ಲಸಿಕೆ (ಸಂಗ್ರಹ ಚಿತ್ರ) 
ದೇಶ

ಭಾರತದಲ್ಲಿ ಲಸಿಕೆ ಹಾಕಿಸಿಕೊಂಡ ನಂತರದ ಮೊದಲ ಸಾವು ವರದಿ

ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ದೇಶದಲ್ಲಿ ಲಸಿಕೆಗೆ ಸಂಬಂಧಿಸಿದ ಸಾವಿನ ಪ್ರಕರಣವನ್ನು ವರದಿ ಮಾಡಿದೆ.

ನವದೆಹಲಿ: ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ದೇಶದಲ್ಲಿ ಲಸಿಕೆಗೆ ಸಂಬಂಧಿಸಿದ ಸಾವಿನ ಪ್ರಕರಣವನ್ನು ವರದಿ ಮಾಡಿದೆ.

ಕೊರೋನಾ ವೈರಾಣುವಿನ ವಿರುದ್ಧದ ಲಸಿಕೆ ಅಭಿಯಾನ ಪ್ರಾರಂಭವಾದ ದಿನದಿಂದಲೂ ಈ ವರೆಗೂ ಲಸಿಕೆಗೆ ಸಂಬಂಧಿಸಿದ ಸಾವು ಸಂಭವಿಸಿರಲಿಲ್ಲ. ಲಸಿಕೆ ಪಡೆದ 7 ಜನರು ಮೃತಪಟ್ಟಿದ್ದರಾದರೂ ಅದಕ್ಕೂ ಲಸಿಕೆಗೂ ಸಂಬಂಧ ಕಲ್ಪಿಸುವ ಅಂಶಗಳು ದೃಢಪಡದ ಕಾರಣ ಲಸಿಕೆಯಿಂದ ಉಂಟಾದ ಸಾವು ಎಂದು ಪರಿಗಣಿಸಲಾಗಿರಲಿಲ್ಲ. 

ಮಾ.21 ರಂದು 68 ವರ್ಷದ ವ್ಯಕ್ತಿಯೋರ್ವರು ಕೊರೋನಾ ಲಸಿಕೆ ಪಡೆದ ನಂತರ ಮೃತಪಟ್ಟಿದ್ದರು. ಇದಕ್ಕೆ ತೀವ್ರವಾದ ಅಲರ್ಜಿ ಪ್ರತಿಕ್ರಿಯೆ ಕಾರಣ ಎನ್ನಲಾಗಿದ್ದು, ಆದರೆ ಆ ವ್ಯಕ್ತಿಗೆ ಕೋವಿಶೀಲ್ಡ್ ನೀಡಲಾಗಿತ್ತೇ ಅಥವಾ ಕೋವ್ಯಾಕ್ಸೀನ್ ನೀಡಲಾಗಿತ್ತೇ? ಎಂಬ ಬಗ್ಗೆ ಮಾಹಿತಿ ಖಚಿತವಾಗಿಲ್ಲ.

ಸರ್ಕಾರದ ಅಧಿಕಾರಿಗಳು ಈ ಬಗ್ಗೆ ಮಾತನಾಡಿದ್ದು, ಲಸಿಕೆಯ ನಂತರದಲ್ಲಿ ಉಂಟಾಗುವ ಪರಿಣಾಮಗಳ ಕುರಿತಾದ ಡಾಟವನ್ನು ಪಾರದರ್ಶಕ ಪ್ರಕ್ರಿಯೆಯ ಭಾಗವಾಗಿ ಬಿಡುಗಡೆ ಮಾಡಬೇಕೆ ಹೊರತು ಲಸಿಕೆ ಕುರಿತ ಅನುಮಾನ ಮೂಡಿಸುವುದಕ್ಕೆ ಅಲ್ಲ ಎಂದು ಹೇಳಿದ್ದರು.

ಲಸಿಕೆ ಪಡೆದ ಬಳಿಕ ವರದಿಯಾಗಿದ್ದ 31 ತೀವ್ರವಾದ ಎಇಎಫ್ಐ ಪ್ರಕರಣಗಳ ಕಾರಣತ್ವವನ್ನು ಮೌಲ್ಯಮಾಪನದಲ್ಲಿ ಲಸಿಕೆಯಿಂದ ಸಾವನ್ನಪ್ಪಿರುವುದು ದೃಢಪಟ್ಟಿದ್ದು ಜೂ.04 ರಂದು ಈ ಕುರಿತ ವರದಿಯನ್ನು ಕೇಂದ್ರಕ್ಕೆ ವರದಿಯನ್ನು ಸಲ್ಲಿಸಲಾಗಿದೆ.

ಈ ಪೈಕಿ 18 ಸಾವುಗಳು ಲಸಿಕೆಗೆ ಹೊರತಾದ ಕಾರಣಗಳನ್ನು ಹೊಂದಿವೆ, 7 ಪ್ರಕರಣಗಳಲ್ಲಿ ಲಸಿಕೆಯೇ ಕಾರಣ ಎಂಬುದಕ್ಕೆ ನಿರ್ದಿಷ್ಟ ಅಂಶಗಳು ಪತ್ತೆಯಾಗಿಲ್ಲ, 3 ಪ್ರಕರಣಗಳಲ್ಲಿ ಲಸಿಕೆಯ ಉತ್ಪನ್ನಕ್ಕೆ ಸಂಬಂಧಿಸಿದ ಸಾವು ಸಂಭವಿಸಿದ್ದು, 1 ಪ್ರಕರಣದಲ್ಲಿ  ಆತಂಕ ಸಾವಿಗೆ ಕಾರಣವಾಗಿದೆ. 2 ಪ್ರಕರಣಗಳು ವರ್ಗೀಕರಿಸಲಾಗದ್ದು ಎಂದು ವರದಿಯಲ್ಲಿ ಹೇಳಿದೆ.

ಲಸಿಕೆಯಿಂದ ಉಂಟಾದ ಸಾವಿನ ಬಗ್ಗೆ ಲಸಿಕೆ ನೀಡಿಕೆಗೆ ಇರುವ ಸಲಹಾ ಸಮಿತಿಯ ಮುಖ್ಯಸ್ಥ ವಿಕೆ ಪೌಲ್ ಇದನ್ನು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ನೋಡಬೇಕೆಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT