ಸೋನು ಸೂದ್ 
ದೇಶ

ಚಿತ್ತೂರು: ಕೋವಿಡ್ ರೋಗಿಯ ಆಸ್ಪತ್ರೆ ಬಿಲ್ ಸೆಟಲ್ ಮಾಡಿದ ಸೋನು ಸೂದ್

ಬಾಲಿವುಡ್ ನಟ ಸೋನು ಸೂದ್ ಕೋವಿಡ್ ರೋಗಿಯೊಬ್ಬರಿಗೆ ಸಹಾಯ ಮಾಡುವ ಮೂಲಕ ಮತ್ತೆ ಮಾನವೀಯತೆ ಮೆರೆದಿದ್ದಾರೆ.

ಚಿತ್ತೂರು: ಬಾಲಿವುಡ್ ನಟ ಸೋನು ಸೂದ್ ಕೋವಿಡ್ ರೋಗಿಯೊಬ್ಬರಿಗೆ ಸಹಾಯ ಮಾಡುವ ಮೂಲಕ ಮತ್ತೆ ಮಾನವೀಯತೆ ಮೆರೆದಿದ್ದಾರೆ.

ಚಿತ್ತೂರಿನ ಕೋವಿಡ್ ರೋಗಿಗೆ ಹಣಕಾಸಿನ ನೆರವು ನೀಡಿದ್ದಾರೆ. ಪೆನುಮೂರು ಮಂಡಲ್ ಫೋಟೋಗ್ರಾಫರ್ ಎನ್ ವೆಂಕಟೇಶ್ ಮೇ 18 ರಂದು ಕೋವಿಡ್ ಪಾಸಿಟಿವ್ ನಿಂದಾಗಿ ಚಿತ್ತೂರಿನ ಖಾಸಗಿ ಆಸ್ಪತ್ರೆಗೆ  ಆರೋಗ್ಯ ಶ್ರೀ ಯೋಜನೆಯಡಿ ದಾಖಲಾಗಿದ್ದರು.

ಆದರೆ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಅವರನ್ನು ತಿರುಪತಿಯ ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಸಲಹೆ ನೀಡಿದರು,  ಅದರಂತೆ ವೆಂಕಟೇಶ್ ಅವರನ್ನು ಶಿಫ್ಟ್ ಮಾಡಲಾಯಿತು, ಆದರೆ ಆರೋಗ್ಯಶ್ರೀ ಯೋಜನೆಯಡಿ ಅವರಿಗೆ ಬೆಡ್ ಲಭ್ಯವಾಗಲಿಲ್ಲ., ಹೀಗಾಗಿ ಹಣ ನೀಡಿ ಬೆಡ್ ಪಡೆದುಕೊಂಡೆವು ಎಂದು ವೆಂಕಟೇಶ್ ಸಹೋದರ ಸುರೇಂದ್ರ ತಿಳಿಸಿದ್ದಾರೆ.

ಕೆಲವು ದಿನಗಳ ಚಿಕಿತ್ಸೆ ನಂತರ ನನ್ನ ಸಹೋದರನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದು, ಡಿಸ್ಚಾರ್ಜ್ ಮಾಡಲು ರೆಡಿಯಾದರು. ಆಸ್ಪತ್ರೆ ಬಿಲ್ 3.50 ಲಕ್ಷ ಆಗಿತ್ತು.  ಆದರೆ ಅಷ್ಟು ಹಣ ಪಾವತಿಸಲು ಅವರು ಶಕ್ತರಾಗಿರಲಿಲ್ಲ, ಹೀಗಾಗಲೇ ಖಾಸಗಿ ಲೇವಾದೇವಿದಾರರಿಂದ 2 ಲಕ್ಷ ರು ಹಣ ಸಾಲ ಪಡೆದಿದ್ದರು.

ಆಸ್ಪತ್ರೆ ಬಿಲ್ ಪಾವತಿಸಲು ಒಂದೂವರೆ ಲಕ್ಷ ರು ಹಣ ಅಗತ್ಯವಿತ್ತು, ಆಗಗ ಸುರೇಂದ್ರ ತಮ್ಮ ಸಂಬಂಧಿ ಚಿಂತನ್ ಬಳಿ ಈ ವಿಷಯ ತಿಳಿಸಿದ್ದಾರೆ, ಚಿಂತನ್ ಕೂಡಲೇ ಟ್ವಿಟ್ಟರ್ ನಲ್ಲಿ ಈ ವಿಷಯ ಬರೆದು  ಸೋನು ಸೂದ್ ಅವರಿಗೆ ಟ್ಯಾಗ್ ಮಾಡಿದ್ದರು. ಈ ಟ್ವೀಟ್ ಗೆ ಪ್ರಾಮಾಣಿಕವಾಗಿ ಸ್ಪಂದಿಸಿದ  ಸೋನು ಸೂದ್ ತಮ್ಮ ಸೂದ್ ಚಾರಿಟಿ ಟ್ರಸ್ಟ್ ಮೂಲಕ ವೆಂಕಟೇಶ್ ಅವರಿಗೆ ಸಹಾಯ ಮಾಡಿದ್ದಾರೆ.

ಸೂದ್ ಚಾರಿಟೆಬಲ್ ಫೌಂಡೇಶನ್ ನ ಪ್ರತಿನಿಧಿಯೊಬ್ಬರು ವೆಂಕಟೇಶ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಆಸ್ಪತ್ರೆ ಬಗ್ಗೆ ವಿವರಿಸಿದ್ದಾರೆ, ಸೂದ್ ಫೌಂಡೇಶನ್ ಪ್ರತಿನಿಧಿ ಆಸ್ಪತ್ರೆಯ ಬಿಲ್ ಅನ್ನು 2.50 ಲಕ್ಷ ರೂ.ಗೆ ಇತ್ಯರ್ಥಪಡಿಸಿದ್ದರು, ಎಂದು ಸುರೇಂದ್ರ ಮಾಹಿತಿ ನೀಡಿದರು. "ಸೋನು ಸೂದ್ ಅವರ ಆರ್ಥಿಕ ಸಹಾಯಕ್ಕಾಗಿ ನಾವು ತುಂಬಾ ಕೃತಜ್ಞರಾಗಿರುತ್ತೇವೆ" ಎಂದು ಅವರು ಹೇಳಿದರು. ಅಂತಿಮ ಮಸೂದೆಯನ್ನು ಸೂದ್ ಚಾರಿಟಿ ಫೌಂಡೇಶನ್ ಇತ್ಯರ್ಥಪಡಿಸಿದ ನಂತರ ಮೇ 30 ರಂದು ವೆಂಕಟೇಶ್ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು. ಪಿತಾಪುರಂನ ಇಂದಿರಾ ನಗರದಿಂದ ಕೋವಿಡ್ -19 ರೋಗಿಗೆ ಸೋನು ಸೂದ್ ಆಕ್ಸಿಜನ್ ಕಾನ್ಟಂಟ್ರೇಟರ್ ಒದಗಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಪರಸ್ತ್ರೀ ಮೋಹ, ನಂಬಿಕೆ ದ್ರೋಹ: ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

SCROLL FOR NEXT