ದೇಶ

ಸರ್ಬಾನಂದ ಸೋನೊವಾಲ್ ರಿಂದ ನಾಳೆ ನವಮಂಗಳೂರು ಬಂದರಿನಲ್ಲಿ ಮೂರು ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ

Lingaraj Badiger

ನವದೆಹಲಿ: ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೊವಾಲ್ ಅವರು ಶುಕ್ರವಾರ ನವ ಮಂಗಳೂರು ಬಂದರಿನಲ್ಲಿ ಮೂರು ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಸೋನೊವಾಲ್ ಅವರು ಟ್ರಕ್ ಪಾರ್ಕಿಂಗ್ ಟರ್ಮಿನಲ್‌ಗೆ ಶಿಲಾನ್ಯಾಸ ಮತ್ತು ಯುಎಸ್ ಮಲ್ಯ ಗೇಟ್‌ನ ಮಾರ್ಪಾಡು ಮತ್ತು ಹೊಸದಾಗಿ ನಿರ್ಮಿಸಲಾದ ವ್ಯಾಪಾರ ಅಭಿವೃದ್ಧಿ ಕೇಂದ್ರವನ್ನು ದೇಶಕ್ಕೆ ಸಮರ್ಪಣೆ ಮಾಡಲಿದ್ದಾರೆ ಎಂದು 
ಸಚಿವಾಲಯದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

"ಸುಧಾರಿತ ಒಳನಾಡು ಸಂಪರ್ಕದಿಂದಾಗಿ, ಈ(ನವ ಮಂಗಳೂರು) ಬಂದರಿನಲ್ಲಿ ಕಂಟೇನರ್ ಮತ್ತು ಇತರ ಸಾಮಾನ್ಯ ಸರಕು ಸಾಗಣೆ ಹೆಚ್ಚುತ್ತಿದೆ" ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

"ನವ ಮಂಗಳೂರು ಬಂದರಿನಿಂದ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕರ್ನಾಟಕ ರಾಜ್ಯದ ಹೊರಗಿನ ದೂರದ ಸ್ಥಳಗಳಿಗೆ ಸರಕುಗಳನ್ನು ಸ್ಥಳಾಂತರಿಸಲು ಪ್ರತಿದಿನ ಸುಮಾರು 500 ಟ್ರಕ್‌ಗಳು ಚಲಿಸುತ್ತಿವೆ. ಬಂದರು ಸುಮಾರು 160 ಟ್ರಕ್‌ಗಳಿಗೆ ಪಾರ್ಕಿಂಗ್ ಸೌಲಭ್ಯವನ್ನು ಒದಗಿಸಿದ್ದರೂ, ಈಗಿರುವ ಪ್ರದೇಶವು ಸಾಕಷ್ಟಿಲ್ಲ ಎಂದು ಕಂಡುಬಂದಿದೆ. ಹೀಗಾಗಿ ಟ್ರಕ್ ಟರ್ಮಿನಲ್‌ಗೆ 2022-23 ರಲ್ಲಿ ಕಾಂಕ್ರೀಟ್ ಪಾದಚಾರಿ ಮಾರ್ಗ, ಗೇಟ್‌ಹೌಸ್, ರೆಸ್ಟೋರೆಂಟ್ ಮತ್ತು ಡಾರ್ಮಿಟರಿಯನ್ನು ಒದಗಿಸಲಾಗುವುದು ಎಂದು ಸಚಿವಾಲಯ ಹೇಳಿದೆ.

SCROLL FOR NEXT