ಶಶಿಕಲಾ 
ದೇಶ

ಎಐಎಡಿಎಂಕೆಯ ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಶಶಿಕಲಾರ ಮತ್ತೊಂದು ಆಡಿಯೋ ಬಿಡುಗಡೆ!

ತಮಿಳುನಾಡು ವಿಧಾನಸಭೆಯಲ್ಲಿ ಎಐಎಡಿಎಂಕೆಯ ಉಪ ನಾಯಕ ಮತ್ತು ವಿಪ್ ಆಯ್ಕೆಗಾಗಿ ಜೂನ್ 14 ರಂದು ಶಾಸಕಾಂಗ ಪಕ್ಷದ ಸಭೆ ನಿಗದಿಯಾಗಿದೆ

ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ಎಐಎಡಿಎಂಕೆಯ ಉಪ ನಾಯಕ ಮತ್ತು ವಿಪ್ ಆಯ್ಕೆಗಾಗಿ ಜೂನ್ 14 ರಂದು ಶಾಸಕಾಂಗ ಪಕ್ಷದ ಸಭೆ ನಿಗದಿಯಾಗಿದೆ. ಎಐಎಡಿಎಂಕೆ ಕಾರ್ಯಕರ್ತರೊಂದಿಗೆ ವಿ.ಕೆ.ಶಶಿಕಲಾ ಪ್ರತಿದಿನ ಮಾತನಾಡುತ್ತಿರುವ ಆಡಿಯೋ ರೆಕಾರ್ಡಿಂಗ್ ಬಿಡುಗಡೆ ಮಧ್ಯೆ ನಡೆಯುತ್ತಿರುವ ಸಭೆ ಮಹತ್ವ ಪಡೆದುಕೊಂಡಿದ್ದು, ಅವರು ಶೀಘ್ರ ರಾಜಕೀಯಕ್ಕೆ ಮರಳಲಿದ್ದಾರೆ ಎಂಬ ಭರವಸೆಯನ್ನು ಕಾರ್ಯಕರ್ತರಲ್ಲಿ ಮೂಡಿಸಿದೆ.

ಶಶಿಕಲಾ ಎಐಎಡಿಎಂಕೆ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿರುವ ಮತ್ತೊಂದು ಆಡಿಯೋ ರೆಕಾರ್ಡಿಂಗ್ ಗುರುವಾರ ಬಿಡುಗಡೆಯಾಗಿದೆ. ಅದರಲ್ಲಿ ಎಐಎಡಿಎಂಕೆ ತನ್ನಿಂದ ಬೇರೆಯಾಗಲ್ಲ ಎಂದು ಹೇಳಿದ್ದಾರೆ. ಇಂದಿನ ಆಡಿಯೊದಲ್ಲಿ, ಮೊದಲ ಬಾರಿಗೆ ಶಶಿಕಲಾ ಎಐಎಡಿಎಂಕೆ ಎಂದು ಸ್ಪಷ್ಟವಾಗಿ ಹೆಸರಿಸಿದ್ದರೆ, ಹಿಂದಿನ ಆಡಿಯೋಗಳಲ್ಲಿ  ಅವರು ಅದನ್ನು 'ಕಚ್ಚಿ' (ಪಕ್ಷ) ಎಂದು ಉಲ್ಲೇಖಿಸಿದ್ದರು. 

ಇದಕ್ಕೂ ಮುನ್ನ ಎಐಎಡಿಎಂಕೆ ಮುಖಂಡ ಎಡಪ್ಪಾಡಿ ಕೆ ಪಳನಿಸ್ವಾಮಿ, ಟಿಟಿವಿ ದಿನಕರ್ ನಡೆಸುತ್ತಿರುವ ಎಎಂಎಂಕೆ ಪಕ್ಷಕ್ಕೆ ಮರಳುವುದಾಗಿ ಶಶಿಕಲಾ ಹೇಳುತ್ತಿರಬಹುದೆಂದು ಈ ವಿಷಯವನ್ನು ಬದಿಗಿಟ್ಟಿದ್ದರು. ಈ ಮಧ್ಯೆ ಒ. ಪಳನಿಸ್ವಾಮಿ ಮತ್ತು ಎಡಪ್ಪಾಡಿ ಕೆ ಪಳನಿಸ್ವಾಮಿ ಬೆಂಬಲಿಗರ ನಡುವಣ ಫೋಸ್ಟರ್ ವಾರ್ ತಿರುನೆಲ್ವೇಲಿ ಜಿಲ್ಲೆಯಲ್ಲಿ ಮುಂದುವರೆದಿದೆ. ಗುರುವಾರ, ಪನ್ನೀರ್‌ಸೆಲ್ವಂ ಬೆಂಬಲಿಸುವ ಪೋಸ್ಟರ್‌ಗಳಿಗೆ ಪ್ರತಿಕ್ರಿಯೆಯಾಗಿ, ಪಳನಿಸ್ವಾಮಿ ಬೆಂಬಲಿಗರು ಪ್ರತಿಪಕ್ಷದ ನಾಯಕರಾಗಿ ಅವರ ಚುನಾವಣೆಯನ್ನು ಶ್ಲಾಘಿಸುವ ಪೋಸ್ಟರ್‌ಗಳನ್ನು ಸಹ ಹಾಕಿದರು.

ಆದಾಗ್ಯೂ, ಪಳನಿಸ್ವಾಮಿ ತಿಂಗಳ ಹಿಂದಷ್ಟೇ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗಿದ್ದು, ಉಪ ನಾಯಕ ಮತ್ತು ವಿಪ್ ಸ್ಥಾನಕ್ಕೆ ಚುನಾವಣೆ ವಿಳಂಬವಾಗುತ್ತಿದೆ. ಪಳನಿಸ್ವಾಮಿ ಮತ್ತು ಪನ್ನೀರ್ ಸೆಲ್ವಂ ನಡುವಣ ಭಿನ್ನಾಭಿಪ್ರಾಯವೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ತಮಿಳುನಾಡು ವಿಧಾನಸಭೆಯ ಪ್ರಮುಖ ಸ್ಥಾನಗಳಲ್ಲಿ ವಿಪ್ ಕೂಡಾ ಒಂದಾಗಿದೆ. ಪ್ರತಿಪಕ್ಷದ ಉಪ ನಾಯಕ ಹುದ್ದೆ ಸ್ವೀಕರಿಸುವ ಮನಸ್ಥಿತಿಯಲ್ಲಿ ಪನ್ನೀರ್‌ಸೆಲ್ವಂ ಇಲ್ಲ, ಆದರೆ ಅವರ ಬೆಂಬಲಿಗರೊಬ್ಬರಿಗೆ ವಿಪ್ ಹುದ್ದೆ ನಿರೀಕ್ಷಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಸರ್ಕಾರ ಹೊರಡಿಸಿರುವ ಕೋವಿಡ್ ಮಾರ್ಗಸೂಚಿ ಮತ್ತಿತರ ಮುಂಜಾಗ್ರತಾ ಕ್ರಮಗಳೊಂದಿಗೆ ಜೂನ್ 14 ರಂದು ಪಕ್ಷದ ಶಾಸಕಾಂಗ ಸಭೆ ನಡೆಸುವುದಾಗಿ ಎಐಎಡಿಎಂಕೆ ನಗರದ ಪೊಲೀಸರಿಂದ ಅನುಮತಿಯನ್ನು ಕೋರಿದ್ದಾರೆ. ಅಂದು ಪಕ್ಷದ ಕಚೇರಿಗೆ ಆಗಮಿಸಲು ಎಲ್ಲಾ ಶಾಸಕರು ಗುರುತಿನ ಕಾರ್ಡ್ ತರಬೇಕು ಎಂದು ಎಐಎಡಿಎಂಕೆ ಕೇಂದ್ರ ಕಚೇರಿಯಿಂದ ಅಧಿಕೃತ ಹೇಳಿಕೆಯನ್ನು ನೀಡಲಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT