ದೇಶ

ಸಂಸತ್ ಮುಂಗಾರು ಅಧಿವೇಶನ ಹಿನ್ನೆಲೆ, ಉಭಯ ಸದನಗಳಲ್ಲಿ ಪಕ್ಷದ ಸದಸ್ಯರ ಗುಂಪನ್ನು ಪುನರ್ ರಚಿಸಿದ ಸೋನಿಯಾ 

Nagaraja AB

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಹಿನ್ನೆಲೆಯಲ್ಲಿ ಉಭಯ ಸದನಗಳಲ್ಲಿ ಕಾರ್ಯಕಲಾಪ ಸುಗಮವಾಗಿ ಸಾಗಲು ಅನುವುವಾಗುವಂತೆ ಕಾಂಗ್ರೆಸ್ ಪಕ್ಷದ ಸದಸ್ಯರ ಗುಂಪುನ್ನು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಪುನರ್ ರಚಿಸಿದ್ದಾರೆ.

ಲೋಕಸಭೆಯಲ್ಲಿ ಅಧೀರ್ ರಂಜನ್ ಚೌದರಿ ನಾಯಕರಾಗಿದ್ದು, ಗೌರವ್ ಗೊಗೊಯ್ ಉಪನಾಯಕರಾಗಿದ್ದಾರೆ. ಕೆ. ಸುರೇಶ್ - ಮುಖ್ಯ ವಿಪ್ ,ಮನೀಶ್ ತಿವಾರಿ ಡಾ. ಶಶಿ ತರೂರ್, ರಾವ್ನೀತ್ ಸಿಂಗ್ ಬಿಟ್ಟು- ವಿಪ್ ,ಮಾಣಿಕಂ ಟ್ಯಾಗೋರ್- ವಿಪ್ ಆಗಿ ನೇಮಕಗೊಂಡಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಯ ನಾಯಕರಾಗಿದ್ದು, ಆನಂದ್ ಶರ್ಮಾ ಉಪನಾಯಕರಾಗಿದ್ದಾರೆ. ಜೈರಾಮ್ ರಮೇಶ್- ಮುಖ್ಯ ವಿಪ್ ,ಅಂಬಿಕಾ ಸೋನಿ, ಪಿ. ಚಿದಂಬರಂ, ದಿಗ್ವಿಜಯ್ ಸಿಂಗ್  ಕೆ. ಸಿ. ವೇಣುಗೋಪಾಲ್ ಉಳಿದ ಸದಸ್ಯರಾಗಿದ್ದಾರೆ.

ಈ ಗುಂಪುಗಳ ಜಂಟಿ ಸಭೆಗಳನ್ನು ಕರೆಯಬಹುದಾಗಿದೆ ಮತ್ತು ಅಗತ್ಯವಿದ್ದಾಗ ಮಲ್ಲಿಕಾರ್ಜುನ ಖರ್ಗೆ ಜಂಟಿ ಸಭೆಗಳ 
ಕನ್ವೀನರ್ ಆಗಿರುತ್ತಾರೆ  ಎಂದು ಸೋನಿಯಾ ಗಾಂಧಿ ತಿಳಿಸಿದ್ದಾರೆ.

SCROLL FOR NEXT