ಸೋನು ಸೂದ್ 
ದೇಶ

ಐಎಎಸ್ ಆಕಾಂಕ್ಷಿಗಳಿಗೆ ಉಚಿತ ಕೋಚಿಂಗ್ ನಟ ಸೋನು ಸೂದ್ ರಿಂದ ಸ್ಕಾಲರ್ ಶಿಪ್ ಘೋಷಣೆ!

ಬಾಲಿವುಡ್ ನಟ ಸೋನು ಸೂದ್ ಭಾರತೀಯ ಆಡಳಿತ ಸೇವೆಗಳ (ಐಎಎಸ್) ಆಕಾಂಕ್ಷಿಗಳಿಗೆ ಉಚಿತ ತರಬೇತಿಗಾಗಿ ಸ್ಕಾಲರ್ ಶಿಪ್ ಘೋಷಿಸಿದ್ದಾರೆ.

ಕೋವಿಡ್ ಸಾಂಕ್ರಾಮಿಕದ ಮಧ್ಯೆ ಬಾಲಿವುಡ್ ನಟ ಸೋನು ಸೂದ್ ತಮ್ಮ ಸಮಾಜ ಸೇವೆ ಕೆಲಸಕ್ಕೆ ಹೆಸರಾಗಿದ್ದಾರೆ. ಸಾಂಕ್ರಾಮಿಕ ಸಮಯದಲ್ಲಿ ಅಸಂಖ್ಯಾತ ಕುಟುಂಬಗಳಿಗೆ ಬೆಂಬಲ ನೀಡಿ ಮನೆಮಾತಾಗಿದ್ದಾರೆ. ಆದಾಗ್ಯೂ, ಅವರ ದತ್ತಿ ಉಪಕ್ರಮಗಳು ಕೇವಲಕೋವಿಡ್  ರೋಗಿಗಳಿಗೆ ಅಥವಾ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವವರಿಗೆ ಮಾತ್ರ ಸೀಮಿತವಾಗಿಲ್ಲ. ನಟ ಭಾರತೀಯ ಆಡಳಿತ ಸೇವೆಗಳ (ಐಎಎಸ್) ಆಕಾಂಕ್ಷಿಗಳಿಗೆ ಉಚಿತ ತರಬೇತಿಗಾಗಿ ಸ್ಕಾಲರ್ ಶಿಪ್ ಘೋಷಿಸಿದ್ದಾರೆ.

ಯುಪಿಎಸ್ಸಿಯಂತಹ ಪರೀಕ್ಷೆಗಳನ್ನು ಬರೆಯಲು ಐಎಎಸ್ ಗೆ ಸೇರಲು ಬಯಸುವ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ಸ್ಕಾಲರ್ ಶಿಪ್ ಒದಗಿಸುವುದಾಗಿ ನಟ ತನ್ನ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ 'ಸಂಭವಂ' ಎಂಬ ಉಪಕ್ರಮದ ಬಗ್ಗೆ ಬರೆದುಕೊಂಡಿದ್ದಾರೆ. "ನೀವು ಐಎಎಸ್ ಗೆ ತಯಾರಿ ನಡೆಸಲು ಬಯಸಿದರೆ, ನಾವು ನಿಮ್ಮ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇವೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.

ಸೋನು ಸೂದ್ ಚಾರಿಟಿ ಫೌಂಡೇಶನ್ ವೆಬ್‌ಸೈಟ್ ಪ್ರಕಾರ, ಸ್ಕಾಲರ್ ಶಿಪ್ ಗಾಗಿ ನೋಂದಾಯಿಸಲು ಕೊನೆಯ ದಿನಾಂಕ 2021 ಜೂನ್ 30 ಆಗಿದೆ. 

ಆಕಾಂಕ್ಷಿಗಳು www.soodcharityfoundation.org ಗೆ ಭೇಟಿ ನೀಡುವ ಮೂಲಕ ಫೌಂಡೇಶನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು

ಶನಿವಾರ ಪೋಸ್ಟ್ ಮಾಡಿದ ತನ್ನ ಇತ್ತೀಚಿನ ಟ್ವೀಟ್‌ನಲ್ಲಿ ಸೂದ್ ಹೀಗೆ ಹೇಳಿದ್ದಾರೆ- : "ಜೀವನವು ನಿಮ್ಮನ್ನು ಆರ್ಥಿಕವಾಗಿ ಸಬಲವಾಗಿಸಿದಾಗ ನಿಮ್ಮ ಜೀವನ ಮಟ್ಟವನ್ನು ಹೆಚ್ಚಿಸಿಕೊಳ್ಳುವ ಬದಲು . ನಿಮ್ಮ ದಾನದ ಗುಣಮಟ್ಟವನ್ನು ಹೆಚ್ಚಿಸಿ." ಎಂದು ಹೇಳಿದ್ದಾರೆ.

ಸಾಂಕ್ರಾಮಿಕ ರೋಗದ ಮಧ್ಯೆ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳಿಗೆ ಉಚಿತ ಶಿಕ್ಷಣವನ್ನು ಸೋನು ಆಗಾಗ್ಗೆ ಪ್ರತಿಪಾದಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ, ಮಾರಣಾಂತಿಕ ವೈರಸ್ ವಿರುದ್ಧದ ಯುದ್ಧದಲ್ಲಿ ಪೋಷಕರನ್ನು ಕಳೆದುಕೊಂಡ  ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ಒದಗಿಸಲು ಪಂಜಾಬ್‌ನ ಸಿಟಿ ವಿಶ್ವವಿದ್ಯಾಲಯದೊಂದಿಗಿನ ಸಹಯೋಗವನ್ನು ಅವರು ಘೋಷಿಸಿದ್ದರು.

ಇ-ರಿಕ್ಷಾ ಮತ್ತು ಇತರ ವಿಧಾನಗಳ ಮೂಲಕ ಉದ್ಯೋಗವನ್ನು ಒದಗಿಸುವುದರಿಂದ ಹಿಡಿದು ವೈದ್ಯಕೀಯ ಚಿಕಿತ್ಸೆಯನ್ನು ನೀಡುವವರೆಗೆ ಜನರಿಗೆ ಸಹಾಯ ಮಾಡಲು ಸೋನು ಹಲವಾರು ಬಗೆಯಲ್ಲಿ ನೆರವಾಗುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT