ಸಂಗ್ರಹ ಚಿತ್ರ 
ದೇಶ

ಕೋವಿಡ್-19 ವಿರುದ್ಧ ಹೋರಾಡಲು ಪ್ರತಿಕಾಯ ಕಾಕ್ಟೈಲ್ ಆಶಾಕಿರಣ: ಆದರೆ ದುಬಾರಿ ಬೆಲೆ!

ಸೌಮ್ಯ, ‌ಮಧ್ಯಮ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕಾಗಿ ಪ್ರತಿಕಾಯ ಕಾಕ್ಟೈಲ್ ನ್ನು ಅನುಮೋದಿಸಿದ ಒಂದು ತಿಂಗಳಲ್ಲಿ ಗಮನಾರ್ಹ ಫಲಿತಾಂಶಗಳು ಪ್ರಕಟವಾಗಿದೆ ಎಂದು ಹಲವಾರು ಖಾಸಗಿ ಆಸ್ಪತ್ರೆಗಳು ಹೇಳಿವೆ. 

ನವದೆಹಲಿ: ಸೌಮ್ಯ, ‌ಮಧ್ಯಮ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕಾಗಿ ಪ್ರತಿಕಾಯ ಕಾಕ್ಟೈಲ್ ನ್ನು ಅನುಮೋದಿಸಿದ ಒಂದು ತಿಂಗಳಲ್ಲಿ ಗಮನಾರ್ಹ ಫಲಿತಾಂಶಗಳು ಪ್ರಕಟವಾಗಿದೆ ಎಂದು ಹಲವಾರು ಖಾಸಗಿ ಆಸ್ಪತ್ರೆಗಳು ಹೇಳಿವೆ. 

ಆದರೆ ಚಿಕಿತ್ಸೆಗೆ ತಗುಲುವ ಬೆಲೆ ಹೆಚ್ಚಿರುವ ಕಾರಣದಿಂದಾಗಿ ಹಾಗೂ ಉತ್ಪಾದನೆಯಲ್ಲಿರುವ ಸಂಕೀರ್ಣ ಪ್ರಕ್ರಿಯೆಗಳಿಂದಾಗಿ ಕೋವಿಡ್-19 ವಿರುದ್ಧ ವ್ಯಾಪಕವಾಗಿ ಬಳಕೆ ಮಾಡುವುದಕ್ಕೆ ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ. 

ಮೋನೋಕ್ಲೋನಲ್‌ ಆ್ಯಂಟಿಬಾಡಿಗಳು ಪ್ರಯೋಗಾಲಯದಲ್ಲಿ ತಯಾರಾದ ಪ್ರೊಟೋನ್ ಗಳಾಗಿದ್ದು,  (ಪ್ರತಿಕಾಯಗಳ ತದ್ರೂಪು)  

ಮೋನೋಕ್ಲೋನಲ್ ಆ್ಯಂಟಿಬಾಡಿ ಪ್ರಯೋಗಾಲಯದಲ್ಲಿ ರಚಿಸಲಾದ ಈ ಪ್ರತಿಕಾಯಗಳು ಪ್ರತಿಜನಕವನ್ನು ಎದುರಿಸಲು ಅವುಗಳನ್ನು ಗುರಿಯಾಗಿಸಲಾಗಿದೆ. ಈ ಚಿಕಿತ್ಸಾ ವಿಧಾನವನ್ನು ಮೊದಲು ಅಮೆರಿಕಾದಲ್ಲಿ ಅಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಕೋವಿಡ್-19 ವೈರಾಣು ಸೋಂಕು ತಗುಲಿದಾಗ ಪ್ರಯೋಗಿಸಿದ ಕೆಲವೇ ತಿಂಗಳಲ್ಲಿ ಅನುಮೋದಿಸಲಾಗಿತ್ತು. 

ಕೋವಿಡ್-19 ಸೋಂಕು ಸೌಮ್ಯ ಹಾಗೂ ‌ಮಧ್ಯಮ ಪ್ರಮಾಣದಲ್ಲಿರುವ, ಮಧುಮೇಹ, ಹೃದಯ ರೋಗ, ಸ್ಟ್ರೋಕ್, ಹೈಪರ್ ಟೆನ್ಷನ್, ಕಿಡ್ನಿ ಸಮಸ್ಯೆ, ಲಿವರ್, ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿರುವ  ಸೋಂಕಿನ ರೋಗಿಗಳಿಗೆ ಕೋವಿಡ್-19 ಹೆಚ್ಚಳವಾಗದಂತೆ ತಡೆಗಟ್ಟುವುದಕ್ಕೆ ಮೋನೋಕ್ಲೋನಲ್‌ ಆ್ಯಂಟಿಬಾಡಿಗಳನ್ನು ಬಳಕೆ ಮಾಡಲಾಗುತ್ತದೆ. ಹೈಪೊಕ್ಸಿಯಾ ಅಥವಾ ಆಸ್ಪತ್ರೆಗೆ ಅಗತ್ಯವಿರುವವರಿಗೆ ಪ್ರತಿಕಾಯ ಕಾಕ್ಟೈಲ್ ಕೆಲಸ ಮಾಡುವುದಿಲ್ಲ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?