ದೇಶ

ಅಕ್ರಮ ಹಣ ವರ್ಗಾವಣೆ ಪ್ರಕರಣ: ಜುಲೈ 1ಕ್ಕೆ ವಿಚಾರಣೆಗೆ ಹಾಜರಾಗಲು ಸಂಜಯ್ ರಾವತ್ ಗೆ ಇಡಿ ಮತ್ತೆ ಸಮನ್ಸ್

Nagaraja AB

ಮುಂಬೈ: ಜುಲೈ 1 ರಂದು ವಿಚಾರಣೆಗೆ ಹಾಜರಾಗುವಂತೆ ಶಿವಸೇನಾ ಸಂಸದ ಸಂಜಯ್ ರಾವತ್ ಅವರಿಗೆ ಜಾರಿ ನಿರ್ದೇಶನಾಲಯ ಹೊಸದಾಗಿ ಸಮನ್ಸ್ ನೀಡಿದೆ.

ಹಣ ವರ್ಗಾವಣೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಇಡಿ ಮುಂದೆ ವಿಚಾರಣೆಗೆ ಹಾಜರಾಗಲು ಸಂಜಯ್ ರಾವತ್ ಮಂಗಳವಾರ ಹೆಚ್ಚಿನ ಸಮಯಾವಕಾಶ ಕೋರಿದ್ದು, ತನಿಖಾ ಸಂಸ್ಥೆ ಕೂಡಾ ಅದೇ ಅವಕಾಶವನ್ನು ನೀಡಿದೆ ಎಂದು ಸಂಜಯ್ ರಾವತ್ ಪರ ವಕೀಲರು ತಿಳಿಸಿದ್ದಾರೆ.

ಇಂದು ಬೆಳಗ್ಗೆ ಸುಮಾರು 11-15ರ ಸುಮಾರಿಗೆ ಇಡಿ ಕಚೇರಿ ತಲುಪಿದ ವಕೀಲರು, ವಿಚಾರಣೆಗೆ ಹಾಜರಾಗಲು ಸಮಯಾವಕಾಶ ಕೋರಿಕೆಗೆ ಸಂಬಂಧಿಸಿದ ಪತ್ರಗಳನ್ನು ತನಿಖಾ ಅಧಿಕಾರಿಗಳಿಗೆ ಸಲ್ಲಿಸಿದರು.

ಸೋಮವಾರ ಮಧ್ಯಾಹ್ನ ತಡವಾಗಿ ಇಡಿ ಸಮನ್ಸ್ ನೀಡಿದೆ. ಇಡಿ ಕೆಲವು ದಾಖಲೆಗಳನ್ನು ಕೋರಿರುವುದರಿಂದ ನಾವು ಸಮಯ ಕೋರಿ ಅರ್ಜಿ ಸಲ್ಲಿಸಿದ್ದೇವೆ ಎಂದು ವಕೀಲರು ಹೇಳಿದರು. ಅವರು 14 ದಿನಗಳ ಕಾಲಾವಕಾಶವನ್ನು ಬಯಸಿದರು. ಅಷ್ಟು ಕಡಿಮೆ ಅವಧಿಯಲ್ಲಿ ಆ ದಾಖಲೆಗಳನ್ನು ಸಂಗ್ರಹಿಸಲು ಸಾಧ್ಯವಿಲ್ಲ, ಇದರಿಂದಾಗಿ ನಾವು ಇಡಿಯಿಂದ ಸಮಯ ಕೇಳಿದ್ದೇವೆ ಮತ್ತು ಅದಕ್ಕೆ ಅವಕಾಶ ನೀಡಲಾಗಿದೆ ಎಂದು ಅವರು ಹೇಳಿದರು.

SCROLL FOR NEXT