಿಂಗ್ ತೋಮರ್ ಅವರು ಮಧ್ಯಪ್ರದೇಶದ ಶಿಯೋಪುರ್ ಪಟ್ಟಣದಲ್ಲಿ ಸ್ಥಳೀಯರಿಂದ ಭಾರೀ ಪ್ರತಿಭಟನೆಗಳನ್ನು ಎದುರಿಸಿದರು.

ಅಮ್ರಾಲ್ ಮತ್ತು ಸೀಪ್ ನದಿಗಳಲ್ಲಿನ ಭಾರೀ ಪ್ರವಾಹ ಪರಿಸ್ಥಿತಿಯ ತಪ್ಪಾದ ನಿರ್ವಹಣೆಯಿಂದಾಗಿ ಶಿಯೋಪುರ್ ಪಟ್ಟಣ ಪ್ರವಾಹಕ್ಕೆ ತುತ್ತಾಗುವಂತೆ ಮಾಡಿತ್ತು. ಇದರಿಂದ ಕೋಪಗೊಂಡ ಸ್ಥಳೀಯರು ಕೇಂದ್ರ ಸಚಿವರು ಪ್ರಯಾಣಿಸುತ್ತಿದ್ದ ಕಾರನ್ನು ತಡೆಯಲು ಪ್ರಯತ್ನಿಸಿದರು. ಅಲ್ಲದೆ ಕಪ್ಪು ಬಾವುಟ ಪ್ರದರ್ಶಿಸಿ ಕಾರಿನ ಮೇಲೆ ಮಣ್ಣನ್ನು ಎಸೆದರು.

ಕೇಂದ್ರ ಸಚಿವರು ಆಗಮಿಸುತ್ತಿದ್ದಂತೆ ಉದ್ರಿಕ್ತ ಪ್ರತಿಭಟನಾಕಾರರು ಒಟ್ಟಾಗಿ ಚಪ್ಪಾಳೆ ತಟ್ಟಿದರು. ಆದರೆ ಇದು ಸಂಸದರನ್ನು ಸ್ವಾಗತಿಸಲು ಅಲ್ಲ ಬದಲಿಗೆ ಸ್ಥಳೀಯ ಆಡಳಿತದ ದುರಾಡಳಿತವನ್ನು ವಿರೋಧಿಸಲು.

ಪ್ರವಾಹದಿಂದಾಗಿ ಗಣೇಶ ಬಜಾರ್ ಪ್ರದೇಶದಲ್ಲಿನ(ಶಿಯೋಪುರ ಪಟ್ಟಣದ ಮುಖ್ಯ ಮಾರುಕಟ್ಟೆ) ವ್ಯಾಪಾರಿಗಳು ಮತ್ತು ಕುಟುಂಬಗಳು ಭಾರೀ ನಷ್ಟವನ್ನು ಅನುಭವಿಸಿದ್ದವು.

ಕೇಂದ್ರ ಸಚಿವರು ಶಿಯೋಪುರ್ ಪಟ್ಟಣದ ಮುಖ್ಯ ಮಾರುಕಟ್ಟೆಯ ಮೂಲಕ ಹಾದು ಹೋಗುತ್ತಿದ್ದಾಗ ಉದ್ರಿಕ್ತರು ಪ್ರತಿಭಟನೆ ನಡೆಸಿದರು. ಅಲ್ಲದೆ ಜನನಿಬಿಡ ಬೀದಿಗಳಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ತೋಮರ್ ಅವರನ್ನು ತಳ್ಳಲು ಪ್ರಯತ್ನಿಸಿದರು.

SCROLL FOR NEXT