ವಿಂಗ್ ಕಮಾಂಡರ್ ಪೃಥ್ವಿ ಸಿಂಗ್ ಚೌವ್ಹಾಣ್ ಪಾರ್ಥಿವ ಶರೀರ 
ದೇಶ

ತಂದೆಯಂತೆ ವಾಯುಪಡೆ ಪೈಲಟ್ ಆಗಲು ಬಯಸಿದ ಮೃತ ಸೇನಾಧಿಕಾರಿ ಪುತ್ರಿ!

ಇತ್ತೀಚಿಗೆ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಜನರಲ್ ಬಿಪಿನ್ ರಾವತ್ ಮತ್ತಿತರ 11 ಮಂದಿಯೊಂದಿಗೆ ಸಾವನ್ನಪ್ಪಿದ್ದ ವಿಂಗ್ ಕಮಾಂಡರ್ ಪೃಥ್ವಿ ಸಿಂಗ್ ಚೌವ್ಹಾಣ್ ಅವರ 12 ವರ್ಷದ ಪುತ್ರಿ ಕೂಡಾ  ತನ್ನ ತಂದೆಯಂತೆ ವಾಯುಪಡೆ ಸೇರಿ ಪೈಲಟ್ ಆಗಲು ಬಯಸಿದ್ದಾಳೆ.

ನವದೆಹಲಿ: ಇತ್ತೀಚಿಗೆ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಜನರಲ್ ಬಿಪಿನ್ ರಾವತ್ ಮತ್ತಿತರ 11 ಮಂದಿಯೊಂದಿಗೆ ಸಾವನ್ನಪ್ಪಿದ್ದ ವಿಂಗ್ ಕಮಾಂಡರ್ ಪೃಥ್ವಿ ಸಿಂಗ್ ಚೌವ್ಹಾಣ್ ಅವರ 12 ವರ್ಷದ ಪುತ್ರಿ ಕೂಡಾ  ತನ್ನ ತಂದೆಯಂತೆ ವಾಯುಪಡೆ ಸೇರಿ ಪೈಲಟ್ ಆಗಲು ಬಯಸಿದ್ದಾಳೆ.

ಆಗ್ರಾದಲ್ಲಿನ ತಾಜ್ ಗಂಜ್ ಸಮಾಧಿಯಲ್ಲಿ ಕುಟುಂಬ ಸದಸ್ಯರು ಹಾಗೂ ಸಹೋದರ ಏಳು ವರ್ಷದ 7 ವರ್ಷದ ಅವಿರಾಜ್ ಜೊತೆಗೆ ತಂದೆಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ ಏಳನೇ ತರಗತಿ ವಿದ್ಯಾರ್ಥಿನಿ ಆರಾಧ್ಯ, ತಮ್ಮ ತಂದೆ ಹಿರೋ ಆಗಿರುವುದರಿಂದ ಅವರಂತೆ ಮುಂದೆ ತಾನೂ ಕೂಡಾ ಪೈಲಟ್ ಆಗುವುದಾಗಿ ಹೇಳಿದಳು.

ವಾಯುಪಡೆಯ ಅಧಿಕಾರಿಗಳು, ಆಗ್ರಾ ಜಿಲ್ಲಾಡಳಿತ, ಪೊಲೀಸರು ಮತ್ತಿತರರು ಅಗಲಿದ ವಿಂಗ್ ಕಮಾಂಡರ್ ಗೆ ಅಂತಿಮ ಗೌರವ ಸಲ್ಲಿಸಿದರು. ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸುವಂತೆ ನನ್ನ ತಂದೆ ಹೇಳುತ್ತಿದ್ದರು. ಅಧ್ಯಯನ ಕಡೆಗೆ ಗಮನ ಕೊಟ್ಟರೆ ಅಂಕಗಳು ಬರುವುದಾಗಿ ಅವರು ನಂಬಿದ್ದರು ಎಂದು ಆರಾಧ್ಯ ತಿಳಿಸಿದಳು. ಪೃಥ್ವಿ ಕುಟುಂಬ ಮಧ್ಯಪ್ರದೇಶದ ಗ್ವಾಲಿಯರ್ ನಿಂದ 2006ರಲ್ಲಿ ವಲಸೆ ಬಂದು, ಆಗ್ರಾದಲ್ಲಿ ನೆಲೆಸಿದೆ.  
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

ಡೆವಿಲ್‌' ಸಿನಿಮಾದ 'ಇದ್ರೆ ನೆಮ್ಮದಿಯಾಗಿ ಇರಬೇಕು' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT