ತಿರುವನಂತಪುರಂ: ಕೇರಳದಲ್ಲಿ ಸಿಪಿಐ ಮಾರ್ಕ್ಸಿಸ್ಟ್ ನೇತೃತ್ವದ ಸರ್ಕಾರ, ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆಯಿಂದ ರಾಜ್ಯಪಾಲರನ್ನು ವಜಾಗೊಳಿಸುವುದಕ್ಕಾಗಿ ಪ್ರಕಟಿಸಿರುವ ಸುಗ್ರೀವಾಜ್ಞೆಯನ್ನು ರಾಜ್ಯಪಾಲರಿಗೇ ಕಳುಹಿಸಿದೆ.
ಸುಗ್ರೀವಾಜ್ಞೆಯನ್ನು ಅನುಮೋದನೆಗಾಗಿ ಸರ್ಕಾರ ಅದನ್ನು ರಾಜಭವನಕ್ಕೆ ಕಳುಹಿಸಿಕೊಟ್ಟಿದ್ದು, ಈ ಸಂಬಂಧ ಇತ್ತೀಚೆಗಷ್ಟೇ ಸಚಿವ ಸಂಪುಟ ನಿರ್ಧಾರ ಕೈಗೊಂಡಿತ್ತು.
ಇದನ್ನೂ ಓದಿ: ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ: ಕೇರಳ ರಾಜ್ಯಪಾಲರ ಇಬ್ಬರು ಕಾನೂನು ಸಲಹೆಗಾರರ ರಾಜೀನಾಮೆ
ರಾಜಭವನವೂ ಸರ್ಕಾರದ ಸುಗ್ರೀವಾಜ್ಞೆ ತಲುಪಿರುವುದನ್ನು ದೃಢಪಡಿಸಿದೆ. ಸರ್ಕಾರ ಹಾಗೂ ರಾಜ್ಯಪಾಲರ ನಡುವೆ ಆಗಾಗ್ಗೆ ಹಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯ ತಿಕ್ಕಾಟ ಇರುವುದರಿಂದ ಸರ್ಕಾರದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಶೀಘ್ರವೇ ಅಂಕಿತ ಹಾಕುವುದು ಅನುಮಾನವಾಗಿದೆ.
ಇದನ್ನೂ ಓದಿ: ಯಾವುದೇ ಉಪಕುಲಪತಿಗಳನ್ನೂ ವಜಾಗೊಳಿಸಿಲ್ಲ; ಗೌರವಾನ್ವಿತ ನಿರ್ಗಮನಕ್ಕೆ ಆಯ್ಕೆ ನೀಡಲಾಗಿದೆ- ಕೇರಳ ರಾಜ್ಯಪಾಲ
ಪಿಣರಾಯಿ ವಿಜಯನ್ ಪಕ್ಷದ ನಡೆಯನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ತೀವ್ರವಾಗಿ ಖಂಡಿಸಿವೆ. ವಿಪಕ್ಷಗಳು ಸಚಿವ ಸಂಪುಟದ ನಿರ್ಧಾರವನ್ನು ಕೇರಳದ ವಿವಿಗಳನ್ನು ಕಮ್ಯುನಿಸ್ಟ್ ಕೇಂದ್ರಗಳನ್ನಾಗಿ ಮಾರ್ಪಡಿಸುವ ಯತ್ನ ಎಂದು ಆರೋಪಿಸಿವೆ.