ಮುಕುಲ್ ರಾಯ್ 
ದೇಶ

ಮುಕುಲ್ ರಾಯ್ ಬಿಜೆಪಿಯಿಂದ ನಿರ್ಗಮನದಿಂದ ಹಿಂದಿ ಪ್ರಾಬಲ್ಯವಿಲ್ಲದ ಪ್ರದೇಶಗಳಲ್ಲಿ ಬಿಜೆಪಿ ವಿಸ್ತರಣೆಗೆ ಹಿನ್ನೆಡೆ

ಮುಕುಲ್ ರಾಯ್ ಬಿಜೆಪಿಯಿಂದ ನಿರ್ಗಮನ, ಹಿಂದಿ ಪ್ರಾಬಲ್ಯವಿಲ್ಲದ ಪ್ರದೇಶಗಳಲ್ಲಿ ಪಕ್ಷ ವಿಸ್ತರಿಸುವ ಬಿಜೆಪಿ ಪ್ರಯತ್ನಕ್ಕೆ ಹಿನ್ನೆಡೆಯಾಗಿದೆ ಎಂದು ವರದಿಗಳು ಹೇಳಿವೆ.

ನವದೆಹಲಿ: ಮುಕುಲ್ ರಾಯ್ ಬಿಜೆಪಿಯಿಂದ ನಿರ್ಗಮನ, ಹಿಂದಿ ಪ್ರಾಬಲ್ಯವಿಲ್ಲದ ಪ್ರದೇಶಗಳಲ್ಲಿ ಪಕ್ಷ ವಿಸ್ತರಿಸುವ ಬಿಜೆಪಿ ಪ್ರಯತ್ನಕ್ಕೆ ಹಿನ್ನೆಡೆಯಾಗಿದೆ ಎಂದು ವರದಿಗಳು ಹೇಳಿವೆ. ಹಿಂದಿ ಬೆಲ್ಟ್ ಅಲ್ಲದ ಬಹುತೇಕ ಪ್ರದೇಶಗಳು ಬಿಜೆಪಿಯ ಹಿಂದೂತ್ವ ಸಿದ್ಧಾಂತದ ನೆಲೆಗಳಾಗಿ ಇಲ್ಲ. ಅಂತಹ ಕಡೆಯಿಂದ ಬಿಜೆಪಿ ಸೇರುವವರು ಕೂಡಾ ಪಕ್ಷದ ಅದೇ ಸಿದ್ದಾಂತ ಮತ್ತು ನಂಬಿಕೆಗೆ ಬದ್ಧರಾಗಿರುವುದಿಲ್ಲ. 

ಇನ್ನೂ ಅದರ ಪ್ರಮುಖ ಪ್ರಾಬಲ್ಯ ಹೊಂದಿರುವ ಪ್ರದೇಶಗಳನ್ನು ಮೀರಿ ವಿಸ್ತರಿಸುವ ಅವಶ್ಯಕತೆಯಿದೆ.ಆದ್ದರಿಂದ 2014 ರಿಂದ ಬಿಜೆಪಿ ಇತರ ಪಕ್ಷಗಳ ನಾಯಕರು ಮತ್ತು ಕಾರ್ಮಿಕರಿಗೆ ಸಹಕಾರ ನೀಡಿದ್ದು, ಈಶಾನ್ಯದಲ್ಲೂ ಅದರ ವಿಸ್ತರಣೆಗೆ ಕಾರಣವಾಗಿದೆ.

2019ರ ಲೋಕಸಭಾ ಚುನಾವಣೆ ನಂತರ ದೇಶಾದ್ಯಂತ ಪಕ್ಷ ವಿಸ್ತರಿಸುವ ಮಹತ್ವಾಕಾಂಕ್ಷೆಯಲ್ಲಿ 13 ಉಪಾಧ್ಯಕ್ಷರನ್ನು ಬಿಜೆಪಿ ನೇಮಕ ಮಾಡಿತ್ತು. ಆದರೆ, ಅವುಗಳು ಪಕ್ಷಕ್ಕೆ ಮಾತ್ರ ಸೀಮಿತವಾಗಿರುತ್ತವೆ. ಪಶ್ಚಿಮ ಬಂಗಾಳ ಮಾತ್ರವಲ್ಲ, ತ್ರಿಪುರಾ, ಗೋವಾ ಮತ್ತು ಉತ್ತರ ಪ್ರದೇಶದಲ್ಲೂ ಬಿಜೆಪಿಗೆ ಇದರ ವಾಸ್ತವಿಕ ಅರಿವಾಗಿದೆ.

ಸಾಂಪ್ರಾದಾಯಿಕ ಪ್ರಾಬಲ್ಯವಿರುವ ಪ್ರದೇಶಗಳನ್ನು ಹೊರತುಪಡಿಸಿದಂತೆ  ತೆಲಂಗಾಣ, ಆಂಧ್ರಪ್ರದೇಶ, ಕೇರಳ, ಓಡಿಶಾದಲ್ಲೂ ಪಕ್ಷ ಸಂಘಟನೆಯಾಗಬೇಕಿದೆ. ಇತರ ಪಕ್ಷಗಳಲ್ಲಿ ಅನೇಕ ಉತ್ತಮ ಜನರಿದ್ದಾರೆ, ಅವರು ಬಿಜೆಪಿಗೆ ಸೇರುವ ಮೂಲಕ ಉತ್ತಮ ಕೊಡುಗೆ ನೀಡಬಹುದು ಎಂದು ಹಿರಿಯ ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

ನೀವೇನ್ ಮುಚ್ಚೋದು.. ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ; ಇರಾನ್ ಗೆ ಟ್ರಂಪ್ ಶಾಕ್!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್; KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

SCROLL FOR NEXT