ಜಗನ್ನಾಥ ಶೆಟ್ಟಿ 
ದೇಶ

ಪುಣೆ ನಿವಾಸಿಗಳಿಗೆ ದಕ್ಷಿಣ ಭಾರತದ ಊಟ-ತಿಂಡಿ ಪರಿಚಯಿಸಿದ್ದ ರೆಸ್ಟೋರೆಂಟ್‌ ಮಾಲೀಕ ಜಗನ್ನಾಥ ಶೆಟ್ಟಿ ನಿಧನ

: ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಮೂರು ರೆಸ್ಟೋರೆಂಟ್‌ಗಳ ಮಾಲೀಕರಾದ ಪುಣೆ ಮೂಲದ ಹಿರಿಯ ಹೋಟೆಲ್ ಉದ್ಯಮಿ ಜಗನ್ನಾಥ ಶೆಟ್ಟಿ ಭಾನುವಾರ ನಿಧನರಾಗಿದ್ದಾರೆ.

ಮುಂಬೈ: ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಮೂರು ರೆಸ್ಟೋರೆಂಟ್‌ಗಳ ಮಾಲೀಕರಾದ ಪುಣೆ ಮೂಲದ ಹಿರಿಯ ಹೋಟೆಲ್ ಉದ್ಯಮಿ ಜಗನ್ನಾಥ ಶೆಟ್ಟಿ ಭಾನುವಾರ ನಿಧನರಾಗಿದ್ದಾರೆ.

ಜಗನ್ನಾಥ್ ಅಣ್ಣಾ ಎಂದೇ ಅವರು ಜನಪ್ರಿಯವಾಗಿದ್ದರು. ಪುಣೆ ನಿವಾಸಿಗಳಿಗೆ ದಕ್ಷಿಣ ಭಾರತೀಯ ಪಾಕಪದ್ಧತಿ ಮತ್ತು ಥಾಲಿಗಳನ್ನು ಅಪಾರವಾಗಿ ಜನಪ್ರಿಯಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ವೈಶಾಲಿ, ರೂಪಾಲಿ ಮತ್ತು ಆಮ್ರಪಾಲಿ ಎಂಬ ಮೂರು ರೆಸ್ಟೋರೆಂಟ್‌ಗಳನ್ನು ಇವರು ಸ್ಥಾಪಿಸಿದ್ದಾರೆ.

ಪೂನಾವಾಲಾ, ಬಜಾಜ್‌, ಕಿರ್ಲೋಸ್ಕರ್‌ಗಳು ಮತ್ತು ಕಲ್ಯಾಣಿಗಳಂತಹ ಉನ್ನತ ವ್ಯಾಪಾರ ಕುಟುಂಬಗಳ ಸದಸ್ಯರಿಗೆ ವೈಶಾಲಿ ನೆಚ್ಚಿನ ರೆಸ್ಟೋರೆಂಟ್​ ಆಗಿತ್ತು. ಶೆಟ್ಟಿ ಅವರಿಗೆ 89 ವರ್ಷ ವಯಸ್ಸಾಗಿತ್ತು. ಅವರು ಪುತ್ರಿ ನಿಕಿತಾ ಮತ್ತು ಅಳಿಯ ಅಭಿಜೀತ್ ಅವರನ್ನು ಅಗಲಿದ್ದಾರೆ.

ಜಗನ್ನಾಥ್ ಅಣ್ಣಾ ಅವರು ದಕ್ಷಿಣ ಭಾರತದ ಪಾಕಪದ್ಧತಿಯನ್ನು ಅನೇಕ ತಲೆಮಾರುಗಳಿಂದ ಪುಣೆ ನಿವಾಸಿಗರಿಗೆ ಪರಿಚಯಿಸಿದ್ದರು. ಅವರು ತಮ್ಮ ಸಂಪತ್ತಿನ ಬಹುಪಾಲು ಭಾಗವನ್ನು ಅಸಂಖ್ಯಾತರ, ಸಾಮಾಜಿಕ ಕಾರ್ಯಗಳಿಗೆ ದಾನ ಮಾಡುತ್ತಿದ್ದರು. ವರದಕ್ಷಿಣೆ ವಿರೋಧಿ ಆಂದೋಲನವನ್ನು ಪ್ರಾರಂಭಿಸುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು.

ಯುವಕರಾಗಿದ್ದಾಗ ಜಗನ್ನಾಥ್ ಅವರು 13 ನೇ ವಯಸ್ಸಿನಲ್ಲಿ ತಮ್ಮ ಚಿಕ್ಕಪ್ಪನೊಂದಿಗೆ ಮುಂಬೈ ಬಳಿಯ ಕಲ್ಯಾಣ್‌ನಲ್ಲಿ ತಿಂಗಳಿಗೆ 3 ರೂ.ಗೆ ಕೆಲಸ ಮಾಡಲು ಮನೆ ತೊರೆದಿದ್ದರು. ಜಗನ್ನಾಥ ಅಣ್ಣ ಅವರು 1932ರ ಅಕ್ಟೋಬರ್ 8ರಂದು ದಕ್ಷಿಣ ಕೆನರಾದ ಕಾರ್ಕಳದ ಸಮೀಪದ ಬೈಲೂರಿನ ಓಣಿಮಜಲು ಮನೆಯಲ್ಲಿ ಜನಿಸಿದರು. ಮಹತ್ವಾಕಾಂಕ್ಷೆಯೊಂದಿಗೆ ಚಿಕ್ಕ ಹುಡುಗರಾಗಿದ್ದಾಗಲೇ 1949 ರಲ್ಲಿ 17 ನೇ ವಯಸ್ಸಿನಲ್ಲಿ ಪುಣೆಗೆ ಬಂದರು.

ಅವರು 1951 ರಲ್ಲಿ ಕೆಫೆ ಮದ್ರಾಸ್ (ಇಂದಿನ ರೂಪಾಲಿ) ಅನ್ನು ಪ್ರಾರಂಭಿಸಿದರು. ನಂತರ ಮದ್ರಾಸ್ ಹೆಲ್ತ್ ಹೋಮ್ ಅನ್ನು ಪ್ರಾರಂಭಿಸಿದಾಗ ಅವರ ಶ್ರಮಕ್ಕೆ ಫಲ ನೀಡಿತು. ಆ ದಿನಗಳಲ್ಲಿ ವೈಶಾಲಿ ಒಂದು ಸಣ್ಣ ರೆಸ್ಟೋರೆಂಟ್ ಆಗಿತ್ತು. ಇಂದು ಅವರ ರೆಸ್ಟೋರೆಂಟ್‌ಗಳು ಪುಣೆಯಲ್ಲಿ ಮನೆಮಾತಾಗಿವೆ ಮತ್ತು ಎಲ್ಲಾ ವಯಸ್ಸಿನ ಜನರಿಗೆ ಜನಪ್ರಿಯ ತಾಣಗಳಾಗಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Video: 80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! ಸಿಕ್ಕಿದೆಷ್ಟು ಗೊತ್ತಾ?

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

SCROLL FOR NEXT