ಶಶಿಕಲಾ 
ದೇಶ

ಎಐಎಡಿಎಂಕೆಯ ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಶಶಿಕಲಾರ ಮತ್ತೊಂದು ಆಡಿಯೋ ಬಿಡುಗಡೆ!

ತಮಿಳುನಾಡು ವಿಧಾನಸಭೆಯಲ್ಲಿ ಎಐಎಡಿಎಂಕೆಯ ಉಪ ನಾಯಕ ಮತ್ತು ವಿಪ್ ಆಯ್ಕೆಗಾಗಿ ಜೂನ್ 14 ರಂದು ಶಾಸಕಾಂಗ ಪಕ್ಷದ ಸಭೆ ನಿಗದಿಯಾಗಿದೆ

ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ಎಐಎಡಿಎಂಕೆಯ ಉಪ ನಾಯಕ ಮತ್ತು ವಿಪ್ ಆಯ್ಕೆಗಾಗಿ ಜೂನ್ 14 ರಂದು ಶಾಸಕಾಂಗ ಪಕ್ಷದ ಸಭೆ ನಿಗದಿಯಾಗಿದೆ. ಎಐಎಡಿಎಂಕೆ ಕಾರ್ಯಕರ್ತರೊಂದಿಗೆ ವಿ.ಕೆ.ಶಶಿಕಲಾ ಪ್ರತಿದಿನ ಮಾತನಾಡುತ್ತಿರುವ ಆಡಿಯೋ ರೆಕಾರ್ಡಿಂಗ್ ಬಿಡುಗಡೆ ಮಧ್ಯೆ ನಡೆಯುತ್ತಿರುವ ಸಭೆ ಮಹತ್ವ ಪಡೆದುಕೊಂಡಿದ್ದು, ಅವರು ಶೀಘ್ರ ರಾಜಕೀಯಕ್ಕೆ ಮರಳಲಿದ್ದಾರೆ ಎಂಬ ಭರವಸೆಯನ್ನು ಕಾರ್ಯಕರ್ತರಲ್ಲಿ ಮೂಡಿಸಿದೆ.

ಶಶಿಕಲಾ ಎಐಎಡಿಎಂಕೆ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿರುವ ಮತ್ತೊಂದು ಆಡಿಯೋ ರೆಕಾರ್ಡಿಂಗ್ ಗುರುವಾರ ಬಿಡುಗಡೆಯಾಗಿದೆ. ಅದರಲ್ಲಿ ಎಐಎಡಿಎಂಕೆ ತನ್ನಿಂದ ಬೇರೆಯಾಗಲ್ಲ ಎಂದು ಹೇಳಿದ್ದಾರೆ. ಇಂದಿನ ಆಡಿಯೊದಲ್ಲಿ, ಮೊದಲ ಬಾರಿಗೆ ಶಶಿಕಲಾ ಎಐಎಡಿಎಂಕೆ ಎಂದು ಸ್ಪಷ್ಟವಾಗಿ ಹೆಸರಿಸಿದ್ದರೆ, ಹಿಂದಿನ ಆಡಿಯೋಗಳಲ್ಲಿ  ಅವರು ಅದನ್ನು 'ಕಚ್ಚಿ' (ಪಕ್ಷ) ಎಂದು ಉಲ್ಲೇಖಿಸಿದ್ದರು. 

ಇದಕ್ಕೂ ಮುನ್ನ ಎಐಎಡಿಎಂಕೆ ಮುಖಂಡ ಎಡಪ್ಪಾಡಿ ಕೆ ಪಳನಿಸ್ವಾಮಿ, ಟಿಟಿವಿ ದಿನಕರ್ ನಡೆಸುತ್ತಿರುವ ಎಎಂಎಂಕೆ ಪಕ್ಷಕ್ಕೆ ಮರಳುವುದಾಗಿ ಶಶಿಕಲಾ ಹೇಳುತ್ತಿರಬಹುದೆಂದು ಈ ವಿಷಯವನ್ನು ಬದಿಗಿಟ್ಟಿದ್ದರು. ಈ ಮಧ್ಯೆ ಒ. ಪಳನಿಸ್ವಾಮಿ ಮತ್ತು ಎಡಪ್ಪಾಡಿ ಕೆ ಪಳನಿಸ್ವಾಮಿ ಬೆಂಬಲಿಗರ ನಡುವಣ ಫೋಸ್ಟರ್ ವಾರ್ ತಿರುನೆಲ್ವೇಲಿ ಜಿಲ್ಲೆಯಲ್ಲಿ ಮುಂದುವರೆದಿದೆ. ಗುರುವಾರ, ಪನ್ನೀರ್‌ಸೆಲ್ವಂ ಬೆಂಬಲಿಸುವ ಪೋಸ್ಟರ್‌ಗಳಿಗೆ ಪ್ರತಿಕ್ರಿಯೆಯಾಗಿ, ಪಳನಿಸ್ವಾಮಿ ಬೆಂಬಲಿಗರು ಪ್ರತಿಪಕ್ಷದ ನಾಯಕರಾಗಿ ಅವರ ಚುನಾವಣೆಯನ್ನು ಶ್ಲಾಘಿಸುವ ಪೋಸ್ಟರ್‌ಗಳನ್ನು ಸಹ ಹಾಕಿದರು.

ಆದಾಗ್ಯೂ, ಪಳನಿಸ್ವಾಮಿ ತಿಂಗಳ ಹಿಂದಷ್ಟೇ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗಿದ್ದು, ಉಪ ನಾಯಕ ಮತ್ತು ವಿಪ್ ಸ್ಥಾನಕ್ಕೆ ಚುನಾವಣೆ ವಿಳಂಬವಾಗುತ್ತಿದೆ. ಪಳನಿಸ್ವಾಮಿ ಮತ್ತು ಪನ್ನೀರ್ ಸೆಲ್ವಂ ನಡುವಣ ಭಿನ್ನಾಭಿಪ್ರಾಯವೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ತಮಿಳುನಾಡು ವಿಧಾನಸಭೆಯ ಪ್ರಮುಖ ಸ್ಥಾನಗಳಲ್ಲಿ ವಿಪ್ ಕೂಡಾ ಒಂದಾಗಿದೆ. ಪ್ರತಿಪಕ್ಷದ ಉಪ ನಾಯಕ ಹುದ್ದೆ ಸ್ವೀಕರಿಸುವ ಮನಸ್ಥಿತಿಯಲ್ಲಿ ಪನ್ನೀರ್‌ಸೆಲ್ವಂ ಇಲ್ಲ, ಆದರೆ ಅವರ ಬೆಂಬಲಿಗರೊಬ್ಬರಿಗೆ ವಿಪ್ ಹುದ್ದೆ ನಿರೀಕ್ಷಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಸರ್ಕಾರ ಹೊರಡಿಸಿರುವ ಕೋವಿಡ್ ಮಾರ್ಗಸೂಚಿ ಮತ್ತಿತರ ಮುಂಜಾಗ್ರತಾ ಕ್ರಮಗಳೊಂದಿಗೆ ಜೂನ್ 14 ರಂದು ಪಕ್ಷದ ಶಾಸಕಾಂಗ ಸಭೆ ನಡೆಸುವುದಾಗಿ ಎಐಎಡಿಎಂಕೆ ನಗರದ ಪೊಲೀಸರಿಂದ ಅನುಮತಿಯನ್ನು ಕೋರಿದ್ದಾರೆ. ಅಂದು ಪಕ್ಷದ ಕಚೇರಿಗೆ ಆಗಮಿಸಲು ಎಲ್ಲಾ ಶಾಸಕರು ಗುರುತಿನ ಕಾರ್ಡ್ ತರಬೇಕು ಎಂದು ಎಐಎಡಿಎಂಕೆ ಕೇಂದ್ರ ಕಚೇರಿಯಿಂದ ಅಧಿಕೃತ ಹೇಳಿಕೆಯನ್ನು ನೀಡಲಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

SCROLL FOR NEXT