ನೌಕರರು (ಸಂಗ್ರಹ ಚಿತ್ರ) 
ದೇಶ

ಜುಲೈ 1ರಿಂದ ಹೊಸ ಕಾರ್ಮಿಕ ನೀತಿ; ಏನೆಲ್ಲಾ ಬದಲಾಗಲಿದೆ?: ಇಲ್ಲಿದೆ ಮಾಹಿತಿ...

ಜುಲೈ 1 ರಿಂದ ಹೊಸ ಕಾರ್ಮಿಕ ನೀತಿಯನ್ನ ಜಾರಿಗೆ ತರಲು ಕೇಂದ್ರವು ಮುಂದಾಗಿದೆ. ಹೀಗಾಗಿ ಕೈಯಲ್ಲಿರುವ ಸಂಬಳ, ಉದ್ಯೋಗಿಗಳ ಪಿಎಫ್ ಕೊಡುಗೆ ಮತ್ತು ಕೆಲಸದ ಸಮಯವು ಗಮನಾರ್ಹವಾಗಿ ಬದಲಾಗಬಹುದು.

ಜುಲೈ 1 ರಿಂದ ಹೊಸ ಕಾರ್ಮಿಕ ನೀತಿಯನ್ನ ಜಾರಿಗೆ ತರಲು ಕೇಂದ್ರವು ಮುಂದಾಗಿದೆ. ಹೀಗಾಗಿ ಕೈಯಲ್ಲಿರುವ ಸಂಬಳ, ಉದ್ಯೋಗಿಗಳ ಪಿಎಫ್ ಕೊಡುಗೆ ಮತ್ತು ಕೆಲಸದ ಸಮಯವು ಗಮನಾರ್ಹವಾಗಿ ಬದಲಾಗಬಹುದು. ಹೊಸದಾಗಿ ಸೂಚಿಸಲಾದ ವೇತನ ಸಂಹಿತೆಯಲ್ಲಿ ಮಾರ್ಪಾಡುಗಳಿದ್ದು ಕಾರ್ಮಿಕರ ಕೆಲಸದ ಸಮಯ, ಪಿಎಫ್ ಕೊಡುಗೆಗಳು ಮತ್ತು ಉದ್ಯೋಗಿಗಳ ಸಂಬಳದಲ್ಲಿ ವ್ಯತ್ಯಾಸವಾಗಲಿದೆ. ಜುಲೈ 1 ರಿಂದ ಜಾರಿಗೆ ಬರುವಂತೆ ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರಲು ಸರ್ಕಾರ ಪ್ರಕ್ರಿಯೆಯಲ್ಲಿದೆ.

ಆದಾಗ್ಯೂ ಕೆಲವು ರಾಜ್ಯಗಳು ಇನ್ನೂ ಎಲ್ಲಾ ನಾಲ್ಕು ಕಾರ್ಮಿಕ ಸಂಹಿತೆಗಳ ಅಡಿಯಲ್ಲಿ ನಿಯಮಗಳನ್ನು ರೂಪಿಸಬೇಕಾಗಿದೆ. ಕೇವಲ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವೇತನ ಸಂಹಿತೆಯ ಅಡಿಯಲ್ಲಿ ಕರಡು ನಿಯಮಗಳನ್ನು ಪ್ರಕಟಿಸಿವೆ ಎಂದು ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವ ರಾಮೇಶ್ವರ್ ತೇಲಿ ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಹೊಸ ಕಾನೂನಿನ ಪ್ರಕಾರ  ಕಂಪನಿಗಳು ಕೆಲಸದ ಸಮಯವನ್ನು ದಿನಕ್ಕೆ 8-9 ಗಂಟೆಗಳಿಂದ 12 ಗಂಟೆಗಳವರೆಗೆ ಹೆಚ್ಚಿಸಬಹುದು. ಆದಾಗ್ಯೂ ಅವರು ಉದ್ಯೋಗಿಗಳಿಗೆ ಮೂರು ವಾರದ ರಜೆಗಳನ್ನು ನೀಡಬೇಕಾಗುತ್ತದೆ.ಆದ್ದರಿಂದ  ಒಂದು ವಾರದ ಕೆಲಸದ ದಿನಗಳನ್ನು ನಾಲ್ಕು ದಿನಗಳಿಗೆ ಇಳಿಸಲಾಗುತ್ತದೆ ಆದರೆ ಒಂದು ವಾರದಲ್ಲಿ ಒಟ್ಟು ಕೆಲಸದ ಸಮಯದ ಮೇಲೆ ಪರಿಣಾಮ ಬೀರುವುದಿಲ್ಲ. ಹೊಸ ವೇತನ ಸಂಹಿತೆಯು ವಾರಕ್ಕೆ ಒಟ್ಟು 48 ಕೆಲಸದ ಸಮಯವನ್ನು ಕಡ್ಡಾಯಗೊಳಿಸುತ್ತದೆ.

ಹೊಸ ವೇತನ ಸಂಹಿತೆಯಡಿಯಲ್ಲಿ ಮೂಲ ವೇತನವು ಒಟ್ಟು ಮಾಸಿಕ ವೇತನದ ಕನಿಷ್ಠ 50 ಪ್ರತಿಶತದಷ್ಟು ಆಗಿರುವುದರಿಂದ ಉದ್ಯೋಗಿಗಳು ಮನೆಗೆ ತೆಗೆದುಕೊಳ್ಳುವ ಸಂಬಳವೂ ಗಮನಾರ್ಹವಾಗಿ ಬದಲಾಗುತ್ತದೆ. ಇದು ಉದ್ಯೋಗಿಗಳು ಮತ್ತು ಉದ್ಯೋಗದಾತರು ನೀಡುವ ಪಿಎಫ್ ಕೊಡುಗೆಗಳನ್ನು ಹೆಚ್ಚಿಸುತ್ತದೆ.

ಖಾಸಗಿ ವಲಯದ ಉದ್ಯೋಗಿಗಳಿಗೆ ಕೈಯಲ್ಲಿರುವ ಸಂಬಳವು ಹೆಚ್ಚು ಪರಿಣಾಮ ಬೀರಲಿದೆ. ಹೊಸ ಕಾರ್ಮಿಕ ಕಾನೂನುಗಳ ಅಡಿಯಲ್ಲಿ, ನಿವೃತ್ತಿಯ ವೇಳೆ ಪಡೆಯುವ ಮೊತ್ತ ಮತ್ತು ಗ್ರಾಚ್ಯುಟಿ ಮೊತ್ತವು ಹೆಚ್ಚಾಗುತ್ತದೆ. ಕೇಂದ್ರ ಜಾರಿಗೊಳಿಸುತ್ತಿರುವ ನಾಲ್ಕು ಕಾರ್ಮಿಕ ಸಂಹಿತೆಗಳೆಂದರೆ  – ವೇತನ ಸಂಹಿತೆ, ಸಾಮಾಜಿಕ ಭದ್ರತಾ ಸಂಹಿತೆ, ಕೆಲಸದ ಸ್ಥಳದಲ್ಲಿ ಸುರಕ್ಷತೆ- ಆರೋಗ್ಯ- ಸ್ಥಿತಿಗತಿ ಸಂಹಿತೆ ಮತ್ತು  ಕೈಗಾರಿಕಾ ಸಂಬಂಧಗಳ ಸಂಹಿತೆ.

ಸಂಸತ್ತು ಕಾರ್ಮಿಕ ಸಂಹಿತೆಗಳನ್ನು ಈಗಾಗಲೇ ಅಂಗೀಕರಿಸಿದೆ.  ಆದರೆ ಕಾರ್ಮಿಕರು ಸಂವಿಧಾನದ ಸಮಕಾಲೀನ ಪಟ್ಟಿಯಲ್ಲಿ ಒಂದು ವಿಷಯವಾಗಿರುವುದರಿಂದ, ರಾಜ್ಯಗಳು ಹೊಸ ಸಂಹಿತೆಯ ಅಡಿಯಲ್ಲಿ ನಿಯಮಗಳನ್ನು ತಿಳಿಸುವ ಅಗತ್ಯವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT