ದೇಶ

ಭಾರೀ ಮಳೆಯಿಂದಾಗಿ ಜಲಾವೃತಗೊಂಡ ಕೆಎಸ್ ಆರ್ ಟಿಸಿ ಬಸ್, ನೀರಿನಲ್ಲಿ ಕೊಚ್ಚಿ ಹೋದ ಕಾರು: ವಿಡಿಯೋ

Nagaraja AB

ತಿರುವನಂತಪುರಂ: ಕೇರಳದ ಅನೇಕ ಕಡೆಗಳಲ್ಲಿ ಇಂದು ಭಾರೀ ಮಳೆಯಾಗುತ್ತಿದ್ದು, ಐದು ಜಿಲ್ಲೆಗಳಲ್ಲಿ ರೆಡ್ ಆಲರ್ಟ್ ಹಾಗೂ ಏಳು ಜಿಲ್ಲೆಗಳಲ್ಲಿ ಆರೆಂಜ್ ಆಲರ್ಟ್ ಘೋಷಿಸಲಾಗಿದೆ. 

ಬಸ್ ವೊಂದು ಜಲಾವೃತಗೊಂಡಿದ್ದರಿಂದ ಹೊರಗೆ ಬರಲು ಪ್ರಯಾಣಿಕರು ಹರಸಾಹಸಪಡುವಂತಾಯಿತು. ಮತ್ತೊಂದೆಡೆ ಮಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಕಾರನ್ನು ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದಾರೆ . ಈ ವಿಡಿಯೋಗಳು ಇದೀಗ ವೈರಲ್ ಆಗಿವೆ.

ಕೊಟ್ಟಾಯಂನ ಪೂಂಜಾರ್ ನಲ್ಲಿ ಜಲಾವೃತಗೊಂಡಿದ್ದ ಕೆಎಸ್ ಆರ್ ಟಿಸಿ ಬಸ್ ನಿಂದ  ಪ್ರಯಾಣಿಕರನ್ನು ಬಜಾವ್ ಮಾಡಲಾಗಿದೆ. ಯಾವುದೇ ಪ್ರಾಣಪಾಯದ ಬಗ್ಗೆ ವರದಿಯಾಗಿಲ್ಲ. 

ಮತ್ತೊಂದೆಡೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಕಾರನ್ನು ಎಳೆಂಟು ಮಂದಿ ಎಳೆದು ತರುತ್ತಿರುವ ದೃಶ್ಯ ವಿಡಿಯೋದಲ್ಲಿದೆ. 

SCROLL FOR NEXT