ನವದೆಹಲಿ: ಕಳೆದ ಮೂರು ವರ್ಷಗಳಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ 177 ಸಿಬ್ಬಂದಿ ಕರ್ತವ್ಯದಲ್ಲಿದ್ದಾಗ ಪ್ರಾಣ ತ್ಯಾಗ ಮಾಡಿದ್ದಾರೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಬುಧವಾರ ರಾಜ್ಯಸಭೆಗೆ ತಿಳಿಸಿದ್ದಾರೆ.
2019, 2020 ಮತ್ತು 2021 ರಲ್ಲಿ ಸಿಆರ್ಪಿಎಫ್ನ 98 ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಬಿಎಸ್ಎಫ್ನ 40 ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ರೈ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: ಚೀನಾ ವಿಚಾರ ಟಿವಿಯಲ್ಲಿ, ಹೊರಗೆ ಚರ್ಚೆ ನಡೆಯುತ್ತಿದೆ; ಸದನದಲ್ಲೂ ಅವಕಾಶಕ್ಕೆ ಒತ್ತಾಯಿಸಿ ಪ್ರತಿಪಕ್ಷಗಳ ಸಭಾತ್ಯಾಗ
ಐಟಿಬಿಪಿಗೆ ಸೇರಿದ 19 ಸಿಬ್ಬಂದಿ, ಅಸ್ಸಾಂ ರೈಫಲ್ಸ್ನ 13 ಸಿಬ್ಬಂದಿ, ಸಿಐಎಸ್ಎಫ್ನ ನಾಲ್ವರು ಮತ್ತು ಎಸ್ಎಸ್ಬಿಯ ಮೂವರು ಸಿಬ್ಬಂದಿ ಕರ್ತವ್ಯದಲ್ಲಿರುವಾಗಲೇ ಪ್ರಾಣತ್ಯಾಗ ಮಾಡಿದ್ದಾರೆ ಎಂದು ಕೇಂದ್ರ ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಹುತಾತ್ಮ ಸಿಬ್ಬಂದಿ ಕೇಂದ್ರ ಸರ್ಕಾರ 25 ರಿಂದ 45 ಲಕ್ಷ ರೂಪಾಯಿವರೆಗೆ ಏಕರೂಪದ ಪರಿಹಾರ, ಉದಾರೀಕೃತ ಕುಟುಂಬ ಪಿಂಚಣಿ, ಮರಣ ಮತ್ತು ನಿವೃತ್ತಿ ಗ್ರಾಚ್ಯುಟಿಯಂತಹ ಇತರ ಎಲ್ಲಾ ಸಾಮಾನ್ಯ ಸೇವಾ ಪ್ರಯೋಜನಗಳು, ರಜೆ ಎನ್ಕ್ಯಾಶ್ಮೆಂಟ್, ಕೇಂದ್ರ ಸರ್ಕಾರಿ ನೌಕರರ ವಿಮಾ ಯೋಜನೆ, ಸಾಮಾನ್ಯ ಭವಿಷ್ಯ ನಿಧಿ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಅವರ ಸಂಬಂಧಿಕರಿಗೆ ನೀಡಲಾಗುತ್ತದೆ ಎಂದು ರೈ ತಿಳಿಸಿದ್ದಾರೆ.