ಲೋಕೋಪಯೋಗಿ ಇಲಾಖೆ ಸಚಿವ ಇವಿ ವೇಲು ಅವರು ಚೆನ್ನೈನಲ್ಲಿ ಚಂಡಮಾರುತ ಪರಿಹಾರ ಕಾರ್ಯವನ್ನು ಪರಿಶೀಲಿಸಿದರು. 
ದೇಶ

'ಮಾಂಡೂಸ್‌’ ಚಂಡಮಾರುತ: ಚೆನ್ನೈ ನಗರದಾದ್ಯಂತ ಧರೆಗುರುಳಿದ ಮರಗಳು, 140 ಟನ್ ತ್ಯಾಜ್ಯ ಸಂಗ್ರಹ

ಶುಕ್ರವಾರದಂದು ಮಾಂಡೂಸ್ ಚಂಡಮಾರುತದಿಂದಾಗಿ ಸುಮಾರು 140 ಮೆಟ್ರಿಕ್ ಟನ್ ಮರದ ತ್ಯಾಜ್ಯ (ಧರೆಗುರುಳಿದ ಮರಗಳು, ಎಲೆಗಳು ಮತ್ತು ಕೊಂಬೆಗಳು) ಚೆನ್ನೈನ ಬೀದಿಗಳಾದ್ಯಂತ ಸಂಗ್ರಹವಾಗಿದೆ ಎಂದು ನಗರ ನಿಗಮದ ವರದಿ ಶನಿವಾರ ತಿಳಿಸಿದೆ.

ಚೆನ್ನೈ: ಶುಕ್ರವಾರದಂದು ಮಾಂಡೂಸ್ ಚಂಡಮಾರುತದಿಂದಾಗಿ ಸುಮಾರು 140 ಮೆಟ್ರಿಕ್ ಟನ್ ಮರದ ತ್ಯಾಜ್ಯ (ಧರೆಗುರುಳಿದ ಮರಗಳು, ಎಲೆಗಳು ಮತ್ತು ಕೊಂಬೆಗಳು) ಚೆನ್ನೈನ ಬೀದಿಗಳಾದ್ಯಂತ ಸಂಗ್ರಹವಾಗಿದೆ ಎಂದು ನಗರ ನಿಗಮದ ವರದಿ ಶನಿವಾರ ತಿಳಿಸಿದೆ.

ನಗರದಲ್ಲಿನ ಜಲಾವೃತವನ್ನು ತೆರವುಗೊಳಿಸಲು ನಗರದ ಕಾರ್ಪೊರೇಷನ್ ರಾತ್ರಿಯಿಡೀ ಕೆಲಸ ಮಾಡಿದ್ದರಿಂದ ಮರದ ತ್ಯಾಜ್ಯವು ಕಂಡುಬಂತು. ನಗರದಲ್ಲಿನ ಒಟ್ಟಾರೆ ಚಂಡಮಾರುತ ಹಾನಿಯ ಆರ್ಥಿಕ ಮೌಲ್ಯಮಾಪನವನ್ನು ಇನ್ನೂ ಕೈಗೊಳ್ಳಬೇಕಿದೆ ಎಂದು ಹಿರಿಯ ನಿಗಮದ ಅಧಿಕಾರಿಗಳು ಟಿಎನ್ಐಇಗೆ ತಿಳಿಸಿದ್ದಾರೆ.

1 ರಿಂದ 8 ವಲಯಗಳಿಂದ 47.64 ಮೆಟ್ರಿಕ್ ಟನ್ ಹಸಿರು ತ್ಯಾಜ್ಯ ಸಂಗ್ರಹವಾಗಿದ್ದರೆ, 9 ರಿಂದ 15 ವಲಯಗಳಿಂದ 93.42 ಮೆಟ್ರಿಕ್ ಟನ್ ತ್ಯಾಜ್ಯ ಸಂಗ್ರಹವಾಗಿದೆ. ಅಡ್ಯಾರ್ ವಲಯದಲ್ಲಿ ಗರಿಷ್ಠ 33.38 ಮೆಟ್ರಿಕ್ ಟನ್ ಮರದ ತ್ಯಾಜ್ಯ ಸಂಗ್ರಹವಾಗಿದೆ. ಸಂಗ್ರಹಿಸಿದ ತ್ಯಾಜ್ಯವನ್ನು ಉತ್ತರ ಮತ್ತು ದಕ್ಷಿಣ ವಲಯಗಳಿಗೆ ಕ್ರಮವಾಗಿ ಕೊಡುಂಗೈಯೂರ್ ಮತ್ತು ಪೆರುಂಗುಡಿಯಲ್ಲಿ ಸಂಸ್ಕರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಚಂಡಮಾರುತದಿಂದಾಗಿ ಸುಮಾರು 85 ಮರಗಳು ನೆಲಕ್ಕುರುಳಿವೆ ಮತ್ತು ಪೌರ ಕಾರ್ಮಿಕರು ತಮ್ಮ ಪಾಳಿಯಲ್ಲಿ ಬೀದಿ ಮತ್ತು ಪಾದಚಾರಿ ಮಾರ್ಗಗಳ ಹಸಿರು ತ್ಯಾಜ್ಯವನ್ನು ಸ್ವಚ್ಛಗೊಳಿಸುತ್ತಿದ್ದಾರೆ. ನಿಗಮದ ವರದಿಗಳ ಪ್ರಕಾರ, ಬುಡಮೇಲಾದ ಬಹುತೇಕ ಮರಗಳನ್ನು ತೆಗೆಯಲಾಗಿದೆ. ಐದು ರಸ್ತೆಗಳಲ್ಲಿ ಧರೆಗುರುಳಿದ್ದ ವಿದ್ಯುತ್ ಕಂಬಗಳನ್ನು ಸಹ ತೆರವುಗೊಳಿಸಲಾಗಿದೆ.

'ನಾವು ಅವಧಿ ಮೀರಿ ಕೆಲಸ ಮಾಡುವುದಿಲ್ಲ. ಆದರೆ, ನಮ್ಮ ಪಾಳಿಯು ಬೆಳಿಗ್ಗೆ 6 ಗಂಟೆಗೆ ಪ್ರಾರಂಭವಾದಾಗಿನಿಂದ ಕೈತುಂಬ ಕೆಲಸ ಮಾಡುತ್ತೇವೆ. ಈಗ ಸಂಗ್ರಹವಾದ ತ್ಯಾಜ್ಯವು ಸಾಮಾನ್ಯಕ್ಕಿಂತ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ಗಿಂಡಿ ಬಳಿಯ ಪೌರ ಕಾರ್ಮಿಕರೊಬ್ಬರು ಹೇಳಿದರು.

ಚೆನ್ನೈ ಕಾರ್ಪೋರೇಷನ್ ಕಮಿಷನರ್ ಗಗನ್‌ದೀಪ್ ಸಿಂಗ್ ಬೇಡಿ, ಮೇಯರ್ ಆರ್ ಪ್ರಿಯಾ ಮತ್ತು ಉಪಮೇಯರ್ ಮಹೇಶ್ ಕುಮಾರ್ ಅವರು ಶುಕ್ರವಾರ ರಾತ್ರಿಯಿಂದ ನಗರದಾದ್ಯಂತ ತೀವ್ರ ಹಾನಿಗೊಳಗಾದ ಪ್ರದೇಶಗಳನ್ನು ಪರಿಶೀಲಿಸುತ್ತಿದ್ದಾರೆ. 911 ಪಂಪ್‌ಗಳನ್ನು ಸ್ಟ್ಯಾಂಡ್‌ಬೈನಲ್ಲಿ ಇರಿಸಲಾಗಿದ್ದು, ನಾಗರಿಕ ಸಂಸ್ಥೆಯು 329 ಪಂಪ್‌ಗಳ ಮೂಲಕ ನೀರನ್ನು ಹೊರಹಾಕುತ್ತಿದೆ.

ನಗರದ ಇತರ ಭಾಗಗಳಲ್ಲಿ, ಕೆಲವು ಮರಗಳು ಬಿದ್ದಿದ್ದು, ಕಿಲ್ಪಾಕ್ ಮತ್ತು ಕಾಮರಾಜರ್ ಸಲೈನಲ್ಲಿ ಎರಡು ಬಸ್ ಶೆಲ್ಟರ್‌ಗಳು ಮತ್ತು ಎಗ್ಮೋರ್‌ನ ಪೆಟ್ರೋಲ್ ಬಂಕ್ ಸೇರಿದಂತೆ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಯನ್ನು ಹಾನಿಗೊಳಿಸಿವೆ. ಅಡ್ಯಾರ್ ಉದ್ದಕ್ಕೂ ಕಾರ್ಪೊರೇಷನ್ ಹೊಸದಾಗಿ ನೆಟ್ಟಿರುವ ಸಸಿಗಳ ಪೈಕಿ ಕೆಲವು ಚಂಡಮಾರುತದಿಂದಾಗಿ ಹಾಳಾಗಿವೆ. ವಲಯ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳು ನಗರದಾದ್ಯಂತ ಸ್ವಚ್ಛತಾ ಕಾರ್ಯವನ್ನು ನೋಡಿಕೊಳ್ಳುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT