ದೇಶ

ಶೌಚಾಲಯ ಬಳಕೆ ವಿಷಯವಾಗಿ ಕಲ್ಲು ತೂರಾಟ ಮೂವರಿಗೆ ಗಾಯ: 9 ಮಂದಿ ಬಂಧನ 

Srinivas Rao BV

ನವದೆಹಲಿ: ಶೌಚಲಾಯ ಬಳಕೆಯ ವಿಷಯವಾಗಿ ಎರಡು ಗುಂಪುಗಳ ನಡುವೆ ಪರಸ್ಪರ ಕಲ್ಲು ತೂರಾಟ ನಡೆದಿದ್ದು, ಮೂವರಿಗೆ ತೀವ್ರ ಗಾಯಗಳಾಗದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿಯನ್ನು ಬಂಧಿಸಲಾಗಿದೆ.

ಬುದ್ಧ್ ಬಜಾರ್ ಸ್ಲಮ್, ಗೀತ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಪಿಸಿಆರ್ ಗೆ ಘಟನೆ ಕುರಿತು ಮಾಹಿತಿ ನೀಡಲಾಗಿತ್ತು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅವರು ಆರೋಪಿಗಳನ್ನು ಬಂಧಿಸಿದ್ದಾರೆ. 

ಶೌಚಾಲಯದ ಬಳಿ ಇದ್ದ ಗುಂಪು ಹಾಗೂ ಸ್ವಲ್ಪ ದೂರದಲ್ಲಿದ್ದ ಮತ್ತೊಂದು ಶೌಚಾಲಯ ಪರಸ್ಪರ ಕಲ್ಲು ತೂರಾಟ ಮಾಡಿಕೊಂಡಿವೆ.

ಶೌಚಾಲಯ ಬಳಕೆ ವಿಷಯವಾಗಿ ಜಗಳವಾಗಿದ್ದು, ಎರಡೂ ಗುಂಪುಗಳು ಕಠಿಣ ಶಬ್ದಗಳನ್ನು ಪ್ರಯೋಗಿಸಿರುವ ಆರೋಪವನ್ನು ಪರಸ್ಪರ ಮಾಡಿವೆ ಎಂದು ಪೊಲೀಸರು ಹೇಳಿದ್ದಾರೆ. 
 

SCROLL FOR NEXT