ಇಂದ್ರೇಶ್ ಕುಮಾರ್ 
ದೇಶ

ಪೂರ್ವಜರು, ಸಂಸ್ಕೃತಿ, ಸಂಪ್ರದಾಯ ಪರಿಗಣಿಸಿದರೆ ಭಾರತದಲ್ಲಿರುವ ಶೇ 99ರಷ್ಟು ಮುಸಲ್ಮಾನರು ‘ಹಿಂದೂಸ್ತಾನಿ’ಗಳೇ!

ಭಾರತದ ಶೇ.99 ರಷ್ಟು ಮುಸ್ಲಿಮರು ತಮ್ಮ ಪೂರ್ವಜರು, ಸಂಸ್ಕೃತಿ, ಸಂಪ್ರದಾಯಗಳು ಮತ್ತು ತಾಯ್ನಾಡಿನಿಂದ “ಹಿಂದೂಸ್ಥಾನಿ” ಆಗಿದ್ದಾರೆ ಎಂದು ಆರ್‌ಎಸ್‌ಎಸ್ ಮುಖಂಡ ಇಂದ್ರೇಶ್ ಕುಮಾರ್ ಭಾನುವಾರ ಹೇಳಿಕೆ ನೀಡಿದ್ದಾರೆ.

ಥಾಣೆ: ಭಾರತದ ಶೇ.99 ರಷ್ಟು ಮುಸ್ಲಿಮರು ತಮ್ಮ ಪೂರ್ವಜರು, ಸಂಸ್ಕೃತಿ, ಸಂಪ್ರದಾಯಗಳು ಮತ್ತು ತಾಯ್ನಾಡಿನಿಂದ “ಹಿಂದೂಸ್ಥಾನಿ” ಆಗಿದ್ದಾರೆ ಎಂದು ಆರ್‌ಎಸ್‌ಎಸ್ ಮುಖಂಡ ಇಂದ್ರೇಶ್ ಕುಮಾರ್ ಭಾನುವಾರ ಹೇಳಿಕೆ ನೀಡಿದ್ದಾರೆ.

ಥಾಣೆ ಜಿಲ್ಲೆಯ ಉತ್ತಾನ್‌ನಲ್ಲಿರುವ ರಾಂಭೌ ಮಲ್ಗಿ ಪ್ರಬೋಧಿನಿಯಲ್ಲಿ ಆರ್‌ಎಸ್‌ಎಸ್‌ನ ಮುಸ್ಲಿಂ ವಿಭಾಗವಾದ ಮುಸ್ಲಿಂ ರಾಷ್ಟ್ರೀಯ ಮಂಚ್ (ಎಂಆರ್‌ಎಂ) ಕಾರ್ಯಕರ್ತರ ಎರಡು ದಿನಗಳ ರಾಜ್ಯ ಮಟ್ಟದ ಕಾರ್ಯಾಗಾರದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಇಂದ್ರಕುಮಾರ್ ಮಾತನಾಡಿದ ಅವರು, ಭಾರತೀಯರಿಗೆ ಸಾಮಾನ್ಯ ಪೂರ್ವಜರಿದ್ದಾರೆ, ಆದ್ದರಿಂದ ಅವರ ಡಿಎನ್‌ಎ ಸಾಮಾನ್ಯವಾಗಿದೆ ಎಂದು ಈ ಹಿಂದೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವ್ಯಕ್ತಪಡಿಸಿದ ಅಭಿಪ್ರಾಯವನ್ನು ಅವರು ಬೆಂಬಲಿಸಿದರು.

ಪವಿತ್ರ ಕುರಾನ್‌ನ ನಿರ್ದೇಶನಗಳು ಮತ್ತು ತತ್ವಗಳ ಪ್ರಕಾರ ನಾವು ನಮ್ಮ ರಾಷ್ಟ್ರದ ಕಡೆಗೆ ನಮ್ಮ ಕರ್ತವ್ಯವನ್ನು ಸರ್ವೋಚ್ಚ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಪರಿಗಣಿಸಬೇಕು ಎಂದು ಕುಮಾರ್ ಉಲ್ಲೇಖಿಸಿದ್ದಾರೆ.

‘ಇಂದ್ರೇಶ್ ಕುಮಾರ್ ಅವರು ಸಮಾನ ಡಿಎನ್ಎ ಕುರಿತ ಭಾಗವತ್ ಅವರ ಹೇಳಿಕೆ ಉಲ್ಲೇಖಿಸಿ ಇದರಲ್ಲಿ ‘ಡಿ’ ಎಂಬುದು ಕನಸು (ಡ್ರೀಮ್ಸ್), ‘ಎನ್‌’ –ರಾಷ್ಟ್ರ (ನೇಷನ್‌) ‘ಎ‘ –ಪೂರ್ವಜರನ್ನು (ಆನ್‌ಸೆಸ್ಟರ್ಸ್‌) ಬಿಂಬಿಸಲಿದೆ ಎಂದರು’ ಎಂದು ಹೇಳಿಕೆ ತಿಳಿಸಿದೆ.

‘ನಮ್ಮ ಪೂರ್ವಜರು ಸಮಾನರೇ ಆಗಿದ್ದಾರೆ. ಮೂಲವೂ ಒಂದೇ ರಾಷ್ಟ್ರವಾಗಿದೆ. ಹೀಗಾಗಿ, ನಮ್ಮ ಡಿಎನ್‌ಎ ಕೂಡಾ ಒಂದೇ ಆಗಿದೆ’ ಎಂದು ಆರ್‌ಎಸ್‌ಎಸ್‌ನ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರು ಆಗಿರುವ ಇಂದ್ರೇಶ್ ಕುಮಾರ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

SCROLL FOR NEXT