ಅಸ್ವಸ್ಥಗೊಂಡ ಇಂದಿರಾ ಕುಮಾರಿ 
ದೇಶ

ಹಣ ದುರ್ಬಳಕೆ: ತಮಿಳುನಾಡು ಮಾಜಿ ಸಚಿವೆ ಇಂದಿರಾ ಕುಮಾರಿಗೆ ಐದು ವರ್ಷ ಜೈಲು

ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದರು/ಶಾಸಕರ ವಿರುದ್ಧದ ಪ್ರಕರಣಗಳ ವಿಶೇಷ ನ್ಯಾಯಾಲಯ ಬುಧವಾರ ತಮಿಳುನಾಡು ಮಾಜಿ ಸಚಿವೆ ಆರ್ ಇಂದಿರಾ ಕುಮಾರಿ ಮತ್ತು ಆಕೆಯ ಪತಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದು,

ಚೆನ್ನೈ: ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದರು/ಶಾಸಕರ ವಿರುದ್ಧದ ಪ್ರಕರಣಗಳ ವಿಶೇಷ ನ್ಯಾಯಾಲಯ ಬುಧವಾರ ತಮಿಳುನಾಡು ಮಾಜಿ ಸಚಿವೆ ಆರ್ ಇಂದಿರಾ ಕುಮಾರಿ ಮತ್ತು ಆಕೆಯ ಪತಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದು, ನಿವೃತ್ತ ಅಧಿಕಾರಿ ಷಣ್ಮುಗಂ ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಅಲಿಸಿಯಾ ಅವರು, ಇಂದಿರಾ ಕುಮಾರಿ ಮತ್ತು ಅವರ ಪತಿ ಬಾಬುಗೆ ಐದು ವರ್ಷ ಮತ್ತು ನಿವೃತ್ತ ಅಧಿಕಾರಿ ಷಣ್ಮುಗಂಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದರು. ಅಲ್ಲದೆ ಇಂದಿರಾ ಕುಮಾರಿಯ ವೈಯಕ್ತಿಕ ಸಹಾಯಕರಾಗಿದ್ದ ವೆಂಕಟಕೃಷ್ಣನ್ ಅವರಿಗೆ 10,000 ರೂ ದಂಡ ವಿಧಿಸಿ ಖುಲಾಸೆಗೊಳಿಸಿದ್ದಾರೆ.

ಇಂದಿರಾಯ ಕುಮಾರ್ ಅವರು ವಿಕಲಚೇತನರಿಗಾಗಿ ಶಾಲೆ ಸ್ಥಾಪಿಸಲು ಇಂದಿರಾ ಕುಮಾರಿಯವರ ಪತಿ ಬಾಬು ನಡೆಸುತ್ತಿರುವ ಟ್ರಸ್ಟ್‌ಗೆ ನೀಡಲಾದ 15.45 ಲಕ್ಷ ರೂಪಾಯಿಗಳ ಸರ್ಕಾರಿ ಹಣ ದುರುಪಯೋಗಪಡಿಸಿಕೊಂಡಿದ್ದರು.

ಜೆ.ಜಯಲಲಿತಾ ಮುಖ್ಯಮಂತ್ರಿಯಾಗಿದ್ದಾಗ 1991-96ರವರೆಗೆ ಇಂದಿರಾ ಕುಮಾರಿ ಸಮಾಜ ಕಲ್ಯಾಣ ಸಚಿವರಾಗಿ ಸೇವೆ ಸಲ್ಲಿಸಿದರು. ಹಲವು ವರ್ಷಗಳ ನಂತರ, ಅವರು ಡಿಎಂಕೆ ಸೇರಿದ್ದರು. 

ತೀರ್ಪು ಪ್ರಕಟವಾದ ತಕ್ಷಣ, ನ್ಯಾಯಾಲಯದ ಸಭಾಂಗಣದಲ್ಲಿದ್ದ ಇಂದಿರಾ ಕುಮಾರಿ ಅಸ್ವಸ್ಥಗೊಂಡು ಉಸಿರಾಟದ ತೊಂದರೆ ಎದುರಿಸುತ್ತಿರುವುದಾಗಿ ಹೇಳಿದರು. ಹೀಗಾಗಿ ಅವರನ್ನು ಜೈಲಿಗೆ ಕರೆದುಕೊಂಡು ಹೋಗುವ ಬದಲು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!

'ಹನೂರು ಎನ್‌ಕೌಂಟರ್': ತಮಿಳುನಾಡು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಉದಯನಿಧಿ ಸ್ಟಾಲಿನ್! ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಆಗ್ರಹ

SIR ವೇಳೆ 1.08 ಕೋಟಿಗೂ ಅಧಿಕ ಮತದಾರರು ASDDO ಪಟ್ಟಿಗೆ: ಆಕ್ಷೇಪಣೆ ಸಲ್ಲಿಕೆ ಅವಧಿ ವಿಸ್ತರಿಸಬೇಕು- CECಗೆ ಸಿಎಂ ಶಿವಕುಮಾರ್ ಪತ್ರ!