ಸಲ್ಮಾನ್ ಖುರ್ಷಿದ್ 
ದೇಶ

ನಾವು ಕೂಡ ಬಿಜೆಪಿಯವರಂತೆ ದೊಡ್ಡದಾಗಿ ಯೋಚಿಸಿದರೆ ಗೆಲುವು ಸಾಧ್ಯ: ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್

ಕಾಂಗ್ರೆಸ್ ಕೂಡ ಬಿಜೆಪಿಯಂತೆ ದೊಡ್ಡದಾದ ಯೋಚನೆ ಮಾಡಬೇಕಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ. ಸಧ್ಯದ ತಯಾರಿ ಬಹಳ ಸಣ್ಣದಿದೆ ಹಾಗೂ ದುರ್ಬಲವಾಗಿದೆ. ಕಳೆದುಕೊಂಡದ್ದನ್ನು ಮರಳಿ ಪಡೆಯಲು ಸಾಧ್ಯವಿಲ್ಲ ಎಂಬ "ನಿರಾಶಾವಾದಿ ದೃಷ್ಟಿಕೋನವನ್ನು ನಾನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಬೆಂಗಳೂರು: ಕಾಂಗ್ರೆಸ್ ಕೂಡ ಬಿಜೆಪಿಯಂತೆ ದೊಡ್ಡದಾದ ಯೋಚನೆ ಮಾಡಬೇಕಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ. ಸಧ್ಯದ ತಯಾರಿ ಬಹಳ ಸಣ್ಣದಿದೆ ಹಾಗೂ ದುರ್ಬಲವಾಗಿದೆ. ಕಳೆದುಕೊಂಡದ್ದನ್ನು ಮರಳಿ ಪಡೆಯಲು ಸಾಧ್ಯವಿಲ್ಲ ಎಂಬ "ನಿರಾಶಾವಾದಿ ದೃಷ್ಟಿಕೋನವನ್ನು ನಾನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

:ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ವಿಧಾನಸಭೆ ಚುನಾವಣೆಗಳಲ್ಲಿ ನಾವು ಕಳೆದುಕೊಂಡಿರುವುದನ್ನು ಮರಳಿ ಪಡೆಯಲು ಎಂದೂ ಸಾಧ್ಯವಿಲ್ಲ,  ನಾವು ತುಂಬಾ ಚಿಕ್ಕವರು,, ನಾವು ತುಂಬಾ ದುರ್ಬಲರು ಎಂದು ಎಂದಿಗೂ ಒಪ್ಪಿಕೊಳ್ಳಬಾರದು. ಅಥವಾ ನನ್ನ ಪ್ರಕಾರ  ಬಿಜೆಪಿ ಅಸ್ತಿತ್ವದಲ್ಲಿಲ್ಲದ ದೊಡ್ಡ ತಂತ್ರ ಮಾಡಿದೆ. ಮತ್ತು ಅವರು ಇನ್ನೂ ಯಾವುದೇ ಅಸ್ತಿತ್ವವನ್ನು ಹೊಂದಿರದ ಜಾಗಗಳಲ್ಲಿ  ಹಾಗೆ ಮಾಡುವ ಪ್ರಯತ್ನ ಮಾಡಿದ್ದಾರೆ. ಎಂದು ಖುರ್ಷಿದ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ಕೇಂದ್ರದ ಮಾಜಿ ಸಚಿವರು ಮಾತನಾಡಿ, "ಕಾಂಗ್ರೆಸ್ ಹೆಚ್ಚು ಪ್ರದೇಶಗಳನ್ನು ಕಳೆದುಕೊಂಡಿದೆ ಮತ್ತು ಈಗ ಅದನ್ನು ಮರಳಿ ಪಡೆಯಲು ಸಾಧ್ಯವಿಲ್ಲ ಎಂಬ "ನಿರಾಶಾವಾದಿ ದೃಷ್ಟಿಕೋನವನ್ನು" ಒಪ್ಪಿಕೊಳ್ಳಬಾರದು. "ನಾನು ದೃಢ ನಿಶ್ವಯ ಮತ್ತು ಆತ್ಮವಿಶ್ವಾಸದಿಂದ ಯೋಚಿಸುತ್ತೇನೆ, ಹಾಗಾದರೆ ನಾವು ಮತ್ತೆ ಮುಂದುವರಿಯಬಹುದು,ಅದನ್ನೇ ನಾವು ಮಾಡಬೇಕು" ಎಂದು ಅವರು ಹೇಳಿದರು.

ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಯುದ್ಧತಂತ್ರದ ಪರಿಣಾಮವಿದೆ ಎಂದು ಖುರ್ಷಿದ್ ಒಪ್ಪಿಕೊಂಡರು, ಅಲ್ಲಿ ಕಾಂಗ್ರೆಸ್ ಮತ್ತು ಎಡಪಂಥೀಯರನ್ನು "ಅಳಿಸಿಹಾಕಲಾಯಿತು". "ಅದು ನಿಜ. ಬಂಗಾಳದಲ್ಲಿ ನಡೆದ ಯುದ್ಧತಂತ್ರ  ಅಸ್ಸಾಂನಲ್ಲಿ ಸಂಭವಿಸಿರದೆ ಇರಬಹುದು ಆದರೆ ಸ್ಪಷ್ಟವಾಗಿ ಯುದ್ಧತಂತ್ರ ಎರಡೂ ಸ್ಥಳಗಳಲ್ಲಿ ಯಶಸ್ವಿಯಾಗಿದೆ. ಭವಿಷ್ಯದ ಪಕ್ಷವಾಗಿ ನಾವು ಅದನ್ನು ಹೇಗೆ ಕಾಣುತ್ತೇವೆ ಇದು ನಾವು ಪರಿಗಣಿಸಬೇಕಾದ ವಿಷಯ "ಎಂದು ಅವರು ಹೇಳಿದರು.

ಪಶ್ಚಿಮ ಬಂಗಾಳದಲ್ಲಿ ಇಂಡಿಯನ್ ಸೆಕ್ಯುಲರ್ ಫ್ರಂಟ್ ಜೊತೆಗಿನ ಒಡನಾಟಕ್ಕೆ ತಕ್ಕ ಬೆಲೆ ತೆರಬೇಕಾಯಿತು. ಅಲ್ಲದೆ ಎಐಯುಡಿಎಫ್ ಜೊತೆಗಿನ ಸಹಭಾಗಿತ್ವವು ಅಸ್ಸಾಂ ನಲ್ಲಿ ಕಾಂಗ್ರೆಸ್ ಗೆ ದೊಡ್ಡ ಆಘಾತವನ್ನು ನೀಡಿತು ಎನ್ನುವ ಬಗ್ಗೆ ಮಾತನಾಡಿದ ಖುರ್ಷಿದ್. "ನೀವು ಯಶಸ್ವಿಯಾಗದಿದ್ದಾಗ, ಇದು ಸಾಮಾನ್ಯವಾಗಿ ನೀಡುವ ವಿವರಣೆಯಾಗಿದೆ.  ನೀವು ಯಶಸ್ವಿಯಾದಾಗ ನಿಮಗೆ ಬೇರೆ ಬಗೆಯಲ್ಲಿ ವಿವರೈಸಲಾಗುತ್ತದೆ.ಆದ್ದರಿಂದ, ನಿಮ್ಮ ನಿರ್ಧಾರವನ್ನು ವಿಶ್ಲೇಷಿಸಲು ಸಹಾಯ ಮಾಡಿದರೂ ನಂತರದ ವಿವರಣೆಗಳು ಸಂವೇದನಾಶೀಲವಾಗಿವೆ ಎಂದು ನಾನು ಭಾವಿಸುವುದಿಲ್ಲ "

ಮುಂದಿನ ವರ್ಷ ನಡೆಯಲಿರುವ ಉತ್ತರಪ್ರದೇಶದ ಧಾನಸಭಾ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ ಜನರ ಮಧ್ಯ ಇರುವ ಪ್ರಣಾಳಿಕೆಯಾಗಿದೆ ಎಂದು ಖುರ್ಷಿದ್ ಹೇಳಿದ್ದಾರೆ. "ಐಡಿಯಾ ಎಂದರೆ ಜನರು ಏನು ಬಯಸುತ್ತಾರೆ ಮತ್ತು ನಾವು ಅದನ್ನು ನೀಡಬಹುದೇ ಎಂದು ನೋಡೋಣ ಎಂಬುದರ ಬಗ್ಗೆ ಸ್ವಲ್ಪ ಹೆಚ್ಚು ವಿಶ್ಲೇಷಣಾತ್ಮಕವಾಗಬೇಕು." ಎಂದು ಅವರು ಹೇಳಿದರು.

"ಖಂಡಿತವಾಗಿಯೂ, ನಾವು ಜಾತಿ ಮತ್ತು ಸಮುದಾಯಗಳ ಉದ್ದಕ್ಕೂ ವಿಭಜನೆಯ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ ಮತ್ತು ಅದು ಒಂದು ಅವಧಿಯಲ್ಲಿ ಪರಿಹರಿಸಲ್ಪಡುತ್ತದೆ. ಅದುಅಪೇಕ್ಷಿಸಬಹುದಾದ ಸಂಗತಿಯಾಗಿರಬಾರದು. ಅದು ಪರಿಹರಿಸಲ್ಪಡುತ್ತದೆ ಎಂಬ ಭರವಸೆ ಇರಲಿ. "

 ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶಗಳನ್ನು ಮೇ 2ರಂದು ಘೋಷಿಸಲಾಯಿತು, ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಇನ್ನಿಲ್ಲವಾಗಿತ್ತು. ಅಲ್ಲಿ ತೃಣಮೂಲ ಕಾಂಗ್ರೆಸ್ 294 ಸ್ಥಾನಗಳಲ್ಲಿ 213 ಸ್ಥಾನಗಳನ್ನು ಗಳಿಸಿತು. ಕೇರಳ ಮತ್ತು ಅಸ್ಸಾಂನಲ್ಲಿ ಈಗಿರುವ ಸರ್ಕಾರಗಳನ್ನು ತೆಗೆದುಹಾಕಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಪುದುಚೇರಿಯಲ್ಲಿ, ಪಕ್ಷವನ್ನು ಎನ್ಆರ್ ಕಾಂಗ್ರೆಸ್ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಸೋಲಿಸಿತು. ಆದಾಗ್ಯೂ, ತಮಿಳುನಾಡಿನಲ್ಲಿ, ಕಾಂಗ್ರೆಸ್ ಡಿಎಂಕೆ ನೇತೃತ್ವದ ಮೈತ್ರಿಕೂಟದ ಒಂದು ಭಾಗವಾಗಿತ್ತು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT