ಸಾಂದರ್ಭಿಕ ಚಿತ್ರ 
ದೇಶ

ದೆಹಲಿ ಮಾಲಿನ್ಯ: ವಾಯು ಗುಣಮಟ್ಟ ಎಕ್ಯುಐ ಮೀಟರ್ ನಲ್ಲಿ 326 ದಾಖಲು, ಮುಂದಿನ ದಿನಗಳಲ್ಲಿ ಮತ್ತಷ್ಟು ಹದಗೆಡುವ ಸಾಧ್ಯತೆ

ವಾಯು ಗುಣಮಟ್ಟ ಸೂಚ್ಯಂಕ(AQI) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ(Delhi air pollution) ಸೋಮವಾರ ಬೆಳಗ್ಗೆ ಕಡಿಮೆಯಾಗಿ ವಾಯುಗುಣಮಟ್ಟ ಕಳಪೆಯಾಗಿದೆ. ಕಳೆದ ವಾರದ ಗಂಭೀರ ಸ್ಥಿತಿಯಿಂದ ಈಗ ಕಳಪೆ ಗುಣಮಟ್ಟಕ್ಕೆ ಬಂದಿದೆ ಎಂದು ಹವಾಮಾನ ವ್ಯವಸ್ಥೆಯನ್ನು ಸೂಚಿಸುವ SAFAR ಹೇಳಿದೆ.

ನವದೆಹಲಿ: ವಾಯು ಗುಣಮಟ್ಟ ಸೂಚ್ಯಂಕ(AQI) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ(Delhi air pollution) ಸೋಮವಾರ ಬೆಳಗ್ಗೆ ಕಡಿಮೆಯಾಗಿ ವಾಯುಗುಣಮಟ್ಟ ಕಳಪೆಯಾಗಿದೆ. ಕಳೆದ ವಾರದ ಗಂಭೀರ ಸ್ಥಿತಿಯಿಂದ ಈಗ ಕಳಪೆ ಗುಣಮಟ್ಟಕ್ಕೆ ಬಂದಿದೆ ಎಂದು ಹವಾಮಾನ ವ್ಯವಸ್ಥೆಯನ್ನು ಸೂಚಿಸುವ SAFAR ಹೇಳಿದೆ.

ಗರಿಷ್ಠ ಮಾಲಿನ್ಯ ಮಟ್ಟದಿಂದ ತೀವ್ರ ಕಳಪೆ ಗುಣಮಟ್ಟಕ್ಕೆ ದೆಹಲಿ ಮಾಲಿನ್ಯ ಸ್ಥಿತಿ ಬಂದಿದ್ದು ಒಟ್ಟಾರೆ ನಗರದ ವಾಯು ಗುಣಮಟ್ಟ ಸೂಚ್ಯಂಕ 326ರಲ್ಲಿ ನಿಂತಿದ್ದು ಎಚ್ಚರಿಕೆಯ ಸಂದೇಶ ನೀಡಿದೆ.

ಇನ್ನು ರಾಷ್ಟ್ರೀಯ ರಾಜಧಾನಿ ಪ್ರದೇಶ(NCR) ನೊಯ್ಡಾದಲ್ಲಿ ಎಕ್ಯುಐ 356ರಲ್ಲಿ ನಿಂತಿದ್ದು ಅದು ಕೂಡ ತೀರಾ ಕಳಪೆ ಮಟ್ಟದ್ದಾಗಿದೆ. ಗುರುಗ್ರಾಮ್ ನಲ್ಲಿ ಎಕ್ಯುಐ 364 ಇದೆ. ಸೊನ್ನೆಯಿಂದ 100ರವರೆಗೆ ವಾಯು ಗುಣಮಟ್ಟ ಸೂಚ್ಯಂಕ ಇದ್ದರೆ ಉತ್ತಮ, 100ರಿಂದ 200 ಇದ್ದರೆ ಸಾಧಾರಣ, 200ರಿಂದ 300 ಇದ್ದರೆ ಕಳಪೆ, 300ರಿಂದ 400 ಇದ್ದರೆ ತೀರಾ ಕಳಪೆ ಮತ್ತು 400ರಿಂದ 500 ಇದ್ದರೆ ಗಂಭೀರ ಪರಿಸ್ಥಿತಿ ಎಂದು ಪರಿಗಣಿಸಲಾಗುತ್ತದೆ.

ದೆಹಲಿಯಲ್ಲಿನ ವಾಯು ಗುಣಮಟ್ಟ ಮುನ್ಸೂಚನೆ ವ್ಯವಸ್ಥೆ ಬಿಡುಗಡೆ ಮಾಡಿರುವ ಅಂಕಿಅಂಶ ಪ್ರಕಾರ, ಮುಂದಿನ ದಿನಗಳಲ್ಲಿ ದೆಹಲಿಯಲ್ಲಿ ವಾಯುಮಾಲಿನ್ಯ ಗುಣಮಟ್ಟ ಮತ್ತಷ್ಟು ಹದಗೆಡುವ ಸಾಧ್ಯತೆಯಿದೆ. ನವೆಂಬರ್ 8 ಮತ್ತು 9ರಂದು ತೀರಾ ಕಳಪೆ ಮಟ್ಟದಲ್ಲಿರಲಿದೆ ಎದು ಬಿಡುಗಡೆ ಮಾಡಿರುವ ಹವಾಮಾನ ಮುನ್ಸೂಚನೆ ಪ್ರಕಟಣೆ ತಿಳಿಸಿದೆ.

ಆದರೆ ನಿನ್ನೆ ಭಾನುವಾರ ದೆಹಲಿ-ಎನ್ ಸಿಆರ್ ಪ್ರದೇಶದಲ್ಲಿ ಹವಾಮಾನದಲ್ಲಿ ಕೊಂಚ ಸುಧಾರಣೆ ಕಂಡುಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ತಂಡವೊಂದು ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್(GRAP) 4ನೇ ಹಂತವನ್ನು ಹಿಂಪಡೆದಿದ್ದು, ಟ್ರಕ್ ಗಳಿಗೆ ಮತ್ತು ಬಿಎಸ್ 6 ಹಗುರ ಮೋಟಾರು ವಾಹನಗಳಿಗೆ ಪ್ರವೇಶಕ್ಕೆ ನಿರ್ಬಂಧವಿಲ್ಲ. ಆದರೆ GRAP-3ಅಡಿಯಲ್ಲಿ ಬರುವ ಅಗತ್ಯೇತರ ನಿರ್ಮಾಣ ಚಟುವಟಿಕೆಗಳಿಗೆ ನಿರ್ಬಂಧ ಮುಂದುವರಿಯಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳು ನಾಡು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ TVK ಪಕ್ಷ ಸೇರಿದ ಸೆಂಗೊಟ್ಟೈಯನ್ ವಿಜಯ್

CM ಪಟ್ಟಕ್ಕಾಗಿ ಕಿತ್ತಾಟ: ಡಿಕೆಶಿಗೆ 'ಹೈಕಮಾಂಡ್' ಒಲವು ತೋರಿದ್ರೆ, ಸಿದ್ದರಾಮಯ್ಯರ ಮುಂದಿನ ಪ್ಲಾನ್ ಏನು?

ಶಂಕಿತ ದಾಳಿಕೋರ 'ನರಕ ದೇಶ' ಆಫ್ಘಾನಿಸ್ತಾನದಿಂದ ಬಂದವನು, ಇದು ಭಯೋತ್ಪಾದಕ ಕೃತ್ಯ: ನ್ಯಾಷನಲ್ ಗಾರ್ಡ್ ಮೇಲೆ ದಾಳಿಗೆ Donald Trump ತೀವ್ರ ಖಂಡನೆ

450 ಕೋಟಿ ರೂ. ಮೌಲ್ಯದ ಧರ್ಮೇಂದ್ರ ಆಸ್ತಿ ಯಾರ ಪಾಲಾಗುತ್ತೆ? ಕುತೂಹಲ ಕೆರಳಿಸಿದ ಹೇಮಾ ಮಾಲಿನಿ ಪೋಸ್ಟ್!

ಇದು ಜೈಲಲ್ಲ, ಮದ್ಯದ ಫ್ಯಾಕ್ಟರಿ: ಕೈದಿಗಳಿಂದ ಮದ್ಯ ತಯಾರಿಕೆ? ಏನಾಗುತ್ತಿದೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ?

SCROLL FOR NEXT