ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ 
ದೇಶ

ಬಿಜೆಪಿ ನನ್ನ 'ಗುರು' ಎಂದು ಭಾವಿಸುತ್ತೇನೆ, ದೆಹಲಿಯ ಚಳಿಗೆ ಶ್ವೆಟರ್ ಹಾಕದಿರುವ ಗುಟ್ಟನ್ನು ವಿಡಿಯೊ ಮಾಡಿ ಹೇಳುತ್ತೇನೆ: ರಾಹುಲ್ ಗಾಂಧಿ

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಇಂದು ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ ಭಾರತ್ ಯಾತ್ರೆಯ ಬಗ್ಗೆ ಮಾತನಾಡುತ್ತಾ ಆರ್ ಎಸ್ ಎಸ್-ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. 

ನವದೆಹಲಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಇಂದು ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ ಭಾರತ್ ಯಾತ್ರೆಯ ಬಗ್ಗೆ ಮಾತನಾಡುತ್ತಾ ಆರ್ ಎಸ್ ಎಸ್-ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. 

ನಾನು ಈ ಯಾತ್ರೆಯನ್ನು ಪ್ರಾರಂಭಿಸಿದಾಗ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸಾಮಾನ್ಯ ಯಾತ್ರೆಯಾಗಿ ತೆಗೆದುಕೊಂಡೆ. ಈ ಯಾತ್ರೆಯು ಧ್ವನಿ ಮತ್ತು ಭಾವನೆಗಳನ್ನು ಹೊಂದಿದೆ ಎಂದು ಹೋಗುತ್ತಾ ನಿಧಾನವಾಗಿ ಅರ್ಥಮಾಡಿಕೊಂಡಿದ್ದೇವೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರಿಗೆ ಈ ಸಂದರ್ಭದಲ್ಲಿ ಧನ್ಯವಾದ ಹೇಳಬೇಕು, ಏಕೆಂದರೆ ಅವರು ನಮ್ಮನ್ನು ಹೆಚ್ಚು ಗುರಿಯಾಗಿಸಿಕೊಂಡರೆ ಪರೋಕ್ಷವಾಗಿ ನಮಗೆ ಲಾಭವಾಗುತ್ತದೆ ಎಂದರು.

ಅವರು (ಬಿಜೆಪಿ) ನಮ್ಮ ಮೇಲೆ ಆಕ್ರಮಣಕಾರಿಯಾಗಿ ದಾಳಿ ಮಾಡಬೇಕೆಂದೇ ನಾನು ಹೇಳುತ್ತೇನೆ. ಇದು ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ನಾನು ಬಿಜೆಪಿಯವರನ್ನು ನನ್ನ ಗುರು ಎಂದು ಪರಿಗಣಿಸುತ್ತೇನೆ, ಅವರು ನನಗೆ ದಾರಿ ತೋರಿಸುತ್ತಿದ್ದಾರೆ, ಏನು ಮಾಡಬಾರದು ಎಂಬುದರ ಕುರಿತು ನನಗೆ ತರಬೇತಿ ನೀಡುತ್ತಿದ್ದಾರೆ ಎಂದರು.

ಭಾರತ್ ಜೋಡೋ ಯಾತ್ರೆಯ ಬಾಗಿಲು ಎಲ್ಲರಿಗೂ ತೆರೆದಿದೆ, ಬಿಜೆಪಿಯವರು ಸೇರಿದಂತೆ ಯಾರು ಬೇಕಾದರೂ ಈ ಯಾತ್ರೆಯಲ್ಲಿ ಭಾಗವಹಿಸಬಹುದು. ಅಖಿಲೇಶ್ ಯಾದವ್,  ಮಾಯಾವತಿಯರು ಹೀಗೆ ಯಾತ್ರೆಯಲ್ಲಿ ಸೇರುವವರಿಗೆ ಮತ್ತು ನಮಗೆ ಹಿಂದೂಸ್ತಾನದ ಮೇಲೆ ಪ್ರೀತಿಯಿದ್ದು ನಮ್ಮ ಮಧ್ಯೆ ತತ್ವ-ಸಿದ್ಧಾಂತಗಳಲ್ಲಿ ಸಂಬಂಧವಿದೆ ಎಂದರು. 

ಪ್ರತಿಪಕ್ಷಗಳು ದೂರದೃಷ್ಟಿಯೊಂದಿಗೆ ಸಮರ್ಥವಾಗಿ ನಿಂತರೆ, ಚುನಾವಣೆಯಲ್ಲಿ ಗೆಲ್ಲುವುದು ಬಿಜೆಪಿಗೆ ತುಂಬಾ ಕಷ್ಟಕರವಾಗುತ್ತದೆ. ಆದರೆ ಪ್ರತಿಪಕ್ಷಗಳು ಸರಿಯಾಗಿ ಸಮನ್ವಯ ಸಾಧಿಸಬೇಕು, ಪ್ರತಿಪಕ್ಷಗಳು ಪರ್ಯಾಯ ದೃಷ್ಟಿಯೊಂದಿಗೆ ಜನರ ಬಳಿಗೆ ಹೋಗಬೇಕು ಎಂದು ಅಭಿಪ್ರಾಯಪಟ್ಟರು.

ಬಿಜೆಪಿ ವಿರುದ್ಧ ಭಾರೀ ಅಸ್ತ್ರವಿದೆ. ಬಿಜೆಪಿ-ಕಾಂಗ್ರೆಸ್ ನಡುವಿನ ಹೋರಾಟವು ಇನ್ನು ಮುಂದೆ ತಂತ್ರಗಾರಿಕೆಯ ರಾಜಕೀಯ ಹೋರಾಟವಲ್ಲ. ವಿರೋಧಕ್ಕೆ ಕೇಂದ್ರೀಯ ಸೈದ್ಧಾಂತಿಕ ಚೌಕಟ್ಟು ಬೇಕು, ಅದು ಕಾಂಗ್ರೆಸ್ ಮಾತ್ರ ಒದಗಿಸಬಲ್ಲದು ಎಂದರು.
ದೆಹಲಿಯ ವಿಪರೀತ ಚಳಿಯಲ್ಲಿ ರಾಹುಲ್ ಗಾಂಧಿಯವರು ಕೇವಲ ಅರ್ಥತೋಳಿನ ಬಿಳಿ ಶರ್ಟ್ ಧರಿಸಿಕೊಂಡು ಹೇಗೆ ಓಡಾಡುತ್ತಾರೆ, ಏಕೆ ಓಡಾಡುತ್ತಿದ್ದಾರೆ ಎಂದೆಲ್ಲ ಚರ್ಚೆಯಾಗಿತ್ತು. ಇಂದು ಸುದ್ದಿಗೋಷ್ಠಿಯಲ್ಲಿ ಕೂಡ ಆ ಬಗ್ಗೆ ಪ್ರಶ್ನೆಗಳು ಬಂದವು.

ಅದಕ್ಕೆ ರಾಹುಲ್ ಗಾಂಧಿಯವರು ಟಿ ಶರ್ಟ್ ನ ಬಗ್ಗೆ ಏಕೆ ಅಷ್ಟೊಂದು ಚರ್ಚೆ, ನನಗೆ ಚಳಿ ಎಂದರೆ ಭಯವಿಲ್ಲ, ಹೀಗಾಗಿ ಶ್ವೆಟರ್ ಧರಿಸುವುದಿಲ್ಲ. ನನಗೆ ಚಳಿ ಅನಿಸಿದಾಗ ಶ್ವೆಟರ್ ಧರಿಸುತ್ತೇನೆ, ಭಾರತ್ ಜೋಡೋ ಯಾತ್ರೆ ಮುಗಿದ ನಂತರ ವಿಡಿಯೊ ಮಾಡಿ ಅದರಲ್ಲಿ ಶ್ವೆಟರ್ ಧರಿಸದಿದ್ದುದರ ಬಗ್ಗೆ ಗುಟ್ಟು ಹೇಳುತ್ತೇನೆ ಎಂದರು.

ಬಿಜೆಪಿ ಸರ್ಕಾರವು ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಭದ್ರತಾ ಶಿಷ್ಟಾಚಾರವನ್ನು ನಾವು ಉಲ್ಲಂಘಿಸುತ್ತಿದ್ದೇವೆ ಎಂದು ಸುಳ್ಳು ಆರೋಪ ಮಾಡುವ ಮೂಲಕ ಮತ್ತು ಕೋವಿಡ್ ಕಳವಳದಿಂದಾಗಿ ನಿಲ್ಲಿಸುವಂತೆ ಪತ್ರಗಳನ್ನು ಕಳುಹಿಸುವ ಮೂಲಕ ಯಾತ್ರೆ ತಡೆಯಲು, ತಮ್ಮ ವಿರುದ್ಧ ಸುಳ್ಳು ಆಪಾದನೆ, ಕೇಸು ಹೊರಿಸಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿಯವರು ಮಾಡುತ್ತಿರುವ ರೋಡ್ ಶೋಗಳು ಕೋವಿಡ್ ಪ್ರೋಟೋಕಾಲ್‌ಗಳ ಉಲ್ಲಂಘನೆಯಲ್ಲವೇ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು. ಎಂದು ಕೇಳಿದರು.

"ನೀವು ಬುಲೆಟ್ ಪ್ರೂಫ್ ವಾಹನದಲ್ಲಿ ಹೋಗುತ್ತೀರಿ ಎಂದು ಗೃಹ ಸಚಿವಾಲಯ ಹೇಳುತ್ತದೆ. ನಾನು ಅದನ್ನು ಹೇಗೆ ಹೊಂದಲು ಸಾಧ್ಯ, ನಾನು ಯಾತ್ರೆಗೆ ಕಾಲ್ನಡಿಗೆಯಲ್ಲಿ ನಡೆಯಬೇಕು.. ಭದ್ರತೆಗಾಗಿ ಏನು ಮಾಡಬೇಕೆಂದು ಅವರಿಗೆ ತಿಳಿದಿದೆ, ಅದು ಅವರಿಗೆ ಬಿಟ್ಟ ಸಮಸ್ಯೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

SCROLL FOR NEXT