ಮಳೆಯ ನಡುವೆ ಮದುವೆಯ ದಿಬ್ಬಣ 
ದೇಶ

ಧಾರಾಕಾರ ಮಳೆಯ ನಡುವೆ ಹಳದಿ ಟಾರ್ಪಾಲ್ ಅಡಿಯಲ್ಲಿ ಮದುವೆಯ ದಿಬ್ಬಣದ ಸಂಭ್ರಮ ಕಣ್ತುಂಬಿಕೊಂಡ ಜನತೆ! 

ಮಳೆಗಾಲದಲ್ಲಿ ಸುರಿಯುವ ವರ್ಷಧಾರೆ ನಮ್ಮ ಪ್ರವಾಸದ ಯೋಜನೆಗಳನ್ನೆಲ್ಲಾ ಬುಡಮೇಲು ಮಾಡುತ್ತದೆ ಎಂಬುದು ಹಲವರಿಲ್ಲಿರುವ ಸಾಮಾನ್ಯವಾದ ಭಯ.

ಚತ್ತೀಸ್ ಗಢ: ಮಳೆಗಾಲದಲ್ಲಿ ಸುರಿಯುವ ವರ್ಷಧಾರೆ ನಮ್ಮ ಪ್ರವಾಸದ ಯೋಜನೆಗಳನ್ನೆಲ್ಲಾ ಬುಡಮೇಲು ಮಾಡುತ್ತದೆ ಎಂಬುದು ಹಲವರಿಲ್ಲಿರುವ ಸಾಮಾನ್ಯವಾದ ಭಯ. ಆದರೆ ವಿವಾಹ ಕಾರ್ಯಕ್ರಮವೊಂದಲ್ಲಿ ಭಾಗಿಯಾಗಿದ್ದ ತಂಡವೊಂದು ಭಾರಿ ವರ್ಷಧಾರೆಯ ನಡುವೆಯೇ ಮದುವೆಯ ದಿಬ್ಬಣವನ್ನು ನಡೆಸಿ ಸಂಭ್ರಮಿಸಿದೆ. 

ಮಳೆಯನ್ನೂ ಲೆಕ್ಕಿಸದೇ ಹಳದಿ ಟಾರ್ಪಾಲ್ ನ ಅಡಿಯಲ್ಲಿ ಮದುವೆಯ ಮೆರವಣಿಗೆಯನ್ನು ಮಂದಿ ಸಂಭ್ರಮಿಸುತ್ತಿರುವ ವೀಡಿಯೋ ವೈರಲ್ ಆಗಿದೆ. ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ ಈ ಟ್ವೀಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಈ ರೀತಿಯ ಅವಿಸ್ಮರಣೀಯ ಘಟನೆಯನ್ನು ಈ ವರೆಗೂ ಎಂದಿಗೂ ನೋಡಿಲ್ಲ ಎಂದು ಹೇಳಿದ್ದಾರೆ.
 
ಒಂದು ನಿಮಿಷದ ಈ ವಿಡಿಯೋ ಒಂದರಲ್ಲಿ ಜನರ ಗುಂಪೊಂದು ಹಳದಿ ಬಣ್ಣದ ಬೃಹತ್ ಟಾರ್ಪಾಲ್ ಅಡಿಯಲ್ಲಿ ಆಶ್ರಯ ಪಡೆದಿದ್ದು, ಮಳೆಯನ್ನೂ ಲೆಕ್ಕಿಸದೇ  ಮೆರವಣಿಗೆಯನ್ನು ಆನಂದಿಸುತ್ತಿದ್ದರು. ಇನ್ನೂ ಕೆಲವು ಮಂದಿ ಮಳೆಯಲ್ಲಿಯೇ ನೃತ್ಯ ಮಾಡುತ್ತಿದ್ದದ್ದೂ ಕಂಡುಬಂದಿದೆ. ಈ ವಿಡಿಯೋ ಇಂಟರ್ನೆಟ್ ನಲ್ಲಿ ಹೆಚ್ಚು ಪೋಸ್ಟ್ ಆಗುತ್ತಿದ್ದಂತೆಯೇ ನೆಟ್ಟಿಗರು ತಮಾಷೆಯ ಪ್ರತಿಕ್ರಿಯೆಗಳನ್ನೂ ನೀಡಿದ್ದಾರೆ. 

ಏನೇ ಆಗಲಿ, ಮದುವೆಯ ದಿಬ್ಬಣ ನಡೆದೇ ನಡೆಯುತ್ತದೆ ಎಂಬ ಈ ಜನಗಳ ದೃಢ ಸಂಕಲ್ಪದಿಂದ ನಾನು ಪ್ರಭಾವಿತನಾಗಿದ್ದೇನೆ ಎಂದು ಓರ್ವ ವ್ಯಕ್ತಿ ಹೇಳಿದರೆ, ಮನಸ್ಸಿದ್ದರೆ ಮಾರ್ಗ ಎಂದಿದ್ದಾರೆ ಮತ್ತೋರ್ವ ನೆಟ್ಟಿಗರು. ಮತ್ತೋರ್ವ ವ್ಯಕ್ತಿ ಈ ವೀಡಿಯೋಗೆ ಮಳೆಯಲ್ಲಿ ನೃತ್ಯ:  ಮದುವೆಯ ದಿಬ್ಬಣದ ವಿಶೇಷ ಸಂದರ್ಭ ಎಂಬ ಶೀರ್ಷಿಕೆ ನೀಡಿ ಟ್ವೀಟ್ ಮಾಡಿದ್ದಾರೆ. 

ಇನ್ನೊಬ್ಬರು ಈ ವಿಡಿಯೋದ ಮೂಲಕ ತಾನೇಕೆ ತನ್ನ ದೇಶವನ್ನು ಪ್ರೀತಿಸುತ್ತೇನೆ ಎಂದು ಹೇಳಲು ಯತ್ನಿಸಿದ್ದು,  ನನ್ನ ದೇಶವನ್ನು ನಾನೇಕೆ ಪ್ರೀತಿಸುತ್ತೇನೆ ಎಂದರೆ ಜನರು ಪರಿಸ್ಥಿತಿ ಏನೇ ಇರಲಿ ಅವರ ದಿನವನ್ನು ಆನಂದಿಸುವುದನ್ನು ಮಾತ್ರ ಮರೆಯುವುದಿಲ್ಲ ಎಂದು ಕಾಮೆಂಟಿಸಿದ್ದಾರೆ. ಈ ವರೆಗೂ ಈ ವಿಶೇಷ ವಿಡಿಯೋ 300 ಸಾವಿರ ವೀಕ್ಷಣೆಗಳನ್ನು ಕಂಡಿದ್ದು, 14 ಸಾವಿರಕ್ಕೂ ಅಧಿಕ ಮಂದಿ ಲೈಕ್ ನೀಡಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT