ಸಾಂದರ್ಭಿಕ ಚಿತ್ರ 
ದೇಶ

ಫೈನಾನ್ಸ್ ಸಾಲ ತೀರಿಸಲು 2,000 ರೂ. ಕೊಡದ ಸ್ನೇಹಿತರು, ಸಂಬಂಧಿಕರು: ಮನನೊಂದು ಯುವಕ ಆತ್ಮಹತ್ಯೆ

ಅತಿಯಾದ ಸಾಲದಿಂದ ಸಾಯುವುದನ್ನು ನೋಡಿದ್ದೇವೆ. ಆದರೆ ಸಾಲ ತೀರಿಸಲು ಕೇವಲ 2 ಸಾವಿರ ರೂ. ಹಣವನ್ನು ಯಾರೂ ಕೊಡಲಿಲ್ಲ ಎಂದು ಮನನೊಂದ ಯುವಕ ಇಹಲೋಕವನ್ನೇ ತ್ಯಜಿಸಿದ್ದಾನೆ.

ಮೆಡ್ಚಲ್: ಅತಿಯಾದ ಸಾಲದಿಂದ ಸಾಯುವುದನ್ನು ನೋಡಿದ್ದೇವೆ. ಆದರೆ ಸಾಲ ತೀರಿಸಲು ಕೇವಲ 2 ಸಾವಿರ ರೂ. ಹಣವನ್ನು ಯಾರೂ ಕೊಡಲಿಲ್ಲ ಎಂದು ಮನನೊಂದ ಯುವಕ ಇಹಲೋಕವನ್ನೇ ತ್ಯಜಿಸಿದ್ದಾನೆ. ತೆಲಂಗಾಣದ ಮೆಡ್ಚಲ್ ಜಿಲ್ಲೆಯ ಶಮೀರ್ಪೇಟೆ ಮಂಡಲದ ಪೊನ್ನಾಲದಲ್ಲಿ ಈ ದುರಂತ ಸಂಭವಿಸಿದೆ.

ಏನಿದು ಘಟನೆ? ಮರ್ಯಾಲ ಆನಂದ್(23) ಸಾವಿಗೀಡಾದವ. ಈತ ತರ್ಕಪಲ್ಲಿಯ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ. 3 ತಿಂಗಳ ಹಿಂದೆ ಸಿದ್ದಿಪೇಟೆ ಜಿಲ್ಲೆಯ ಗಜವೇಲ್ ಮಂಡಲದ ಕುಂಚೇರುಕಲಿ ಮೈಕ್ರೋ ಫೈನಾನ್ಸ್‌ ನಿಂದ 10,000 ರೂ. ಸಾಲ ಪಡೆದಿದ್ದಾನೆ. ಈ ಸಾಲದ ಹಿನ್ನೆಲೆ ಅದರ ಮರುಪಾವತಿಗೆ ಅ.22 ರಂದು ಆನಂದ್ ಮನೆಗೆ ಫೈನಾನ್ಸ್ ನ ಓರ್ವ ಮಹಿಳೆ ಮತ್ತು 5 ಮಂದಿ ಭೇಟಿ ನೀಡಿ ಸಾಲ ಪಾವತಿ ಮಾಡುವಂತೆ ಹೇಳಿದ್ದಾರೆ.

ಈಗ ನನ್ನ ಬಳಿ ಇಲ್ಲ. ಆದಷ್ಟು ಬೇಗ ಕಟ್ಟುತ್ತೇನೆ ಎಂದು ಹೇಳಿದ್ದಾನೆ. ಆದರೆ ಅವರು ಈಗಲೇ ಕಟ್ಟುವಂತೆ ಪಟ್ಟು ಹಿಡಿದಿದ್ದಾರೆ. ಇದರಿಂದ ಆನಂದ್ ಕೆಲ ಸ್ನೇಹಿತರು ಮತ್ತು ಸಂಬಂಧಿಕರ ಬಳಿ ಹಣ ಕೇಳಿದ್ದಾನೆ. ಆದರೆ ಯಾರು ಕೊಡಲು ಮುಂದಾಗದ ಕಾರಣ ಆನಂದ್ 2 ಸಾವಿರ ರೂಪಾಯಿಗೆ ನನ್ನನ್ನು ಯಾರು ನಂಬುತ್ತಿಲ್ಲವಲ್ಲ ಎಂದು ನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT