ನವದೆಹಲಿ: ಉತ್ತರ ಪ್ರದೇಶದ ಬುಂದೇಲ್ಖಂಡ್ ಎಕ್ಸ್ ಪ್ರೆಸ್ವೇ ಯನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಉದ್ಘಾಟಿಸಲಿದ್ದಾರೆ. ಸುಮಾರು 14,850 ಕೋಟಿ ರೂ. ವೆಚ್ಚದಲ್ಲಿ 296 ಕಿ.ಮೀ ಉದ್ದದ ಚತುಷ್ಪಥ ಎಕ್ಸ್ ಪ್ರೆಸ್ ವೇ ನಿರ್ಮಿಸಲಾಗಿದೆ.
ಬುಂದೇಲ್ಖಂಡ್ ಎಕ್ಸ್ ಪ್ರೆಸ್ವೇಗೆ ಸಂಬಂಧಿಸಿದ ಪ್ರಮುಖ 5 ಅಂಶಗಳು ಇಲ್ಲಿವೆ
- ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 2020 ರಲ್ಲಿ ನಾಲ್ಕು-ಪಥದ ಎಕ್ಸ್ ಪ್ರೆಸ್ ವೇಗೆ ಶಂಕುಸ್ಥಾಪನೆ ಮಾಡಿದರು. ಉತ್ತರ ಪ್ರದೇಶ ಎಕ್ಸ್ ಪ್ರೆಸ್ವೇ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ (ಯುಪಿಇಐಡಿಎ) ಬೆಂಬಲದೊಂದಿಗೆ 28 ತಿಂಗಳೊಳಗೆ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ.
- ಎಕ್ಸ್ ಪ್ರೆಸ್ವೇಯು ಉತ್ತರ ಪ್ರದೇಶದ ಚಿತ್ರಕೂಟ್ನ ಗೊಂಡಾ ಗ್ರಾಮದಲ್ಲಿ NH-35 ನಿಂದ ರಾಜ್ಯದ ಇಟಾವಾ ಜಿಲ್ಲೆಯವರೆಗೆ ವಿಸ್ತರಿಸಿದೆ. ಅಲ್ಲಿ ಇದು 300 ಕಿಮೀ ಉದ್ದದ ಆಗ್ರಾ-ಲಕ್ನೋ ಎಕ್ಸ್ ಪ್ರೆಸ್ವೇಯೊಂದಿಗೆ ವಿಲೀನಗೊಳ್ಳುತ್ತದೆ.
- ಎಕ್ಸ್ ಪ್ರೆಸ್ವೇ ಪ್ರಸ್ತುತ ನಾಲ್ಕು ಲೇನ್ಗಳನ್ನು ಹೊಂದಿದೆ ಆದರೆ ಇದನ್ನು ಆರು-ಪಥದ ಎಕ್ಸ್ ಪ್ರೆಸ್ವೇಗೆ ವಿಸ್ತರಿಸಬಹುದು. ಇದು ಉತ್ತರ ಪ್ರದೇಶದ ಚಿತ್ರಕೂಟ, ಬಂದಾ, ಮಹೋಬಾ, ಹಮೀರ್ಪುರ, ಜಲೌನ್, ಔರೈಯಾ ಮತ್ತು ಇಟಾವಾ ಏಳು ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ
- 2020 ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬುಂದೇಲ್ಖಂಡ್ ಎಕ್ಸ್ ಪ್ರೆಸ್ವೇ ಬುಂದೇಲ್ಖಂಡದಲ್ಲಿ ನಿರ್ಮಿಸಲಾಗುತ್ತಿರುವ ರಕ್ಷಣಾ ಕಾರಿಡಾರ್ಗೆ ಉತ್ತೇಜನ ನೀಡಲಿದೆ ಎಂದು ಹೇಳಿದರು.
- ಬುಂದೇಲ್ಖಂಡ್ ಎಕ್ಸ್ ಪ್ರೆಸ್ವೇ ಆಗ್ರಾ-ಲಕ್ನೋ ಎಕ್ಸ್ ಪ್ರೆಸ್ವೇ ಮತ್ತು ಯಮುನಾ ಎಕ್ಸ್ ಪ್ರೆಸ್ವೇ ಮೂಲಕ ದೆಹಲಿಗೆ ಸಂಪರ್ಕಿಸುತ್ತದೆ.