ಆರವ್-ಕಲ್ಪನಾ 
ದೇಶ

ಮೀರಾ 'ಆರವ್' ಆದ ಕಥೆ: ವಿದ್ಯಾರ್ಥಿನಿಯನ್ನು ಮದುವೆಯಾಗಲು ಲಿಂಗ ಬದಲಿಸಿಕೊಂಡ ಮಹಿಳಾ ದೈಹಿಕ ಶಿಕ್ಷಕಿ!

ಮಹಿಳಾ ದೈಹಿಕ ಶಿಕ್ಷಕಿಯೊಬ್ಬರು ವಿದ್ಯಾರ್ಥಿನಿಯೊಬ್ಬಳ ಪ್ರೇಮ ಪಾಶಕ್ಕೆ ಸಿಲುಕಿದ್ದು ಕೊನೆಗೆ ಆಕೆಯನ್ನು ಮದುವೆಯಾಗುವ ಸಲುವಾಗಿ ತಮ್ಮ ಲಿಂಗವನ್ನೇ ಬದಲಾಯಿಸಿಕೊಂಡಿದ್ದಾರೆ.

ಭರತ್ ಪುರ(ರಾಜಸ್ಥಾನ): ಮಹಿಳಾ ದೈಹಿಕ ಶಿಕ್ಷಕಿಯೊಬ್ಬರು ವಿದ್ಯಾರ್ಥಿನಿಯೊಬ್ಬಳ ಪ್ರೇಮ ಪಾಶಕ್ಕೆ ಸಿಲುಕಿದ್ದು ಕೊನೆಗೆ ಆಕೆಯನ್ನು ಮದುವೆಯಾಗುವ ಸಲುವಾಗಿ ತಮ್ಮ ಲಿಂಗವನ್ನೇ ಬದಲಾಯಿಸಿಕೊಂಡಿದ್ದಾರೆ.

ದೈಹಿಕ ಶಿಕ್ಷಕಿ ಮೀರಾ ದೀಗ್ ಉಪವಿಭಾಗದ ಮೋತಿ ಕಾ ನಾಗ್ಲಾದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಶಾಲೆಯಲ್ಲಿ ಓದುತ್ತಿರುವ ಕಲ್ಪನಾ ಎಂಬ ವಿದ್ಯಾರ್ಥಿನಿಗೆ ಮೀರಾ ಕಬಡ್ಡಿ ಆಟವನ್ನು ಹೇಳಿಕೊಟ್ಟಿದ್ದಲ್ಲದೆ, ಕಲ್ಪನಾ ಅವರನ್ನು ರಾಜ್ಯಮಟ್ಟದಲ್ಲಿ ಕಬಡ್ಡಿ ಆಟ ಆಡಿಸಲು ಕರೆದೊಯ್ದಿದ್ದರು.

ಮೀರಾ ತನ್ನದೇ ಶಾಲೆಯ ವಿದ್ಯಾರ್ಥಿನಿ ಕಲ್ಪನಾಳನ್ನು ಪ್ರೀತಿಸುತ್ತಿದ್ದಳು. ಮೀರಾ ತಮ್ಮ ಲಿಂಗ ಬದಲಿಸಿಕೊಂಡು ಗಂಡಾಗಿ ವಿದ್ಯಾರ್ಥಿನಿ ಕಲ್ಪನಾಳನ್ನು ಮದುವೆಯಾದರು. ಮದುವೆಯಾದ ನಂತರ ಇಬ್ಬರೂ ತುಂಬಾ ಖುಷಿಯಾಗಿದ್ದಾರೆ. ಮೀರಾ ಆರವ್ ಆಗಿ ಬದಲಾಗಿದ್ದು ಆರವ್ ಮತ್ತು ಕಲ್ಪನಾ ಅವರ ಮದುವೆಯಿಂದ ಎರಡೂ ಕುಟುಂಬಗಳು ತುಂಬಾ ಸಂತೋಷವಾಗಿವೆ.

ನಾನು ಯಾವಾಗಲೂ ಹುಡುಗ ಎಂದು ಭಾವಿಸಿದೆ - ಮೀರಾ
ಮೊದಲಿನಿಂದಲೂ ಲಿಂಗ ಬದಲಿಸಬೇಕೆಂದುಕೊಂಡಿದ್ದೆ. 2012ರಲ್ಲಿ ಯಾರೋ ಲಿಂಗ ಬದಲಿಸಿದ್ದಾರೆಂದು ಸುದ್ದಿಯಲ್ಲಿ ಓದಿದ್ದೆ. ಆಗಿನಿಂದ ಇದೆಲ್ಲ ಎಲ್ಲಿ ಹೇಗೆ ನಡೆಯುತ್ತದೆ ಎಂದು ಯೋಚಿಸಿದ್ದೆ. ಆಮೇಲೆ ಯೂಟ್ಯೂಬ್ ಮೂಲಕ ತಿಳಿಯಿತು. ದೆಹಲಿಯಲ್ಲಿ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡುವ ವೈದ್ಯರಿದ್ದಾರೆ. ನಾನು ಅಲ್ಲಿಗೆ ಹೋಗಿ ಚಿಕಿತ್ಸೆ ಪಡೆದುಕೊಂಡೆ. 2019ರಿಂದ ಚಿಕಿತ್ಸೆ ಪ್ರಾರಂಭವಾಯಿತು. ಕೊನೆಯ ಶಸ್ತ್ರಚಿಕಿತ್ಸೆ 2021ರಲ್ಲಿ ನಡೆಯಿತು. ನಾನು ಹುಡುಗಿಯಾಗಿ ಹುಟ್ಟಿದೆ ಆದರೆ ನಾನು ಹುಡುಗಿಯಾಗಿಲ್ಲ, ನಾನು ಹುಡುಗ ಎಂದು ಭಾವಿಸಿದೆ. ಆದ್ದರಿಂದ ನಾನು ನನ್ನ ಲಿಂಗವನ್ನು ಬದಲಾಯಿಸಿದೆ. ನನ್ನ ವಿದ್ಯಾರ್ಥಿನಿ ಕಲ್ಪನಾ ಅವರನ್ನು 2 ದಿನಗಳ ಹಿಂದೆ ವಿವಾಹವಾದೆ. ಈಗ ನಮ್ಮ ಕುಟುಂಬ ಸದಸ್ಯರು ಸಂತೋಷವಾಗಿದ್ದಾರೆ ಎಂದರು.

ವಧು ಕಲ್ಪನಾ ಮಾತನಾಡಿ, ನನ್ನ ಶಾಲೆಯಲ್ಲಿ ದೈಹಿಕ ಶಿಕ್ಷಕಿ ಮೀರಾ ಎಂಬುವರಿದ್ದರು. ಅವರು 10ನೇ ತರಗತಿಯಿಂದ ನನಗೆ ಕ್ರೀಡೆಯನ್ನು ಉಣಬಡಿಸಿದ್ದರು. ನನ್ನ ಕ್ರೀಡೆ ಕಬಡ್ಡಿ ಮತ್ತು ನಾನು ಇಂದು ಏನಾಗಿದ್ದರೂ ನನಗೆ ಪತಿಯಾದ ಆರವ್ ಕಾರಣ. ನಾನು ಬಯಸುತ್ತೇನೆ ಎಂದು ಕಲ್ಪನಾ ಹೇಳಿದರು. ಅವರು ಸರ್ಜರಿ ಮಾಡಿಸಿಕೊಳ್ಳದಿದ್ದರೂ ನಾನು ಅವನನ್ನು ಮದುವೆಯಾಗಲು ಸಿದ್ಧನಾಗಿದ್ದೆ. ಆದರೆ ನಾವು ಗುರು ಮತ್ತು ಶಿಷ್ಯ. ಗುರುಗಳು ಶಿಷ್ಯನನ್ನು ಮದುವೆಯಾದವರು ಎಂದು ಜನರು ಹೇಳುತ್ತಾರೆ. ನನ್ನ ಕುಟುಂಬ ಸದಸ್ಯರು ಮತ್ತು ಕುಟುಂಬದೊಂದಿಗೆ ಮಾತನಾಡಿದ್ದು ಅವರು ಒಪ್ಪಿಕೊಂಡರು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT