ಮುಕುಲ್ ರಾಯ್ 
ದೇಶ

ಮುಕುಲ್ ರಾಯ್ ಬಿಜೆಪಿಯಿಂದ ನಿರ್ಗಮನದಿಂದ ಹಿಂದಿ ಪ್ರಾಬಲ್ಯವಿಲ್ಲದ ಪ್ರದೇಶಗಳಲ್ಲಿ ಬಿಜೆಪಿ ವಿಸ್ತರಣೆಗೆ ಹಿನ್ನೆಡೆ

ಮುಕುಲ್ ರಾಯ್ ಬಿಜೆಪಿಯಿಂದ ನಿರ್ಗಮನ, ಹಿಂದಿ ಪ್ರಾಬಲ್ಯವಿಲ್ಲದ ಪ್ರದೇಶಗಳಲ್ಲಿ ಪಕ್ಷ ವಿಸ್ತರಿಸುವ ಬಿಜೆಪಿ ಪ್ರಯತ್ನಕ್ಕೆ ಹಿನ್ನೆಡೆಯಾಗಿದೆ ಎಂದು ವರದಿಗಳು ಹೇಳಿವೆ.

ನವದೆಹಲಿ: ಮುಕುಲ್ ರಾಯ್ ಬಿಜೆಪಿಯಿಂದ ನಿರ್ಗಮನ, ಹಿಂದಿ ಪ್ರಾಬಲ್ಯವಿಲ್ಲದ ಪ್ರದೇಶಗಳಲ್ಲಿ ಪಕ್ಷ ವಿಸ್ತರಿಸುವ ಬಿಜೆಪಿ ಪ್ರಯತ್ನಕ್ಕೆ ಹಿನ್ನೆಡೆಯಾಗಿದೆ ಎಂದು ವರದಿಗಳು ಹೇಳಿವೆ. ಹಿಂದಿ ಬೆಲ್ಟ್ ಅಲ್ಲದ ಬಹುತೇಕ ಪ್ರದೇಶಗಳು ಬಿಜೆಪಿಯ ಹಿಂದೂತ್ವ ಸಿದ್ಧಾಂತದ ನೆಲೆಗಳಾಗಿ ಇಲ್ಲ. ಅಂತಹ ಕಡೆಯಿಂದ ಬಿಜೆಪಿ ಸೇರುವವರು ಕೂಡಾ ಪಕ್ಷದ ಅದೇ ಸಿದ್ದಾಂತ ಮತ್ತು ನಂಬಿಕೆಗೆ ಬದ್ಧರಾಗಿರುವುದಿಲ್ಲ. 

ಇನ್ನೂ ಅದರ ಪ್ರಮುಖ ಪ್ರಾಬಲ್ಯ ಹೊಂದಿರುವ ಪ್ರದೇಶಗಳನ್ನು ಮೀರಿ ವಿಸ್ತರಿಸುವ ಅವಶ್ಯಕತೆಯಿದೆ.ಆದ್ದರಿಂದ 2014 ರಿಂದ ಬಿಜೆಪಿ ಇತರ ಪಕ್ಷಗಳ ನಾಯಕರು ಮತ್ತು ಕಾರ್ಮಿಕರಿಗೆ ಸಹಕಾರ ನೀಡಿದ್ದು, ಈಶಾನ್ಯದಲ್ಲೂ ಅದರ ವಿಸ್ತರಣೆಗೆ ಕಾರಣವಾಗಿದೆ.

2019ರ ಲೋಕಸಭಾ ಚುನಾವಣೆ ನಂತರ ದೇಶಾದ್ಯಂತ ಪಕ್ಷ ವಿಸ್ತರಿಸುವ ಮಹತ್ವಾಕಾಂಕ್ಷೆಯಲ್ಲಿ 13 ಉಪಾಧ್ಯಕ್ಷರನ್ನು ಬಿಜೆಪಿ ನೇಮಕ ಮಾಡಿತ್ತು. ಆದರೆ, ಅವುಗಳು ಪಕ್ಷಕ್ಕೆ ಮಾತ್ರ ಸೀಮಿತವಾಗಿರುತ್ತವೆ. ಪಶ್ಚಿಮ ಬಂಗಾಳ ಮಾತ್ರವಲ್ಲ, ತ್ರಿಪುರಾ, ಗೋವಾ ಮತ್ತು ಉತ್ತರ ಪ್ರದೇಶದಲ್ಲೂ ಬಿಜೆಪಿಗೆ ಇದರ ವಾಸ್ತವಿಕ ಅರಿವಾಗಿದೆ.

ಸಾಂಪ್ರಾದಾಯಿಕ ಪ್ರಾಬಲ್ಯವಿರುವ ಪ್ರದೇಶಗಳನ್ನು ಹೊರತುಪಡಿಸಿದಂತೆ  ತೆಲಂಗಾಣ, ಆಂಧ್ರಪ್ರದೇಶ, ಕೇರಳ, ಓಡಿಶಾದಲ್ಲೂ ಪಕ್ಷ ಸಂಘಟನೆಯಾಗಬೇಕಿದೆ. ಇತರ ಪಕ್ಷಗಳಲ್ಲಿ ಅನೇಕ ಉತ್ತಮ ಜನರಿದ್ದಾರೆ, ಅವರು ಬಿಜೆಪಿಗೆ ಸೇರುವ ಮೂಲಕ ಉತ್ತಮ ಕೊಡುಗೆ ನೀಡಬಹುದು ಎಂದು ಹಿರಿಯ ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT