ಸಾಂದರ್ಭಿಕ ಚಿತ್ರ 
ದೇಶ

6 ತಿಂಗಳ ಅಂತರದಲ್ಲೂ ಕೋವಿಶೀಲ್ಡ್ 2ನೇ ಡೋಸ್ ಡೋಸ್ ಪರಿಣಾಮಕಾರಿ, ಚಿಂತೆ ಬೇಡ: ತಜ್ಞರು

ನಾಲ್ಕರಿಂದ ಆರು ವಾರಗಳು, ಆರರಿಂದ ಎಂಟು ಅಥವಾ ಎಂಟರಿಂದ 12? ಹೀಗೆ ಭಾರತದಲ್ಲಿ ಕೋವಿಶೀಲ್ಡ್ ಎರಡು ಡೋಸ್ ಗಳ ನಡುವಿನ ಅಂತರ ಹೆಚ್ಚುತ್ತಿರುವ ಬಗ್ಗೆ ಜನರು ಗೊಂದಲಕ್ಕೊಳಗಾಗಿದ್ದಾರೆ. ಆದರೆ ಹಲವಾರು ತಜ್ಞರು ಅಂತರದ ಬಗ್ಗೆ ಚಿಂತಿಸುವ ಅಗತ್ಯ ಇಲ್ಲ ಎಂದಿದ್ದಾರೆ.

ನವದೆಹಲಿ: ನಾಲ್ಕರಿಂದ ಆರು ವಾರಗಳು, ಆರರಿಂದ ಎಂಟು ಅಥವಾ ಎಂಟರಿಂದ 12? ಹೀಗೆ ಭಾರತದಲ್ಲಿ ಕೋವಿಶೀಲ್ಡ್ ಎರಡು ಡೋಸ್ ಗಳ ನಡುವಿನ ಅಂತರ ಹೆಚ್ಚುತ್ತಿರುವ ಬಗ್ಗೆ ಜನರು ಗೊಂದಲಕ್ಕೊಳಗಾಗಿದ್ದಾರೆ. ಆದರೆ ಹಲವಾರು ತಜ್ಞರು ಅಂತರದ ಬಗ್ಗೆ ಚಿಂತಿಸುವ ಅಗತ್ಯ ಇಲ್ಲ. ಲಸಿಕೆ 6 ತಿಂಗಳವರೆಗೆ ಪರಿಣಾಮಕಾರಿಯಾಗಿದ್ದು, ಆರು ತಿಂಗಳಮೊದಲು ಯಾವುದೇ ಸಮಯದಲ್ಲಿ ಎರಡನೇ ಡೋಸ್ ಹಾಕಿಸಿಕೊಳ್ಳಬಹುದು ಎಂದಿದ್ದಾರೆ.

ಕಳೆದ ವಾರ ಕೇಂದ್ರ ಸರ್ಕಾರ ರೋಗನಿರೋಧಕ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ತಂಡ (ಎನ್‌ಟಿಎಜಿಐ) ಶಿಫಾರಸ್ಸಿನ ಮೇರೆಗೆ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್‌ಗಳ ನಡುವಿನ ಅಂತರವನ್ನು 12-16 ವಾರಗಳಿಗೆ ವಿಸ್ತರಿಸಿದೆ. ಈ ಮುಂಚೆ ಗರಿಷ್ಠ ಎಂಟು ವಾರ ಇತ್ತು.

ಈ ಮಧ್ಯೆ ಬ್ರಿಟನ್, ಭಾರತದ ಬಿ .1.617 ರೂಪಾಂತರದ ಹರಡುವಿಕೆಯ ತಡೆಯುವ ದೃಷ್ಟಿಯಿಂದ ಲಸಿಕೆಯ ಅಂತರವನ್ನು 12 ವಾರಗಳಿಂದ ಎಂಟು ವಾರಗಳಿಗೆ ಕಡಿತಗೊಳಿಸಿತು.

ಇನ್ನು ಲಸಿಕೆಗಳು ಕೊರತೆಯಿರುವುದರಿಂದ ಮತ್ತು ಅನೇಕ ರಾಜ್ಯಗಳಲ್ಲಿ ಸರಬರಾಜಿನಲ್ಲಿ ತೀವ್ರ ಕೊರತೆಯಿರುವ ಕಾರಣ ಭಾರತವು ಅಂತರವನ್ನು ಹೆಚ್ಚಿಸಿದೆ ಎಂಬ ಆತಂಕಗಳಿಗೆ ಪ್ರತಿಕ್ರಿಯಿಸಿದ ರೋಗ ನಿರೋಧಕ ತಜ್ಞ ರಾತ್, ಲಸಿಕೆ ಡೋಸಿಂಗ್ "ಸಾಕಷ್ಟು ಹೊಂದಿಕೊಳ್ಳುವ ಮತ್ತು ಕ್ಷಮಿಸುವ" ಆಗಿದೆ ಎಂದು ಹೇಳಿದ್ದಾರೆ.

ನಾಲ್ಕು ವಾರಗಳು ಕಳೆದ ನಂತರ, ಮುಂದಿನ ಡೋಸ್ ಅನ್ನು ಆರು ತಿಂಗಳವರೆಗೆ ಯಾವಾಗಬೇಕಾದರೂ ತೆಗೆದುಕೊಳ್ಳಬಹುದು.

ವಿಜ್ಞಾನಿಗಳ ಪ್ರಕಾರ, ಲಸಿಕೆ ಡೋಸ್ ತೆಗೆದುಕೊಂಡಾಗ ಅವುಗಳು ಸುರಕ್ಷಿತವಾಗಿರುತ್ತವೆ. ಆದರೆ ಹಿಂದಿನ ಡೋಸ್‌ನ ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ನೀಡಿದರೆ ಯಾವುದೇ ದೊಡ್ಡ "ವರ್ಧಕವನ್ನು" ಒದಗಿಸುವುದಿಲ್ಲ ಎಂದಿದ್ದಾರೆ.

"ಆದ್ದರಿಂದ ಮೊದಲ ಡೋಸ್‌ ಲಸಿಕೆ ಪಡೆದ ಕನಿಷ್ಠ ನಾಲ್ಕು ವಾರಗಳು ಕಳೆದ ನಂತರ ಆರು ತಿಂಗಳವರೆಗೆ ಎರಡನೇ ಡೋಸ್ ಅನ್ನು ತೆಗೆದುಕೊಳ್ಳಬಹುದು" ಎಂದು ನವದೆಹಲಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಮ್ಯುನೊಲಾಜಿ (ಎನ್‌ಐಐ) ಯ ರಾತ್ ಅವರು ಪಿಟಿಐಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT