ದೇಶ

ಕೊರೋನಾ ಪರಿಹಾರ ಪ್ಯಾಕೇಜ್ ಕೇಂದ್ರ ಸರ್ಕಾರದ ಕಣ್ಣೊರೆಸುವ ತಂತ್ರ: ರಾಹುಲ್ ಗಾಂಧಿ ಕಿಡಿ

Vishwanath S

ನವದೆಹಲಿ: ಕೋವಿಡ್ ಪೀಡಿತ ಜನರಿಗೆ ನೆರವು ನೀಡಲು ಮತ್ತು ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸಲು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಘೋಷಿಸಿರುವ ಹಣಕಾಸು ಪ್ಯಾಕೇಜ್ 'ಕಣ್ಣೊರೆಸುವ ತಂತ್ರ' ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಂಗಳವಾರ ಟೀಕಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ವಯನಾಡ್ ಸಂಸದ ಯಾವುದೇ ಕುಟುಂಬವು ಹಣಕಾಸು ಸಚಿವರ ಆರ್ಥಿಕ ಪ್ಯಾಕೇಜ್ ಅನ್ನು ಅವರ ಜೀವನ, ಆಹಾರ, ಔಷಧಿ ಮತ್ತು ಮಕ್ಕಳ ಶಿಕ್ಷಣಕ್ಕಾಗಿ ಖರ್ಚು ಮಾಡಲು ಸಾಧ್ಯವಿಲ್ಲ. ಇದು ಪ್ಯಾಕೇಜ್ ಅಲ್ಲ, ಇದು ವಂಚನೆ' ಎಂದರು.

ಕೊರೋನಾವೈರಸ್ ಪೀಡಿತ ಆರ್ಥಿಕತೆಯನ್ನು ಹೆಚ್ಚಿಸಲು ಆರೋಗ್ಯ ರಕ್ಷಣೆಯನ್ನು ಹೆಚ್ಚಿಸಲು ಮತ್ತು ಸಣ್ಣ ಸಂಸ್ಥೆಗಳಿಗೆ ಅಗ್ಗದ ಸಾಲವನ್ನು ನೀಡಲು ಎಂ.ಎಸ್.ಸೀತಾರಾಮನ್ ಸೋಮವಾರ 6.28 ಲಕ್ಷ ಕೋಟಿ ರೂ.ಗಳ ಆರ್ಥಿಕ ಉತ್ತೇಜನ ಮತ್ತು ಪರಿಹಾರ ಪ್ಯಾಕೇಜ್ ಘೋಷಿಸಿದ್ದಾರೆ.

SCROLL FOR NEXT